ಮತ್ತೂರಲ್ಲಿ ಸೋಮಯಾಗ : ದುರುದ್ದೇಶಪೂರಿತ ಅಪಪ್ರಚಾರ
ಇತ್ತೀಚಿಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಪ್ರಾಣಿಬಲಿಯ ವಿಷಯ ರಾತ್ರೋ ರಾತ್ರಿ 'ರಾಜ್ಯದ ಸಮಸ್ಯೆ' ಎಂಬಂತೆ ವೈಭವದ ಪ್ರಚಾರ ಪಡೆಯುತ್ತಿರುವುದು ದುರಾದೃಷ್ಟಕರ ಮತ್ತು ವಿಷಾದನೀಯ.
ಮೀರ್ ಸಾಧಕ್ ನಂತಹವರ ಕೆಲಸವೂ ಇದರಲ್ಲಿ ಅಡಗಿರುವುದರಲ್ಲಿ ಅನುಮಾನವಿದೆ. ಇನ್ನೊಂದು ವಿಷಯ, ಇಲ್ಲಿರುವುದು ಬ್ರಾಹ್ಮಣರೆಂದರೆ ಯಾವುದೇ ವಿವಾದಕ್ಕೀಡುವಂತಹ ಕೆಲಸಗಳನ್ನು ಮಾಡದವರು, ಒಳ್ಳೆಯ ಕೆಲಸಗಳನ್ನೇ ಮಾಡುತ್ತಾರೆ ಎಂದು ಸಮಾಜದ ಒಂದು ದೊಡ್ಡ ಗುಂಪು ಅಪೇಕ್ಷಿಸುತ್ತಿರುವುದು ಒಳ್ಳೆಯ ವಿಚಾರ.
ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ದೃಷ್ಟಿಕೋನವಿರುತ್ತದೆ. ರಾಜ್ಯದ ಹಲವಾರು ಕಡೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಮಾರಿ ಹಬ್ಬವಾಗಲೀ ಅಥವಾ ಕೋಳಿಗಳ ಬಲಿಗಳಾಗಲೀ, ಅವುಗಳ ಹಿಂದೆ ಯಾವುದೊ ಒಂದು ನಂಬಿಕೆ ಮನೆ ಮಾಡಿರುತ್ತದೆ. ನಮ್ಮ ನಂಬಿಕೆಗಳ ವಿರುದ್ಧ ನಮ್ಮ ಚಿಂತನೆಗಳು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೆಲವು ಸಂದರ್ಭಗಳಲ್ಲಿ ಒಲ್ಲದ ಮನಸ್ಸಿನಿಂದಲೇ ಕೆಲವು ಪದ್ದತಿಗಳನ್ನು ಅನುಸರಿಸಬೇಕಿರುತ್ತದೆ. [ಶಿವಮೊಗ್ಗದ ಸುಸಂಸ್ಕೃತ ಗ್ರಾಮ ಮತ್ತೂರಲ್ಲಿ ಇದೆಂಥ ಅನಿಷ್ಟ!]

ಇಲ್ಲಿರುವ ಇನ್ನೊಂದು ವಿಚಾರ ಏನೆಂದರೆ, ಒಂದು ನಿರ್ದಿಷ್ಟ ನಂಬಿಕೆಯುಳ್ಳ ಜನರು ಅವರ ನಂಬಿಕೆ ಆಧಾರದ ಮೇಲೆ ಮಾಡಿದ ಯಾಗವನ್ನು, ಇಡೀ ಮತ್ತೂರಿನ ಕಾರ್ಯಕ್ರಮವೆಂದು ತೋರಿಸಿ, ಸಿಕ್ಕಿದ ಅವಕಾಶವೆಂದು ಸಂಸ್ಕೃತ, ವೇದ ಇನ್ನೂ ಮುಂತಾದ ವಿಷಯಗಳಿಗೆ ಹೆಸರುವಾಸಿಯಾದ ಮತ್ತೂರಿಗೆ, ಇಡೀ ಸಂಕೇತಿ ಜನಾಂಗದ ಹೆಸರಿಗೆ ಮಸಿ ಬಳಿಯುವ ದುರ್ಬುದ್ಧಿ ಯಾಕೆ?
ಇದಕ್ಕೂ ಮಿಗಿಲಾದ ವಿಷಯವೆಂದರೆ, ಯಾಗದ ಸಮಯದಲ್ಲಿ ತುಪ್ಪವನ್ನು ಅಗ್ನಿಗೆ ಅರ್ಪಿಸಲು ಬಳಸುವ ಸೃಕ್ - ಸೃವದ ಚಿತ್ರಗಳನ್ನು ಮಾಂಸ ಎಂದು ಅಪಪ್ರಚಾರ ಮಾಡುವುದು ಏನನ್ನು ಬಿಂಬಿಸುತ್ತದೆ? ಒಳ್ಳೊಳ್ಳೆಯ ಹಣ್ಣುಗಳಿರುವ ಮರಗಳಿಗೇ ಜನ ಕಲ್ಲು ಹೊಡೆಯುವುದು ನಿಜವಾದರೂ ಮರವನ್ನೇ ಬೋಳಿಸುವ ದುರುದ್ದೇಶದ ಕೆಲಸ ಖಂಡಿತ ಸರಿಯಲ್ಲ. [ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?]
ಅಕಸ್ಮಾತ್, ಯಾಗದಲ್ಲಿ ಮಾಂಸದ ಬಳಕೆಯಾಗಿದ್ದೇ ಆದಲ್ಲಿ, ಹವಿಸ್ಸಿನ ರೂಪದಲ್ಲಿ ಸಣ್ಣ ತುಣುಕನ್ನು ಅರ್ಪಿಸಿರಬಹುದು. ಆದರೆ ಈ ಸುದ್ದಿಗೆ ನೀಡಿರುವ ಮಹತ್ವ, ಲಕ್ಷಾಂತರ ಗೋಹತ್ಯೆಗಳ ವಿಷಯದಲ್ಲಿ ನೀಡದಿರುವುದು ಹಾಸ್ಯಾಸ್ಪದ. ಹಾಗೇನಾದರೂ ಪ್ರಾಣಿ ಹತ್ಯೆಯೇ ಪ್ರಮುಖವಾಗಿದ್ದಲ್ಲಿ ಪ್ರತಿವರ್ಷವೂ ಸೋಮಯಾಗವೇ ನಡೆಯಬಹುದಾದ ಹೊಮವಾಗಬೇಕಿತ್ತು. ಆದರೆ ಕಳೆದ 15-20 ವರ್ಷಗಳಲ್ಲಿ ನನಗೆ ತಿಳಿದ ಮಟ್ಟಿಗೆ ನಡೆದಿರುವುದು ಇದು ಎರಡನೇ ಸಲವಷ್ಟೇ.
ಯಾವುದೇ ವಿಷಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು, ಜನರ ವೈಯಕ್ತಿಕ ನಂಬಿಕೆಗಳನ್ನು ಒಂದು ಜನಾಂಗದ ಅಥವಾ ಇಡೀ ಊರಿನ ವಿಷಯಗಳ ರೀತಿಯಲ್ಲಿ ಬಿಂಬಿಸುವುದು ಅಕ್ಷಮ್ಯ. ಈ ವಿಷಯದಲ್ಲಿ ಮುಕ್ತ ಚರ್ಚೆಗೆ ಖಂಡಿತ ಅವಕಾಶವಿದೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications