Get Updates
Get notified of breaking news, exclusive insights, and must-see stories!

ಇಂದಿನಿಂದ ಬೀದರ್-ಯಶವಂತಪುರ ರೈಲು ಸಂಚಾರ; ವೇಳಾಪಟ್ಟಿ, ನಿಲ್ದಾಣ

ಬೆಂಗಳೂರು, ಅಕ್ಟೋಬರ್ 29: ನೈಋತ್ಯ ರೈಲ್ವೆ ಯಶವಂತಪುರ-ಬೀದರ್-ಯಶವಂತಪುರ ನಡುವೆ ಹೊಸ ವಾರದ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಅಕ್ಟೋಬರ್ 29ರಂದು ಬೀದರ್‌ನಿಂದ ರೈಲು ಸೇವೆ ಆರಂಭವಾಗಲಿದೆ.

ಬೆಂಗಳೂರು ನಗರದ ಯಶವಂತಪುರ ಮತ್ತು ಬೀದರ್ ನಡುವೆ ರೈಲು ನಂಬರ್ 16577/ 16578 ಸಂಚಾರ ನಡೆಸಲಿದೆ. ಉದ್ಘಾಟನಾ ರೈಲು ಸಂಖ್ಯೆ 07020 ಅಕ್ಟೋಬರ್ 29ರ ಶನಿವಾರ ಸಂಜೆ 4.30ಕ್ಕೆ ಬೀದರ್‌ನಿಂದ ಹೊರಡಲಿದೆ. ಮರುದಿನ ಬೆಳಗ್ಗೆ 7.30ಕ್ಕೆ ಯಶವಂತಪುರ ತಲುಪಲಿದೆ.

yesvantpur-bidar-train

ವೇಳಾಪಟ್ಟಿ, ನಿಲ್ದಾಣಗಳು; ಯಶವಂತಪುರದಿಂದ ನವೆಂಬರ್ 4ರಂದು ರೈಲು ನಂಬರ್‌ 16577 ಯಶವಂತಪುರ-ಬೀದರ್ ರೈಲು ಸಂಚಾರ ನಡೆಸಲಿದೆ. ಅಂದಿನಿಂದ ವಾರಕ್ಕೊಮ್ಮೆ ಸಂಚಾರ ನಡೆಸುವ ರೈಲುಗಳು ಸಾಮಾನ್ಯ ಸೇವೆ ಆರಂಭವಾಗಲಿದೆ.

ಉದ್ಘಾಟನಾ ದಿನದ ರೈಲು ಹುಮ್ನಾಬಾದ್, ಕಮಲಾಪುರ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಗೌರಿಬಿದನೂರು ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಯಶವಂತಪುರವನ್ನು ತಲುಪಲಿದೆ.

ವಿಶೇಷ ಉದ್ಘಾಟನಾ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿದೆ. ಇವುಗಳಲ್ಲಿ 1 ಎಸಿ ಟು ಟೈರ್, 2 ಎಸಿ ತ್ರಿ ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಗ್ ಕಮ್ ಬ್ರೇಕ್ ವ್ಯಾನ್, 1 ಲಗೇಜ್ ಕಮ್ ಬ್ರೇಕ್ ವ್ಯಾನ್ ವಿತ್ ಜನರೇಟರ್ ಬೋಗಿಯನ್ನು ಹೊಂದಿದೆ.

ರೈಲುಗಳ ಸಾಮಾನ್ಯ ಸೇವೆ ಆರಂಭವಾದ ಬಳಿಕ ರೈಲು ನಂಬರ್ 16578 ಬೀದರ್-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಈ ರೈಲು 2.40ಕ್ಕೆ ಬೀದರ್‌ನಿಂದ ಹೊರಡಲಿದ್ದು, ಮುಂಜಾನೆ 4 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.

ಬೀದರ್‌ನಿಂದ ಹೊರಡುವ ರೈಲು ಹುಮ್ನಾಬಾದ್, ಕಮಲಾಪುರ, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಗೌರಿಬಿದನೂರು, ಯಲಹಂಕ ಮೂಲಕ ಯಶವಂತಪುರಕ್ಕೆ ಆಗಮಿಸಲಿದೆ.

ರೈಲು ಸಂಖ್ಯೆ 16577 ರೈಲು ಯಶವಂತಪುರ-ಬೀದರ್ ನಡುವೆ ಸಂಚಾರ ನಡೆಸಲಿದೆ. ಯಶವಂತಪುರದಿಂದ ರಾತ್ರಿ 11.15ಕ್ಕೆ ಹೊರಡುವ ರೈಲು ಬೀದರ್‌ಗೆ ಮಧ್ಯಾಹ್ನ 1.30ಕ್ಕೆ ಆಗಮಿಸಲಿದೆ.

ಯಶವಂತಪುರದಿಂದ ಹೊರಡುವ ರೈಲು ಯಲಹಂಕ, ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಕಮಲಾಪುರ, ಹುಮ್ನಾಬಾದ್ ಮೂಲಕ ಬೀದರ್ ತಲುಪಲಿದೆ.

ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಈ ರೈಲು ಸಂಪರ್ಕಿಸಲಿದೆ. ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಈ ರೈಲು ಕಲಬುರಗಿ ಮೂಲಕ ಸಂಚಾರ ನಡೆಸುವುದರಿಂದ ಜಿಲ್ಲೆಯ ಜನರಿಗೆ ಸಹ ಅನುಕೂಲವಾಗಲಿದೆ.

ನೈಋತ್ಯ ರೈಲ್ವೆ ವಾರಕ್ಕೊಮ್ಮೆ ಸಂಚಾರ ನಡೆಸುವಂತೆ ಈ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಈ ರೈಲನ್ನು ಕಾಯಂಗೊಳಿಸಲು ಮತ್ತು ಪ್ರತಿದಿನ ಸಂಚಾರ ನಡೆಸುವಂತೆ ಮಾಡಲು ಶೀಘ್ರವೇ ಮನವಿ ಸಲ್ಲಿಸಲಾಗುತ್ತದೆ ಎಂದು ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+