ಕೆ.ಆರ್.ನಾರಾಯಣನ್ : ಹಂತಹಂತ ಮೇಲೇರಿದ ಕೇರಳದ ದಲಿತ
ಕೆ. ಆರ್. ನಾರಾಯಣನ್ 1920ರ ಅಕ್ಟೋಬರ್ 27ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಉಳವನೂರು ಗ್ರಾಮದಲ್ಲಿ ನಾಟಿ ಔಷಧ ವೈದ್ಯ ರಾಮನ್ ವೈದ್ಯನ್ ಪುತ್ರರಾಗಿ ಜನಿಸಿದರು. ದಿನಂಪ್ರತಿ 10 ಮೈಲು ನಡೆದು ಶಾಲೆಗೆ ಹೋಗುತ್ತಿದ್ದ ಅವರು ತಿರುವಾಂಕೂರು ವಿಶ್ವವಿದ್ಯಾಲಯ ಇಂಗ್ಲಿಷ್ ಸ್ನಾತಕೋತ್ತರ ಪದವಿಯಲ್ಲಿ ಇಡೀ ವಿವಿಗೆ ಮೊದಲಿಗರಾಗಿ ಉತ್ತೀರ್ಣರಾದ ನಂತರ ಅಲ್ಲೇ ಉಪನ್ಯಾಸಕರಾದರು. ನಂತರ ‘ಹಿಂದೂ’ ಹಾಗೂ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದರು. ‘ಸೋಷಿಯಲ್ ವೆಲ್ಫೇರ್’ ಪತ್ರಿಕೆಗೆ ಲಂಡನ್ ಬಾತ್ಮೀದಾರರಾಗಿ ಕೆಲಸ ನಿರ್ವಹಿಸಿದರು.
ಪತ್ರಕರ್ತರಾಗಿ ನಾರಾಯಣನ್ ಮಹಾತ್ಮ ಗಾಂಧಿಯವರ ಸಂದರ್ಶನ ಮಾಡಬಯಸಿ ಅದರಲ್ಲಿ ಯಶಸ್ವಿಯೂ ಆದರು. ತಿರುವಾಂಕೂರು ವಿವಿಯಲ್ಲಿ ಪ್ರಥಮ ರ್ಯಾಂಕ್ನಲ್ಲಿ ಉತ್ತೀರ್ಣರಾದರೂ ಅವರು ಹಿಂದುಳಿದವರು ಎಂಬ ಕಾರಣಕ್ಕೆ ಉಪನ್ಯಾಸಕ ಹುದ್ದೆ ನಿರಾಕರಿಸಲಾಯಿತು. ಬದಲಿಗೆ ಗುಮಾಸ್ತೆ ಹುದ್ದೆ ನೀಡಲಾಯಿತು. ವ್ಯಗ್ರರಾದ ನಾರಾಯಣನ್ ಪದವಿ ಸ್ವೀಕರಿಸಲು ನಿರಾಕರಿಸಿದರು. 50 ವರ್ಷಗಳ ನಂತರ ಅವರು ಉಪರಾಷ್ಟ್ರಪತಿಯಾದಾಗ ಇದೇ ವಿವಿ ಅವರಿಗೆ ಪದವಿ ಸ್ವೀಕರಿಸುವಂತೆ ಮತ್ತೆ ಕೋರಿತು. ನಾರಾಯಣನ್ ಸಂತೋಷದಿಂದ ಆ ಕೋರಿಕೆ ಮನ್ನಿಸಿದರು.
