ಎನ್ಆರ್ಎನ್ ಮೂರ್ತಿ ಬರ್ತಿದಾರೆ, ದಾರಿಬಿಡಿ

ವಿಶ್ವ ಕನ್ನಡ ಸಮ್ಮೇಳನವನ್ನು ಸಾಹಿತಿ, ಕವಿ ಪುಂಗವ, ವಿಚಾರವಾದಿ, ಚಿಂತಕರೇ ಉದ್ಘಾಟಿಸಬೇಕು ಎಂಬ ನಿಯಮ ಇಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಹಿತ್ಯಕ್ಕೇ ಮೀಸಲಾದ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ನಮ್ಮ ನಿಘಂಟು ತಜ್ಞ ಜಿ ವಿ ವೆಂಕಟಸುಬ್ಬಯ್ಯ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದು ಯೋಗ್ಯ ಮತ್ತು ಸಾಕು.
ಎನ್ಆರ್ಎನ್ ರಿಂದ ಏನ್ ಕಲಿಬೇಕು, ಏನ್ ಬೇಡ?
ಉದ್ಘಾಟನೆ ಮಾಡುವುದಕ್ಕೆ ಮೂರ್ತಿಗಳು ಸರಕಾರಕ್ಕೆ ಅರ್ಜಿ ಹಾಕಿಕೊಂಡಿರಲಿಲ್ಲ. ಸ್ವತಃ ಸರಕಾರವೇ ಅವರಿಗೆ ಆಹ್ವಾನ ಕೊಟ್ಟಿದೆ. ಕನ್ನಡಕ್ಕೆ ಅವರೇನು ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಮೂರ್ತಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವವರಿಗೆ ಇದು ಗೊತ್ತಿರಲಿ. ಒಂದು ಕಾದಂಬರಿ, ನಾಲಕ್ಕು ವಿಮರ್ಶೆ, ಹತ್ತಾರು ಭಾಷಣ ಮಾಡಿರುವ ಅಪ್ಪಟ ಕನ್ನಡಿಗರು ಮೂರ್ತಿ ಅವರ ವಿರುದ್ಧ ಚಳವಳಿ ನಡೆಸುತ್ತಿರುವುದರ ಹಿಂದೆ ಏನೋ ಒಂದು ಪರಿಕಲ್ಪನೆ ಇದೆ.
ಇಂಥ ಪರಿಕಲ್ಪನೆಗಳಿಂದ ಕನ್ನಡ ನಾಡಿಗೆ ಏನೂ ಪ್ರಯೋಜನವಿಲ್ಲ. ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ ಜಾಗತಿಕ ಮಟ್ಟದ ಲಾಭದಾಯಕ ಕಂಪನಿಯನ್ನು ತೆರೆದು ಸೈ ಎನಿಸಿಕೊಂಡ ಮೂರ್ತಿ ಅವರು ಹಿಂದೆ ಮುಂದೆ ನೋಡದೆ ಉದ್ಘಾಟನೆ ಜವಾಬ್ದಾರಿ ಹೊತ್ತುಕೊಂಡು ಸಮ್ಮೇಳನ ಸಾಂಗವಾಗಿ ನಡೆಯಲು ದಾರಿ ತೋರಲಿ. ಇತರರು ಅವರಿಗೆ ದಾರಿಬಿಡಿ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]












Click it and Unblock the Notifications