1949ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆ. ರಂಗೂನ್, ಟೋಕಿಯಾ, ಲಂಡನ್, ಆಸ್ಟ್ರೇಲಿಯಾ ಮತ್ತು ಹನೋಯಿಗಳಲ್ಲಿ ಸೇವೆ ಸಲ್ಲಿಕೆ. ಬರ್ಮಾದಲ್ಲಿ ಮಾರ್ಕ್ ಟ್ವಿಂಟ್ ಅವರ ಭೇಟಿ. ವಿವಾಹದ ನಂತರ ಟ್ವಿಂಟ್ ತಮ್ಮ ಹೆಸರನ್ನು ಉಷಾ ಎಂದು ಬದಲಾಯಿಸಿಕೊಂಡರು. ನಂತರ ನಾರಾಯಣನ್ ಕೆಲಕಾಲ ಬೋಧನಾವೃತ್ತಿ ನಿರ್ವಹಿಸಿದರು. 1967ರಲ್ಲಿ ಥಾಯ್ಲೆಂಡ್ನಲ್ಲಿ ಭಾರತ ರಾಯಭಾರಿಯಾಗಿ ನೇಮಕ. ನಂತರ ಇದೇ ಹುದ್ದೆಯಲ್ಲಿ ಚೀನಾದಲ್ಲಿ ನಂತರ ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ನೇಮಕ. ಬಳಿಕ ಜವಾಹರಲಾಲ್ ನೆಹರು ವಿವಿ ಕುಲಪತಿ ಅಮೆರಿಕದಲ್ಲಿ ಭಾರತ ರಾಯಭಾರಿಯಾಗಿ ನೇಮಕ.
ಇಂದಿರಾಗಾಂಧಿಯವರ ಮನವಿ ಮೇರೆಗೆ ರಾಜಕೀಯ ಪ್ರವೇಶ. 1984, 1989 ಮತ್ತು 1991ರಲ್ಲಿ ಸತತ ಮೂರು ಬಾರಿ ಕೇರಳದ ಒಟ್ಟಪಾಲಂನಿಂದ ಲೋಕಸಭೆ ಪ್ರವೇಶ. ರಾಜೀವ್ ಗಾಂಧಿ ಸಂಪುಟದಲ್ಲಿ ಯೋಜನಾ ರಾಜ್ಯ ಸಚಿವ, ವಿದೇಶಾಂಗ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಕಾರ್ಯನಿರ್ವಹಣೆ.
1992ರ ಆಗಸ್ಟ್ 21ರಂದು ಉಪರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆ. 1992ರಿಂದ 1997ರವರೆಗೆ ರಾಜ್ಯಸ ಸಭಾಪತಿಯಾಗಿ ಕಾರ್ಯನಿರ್ವಹಣೆ.
1997ರಲ್ಲಿ ದೇಶದ 10ನೇ ರಾಷ್ಟ್ರಪತಿಯಾಗಿ ಆಯ್ಕೆ. ಸಂಸ್ಕೃತಿಯ ಪರಿಚಯ ಇಲ್ಲ ಎಂಬ ಕಾರಣಕ್ಕೆ ಆರ್ಎಸ್ಎಸ್ ಇವರನ್ನು ವಿರೋಧಿಸಿತ್ತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಎದುರಾಳಿಯಾಗಿದ್ದರು. ಆದರೆ ನಾರಾಯಣನ್ ಶೆ.95ಕ್ಕೂ ಹೆಚ್ಚು ಮತಗಳಿಸಿ ಆಯ್ಕೆಯಾಗಿದ್ದರು. ಬಡಕುಟುಂಬದಲ್ಲಿ ಜನಿಸಿದರೂ ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಮೇಲೇರಿದ ನಾರಾಯಣನ್ ಶಿಕ್ಷಣ ತಜ್ಞ, ಆಡಳಿತಗಾರ, ಪತ್ರಕರ್ತ, ರಾಜತಂತ್ರಜ್ಞ ಹಾಗೂ ರಾಜ ನಾಯಕರಾಗಿ ಹೊರಹೊಮ್ಮಿದ್ದರು.
ದೇಶ ವಿದೇಶಗಳ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸದಸ್ಯತ್ವ, ಗೌರವ, ಫೆಲೋಷಿಪ್ ಪಡೆದಿದ್ದರು. ಬೆಂಗಳೂರಿನ ಜವಾಹರಲಾಲ್ ನೆಹರೂ ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರದ ಗೌರವ ಫೆಲೋಷಿಪ್ ಸಹ ಪಡೆದಿದ್ದರು. ಅಮೆರಿಕ ಹಾಗೂ ಆಸ್ಟ್ರೇಲಿಯಾ ವಿವಿಗಳ ಗೌರವ ಡಾಕ್ಟರೇಟ್, ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿವಿಯ ವಾಚಸ್ಪತಿ(ಡಿ.ಲಿಟ್) ಪದವಿ ಪಡೆದಿದ್ದರು.
(ಸ್ನೇಹ ಸೇತು : ವಿಜಯಕರ್ನಾಟಕ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications