Holi Festival 2024: ಮಂಗಳೂರಿನಿಂದ ನವದೆಹಲಿಗೆ ವಿಶೇಷ ರೈಲು ಸೇವೆ-ಸಮಯ, ಟಿಕೆಟ್ ದರ, ದಿನಾಂಕಗಳ ವಿವರ ತಿಳಿಯಿರಿ
ಮಂಗಳೂರು, ಮಾರ್ಚ್, 21: ಮಾರ್ಚ್ 25ರಂದು ದೇಶದೆಲ್ಲೆಡೆ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಈಗಾಗಲೇ ಹಲವು ಕಡೆಗಳಿಗೆ ವಿಶೇಷ ರೈಲು ಬಿಡಲಾಗಿದೆ. ಹಾಗೆಯೇ ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹಾಗಾದರೆ ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೋಳಿ ಹಬ್ಬ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಮಂಗಳೂರು-ನವದೆಹಲಿ ಏಕಮುಖ ಸಂಚಾರದ ವಿಶೇಷ ರೈಲು (Special ಸಂಚಾರ ಮಾಡಲಿದೆ. ಈ ರೈಲು ಮಾರ್ಚ್ 22ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮಧ್ಯಾಹ್ನ 2:50ಕ್ಕೆ ಹೊರಟು ಮಾರ್ಚ್ 24ರ ಸಂಜೆ 7:15ಕ್ಕೆ ನವದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣವನ್ನು ತಲುಪಲಿದೆ. ಇನ್ನು 06090 ಸಂಖ್ಯೆಯ ವಿಶೇಷ ರೈಲು 20 ಸ್ಲೀಪರ್ ಹಾಗೂ 2 ಸೆಕೆಂಡ್ ಕ್ಲಾಸ್ ಕೋಚ್ಗಳನ್ನು ಹೊಂದಿವೆ.

ಇನ್ನು ಈ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟು ಕೇರಳ ಮಾರ್ಗವಾಗಿ ಸಂಚಾರ ಮಾಡಲಿದೆ. ಕಣ್ಣೂರು, ಕೋಝಿಕ್ಕೋಡ್, ಶೋರನೂರು, ಪಾಲಕ್ಕಾಡ್, ಕೊಯ್ಯಮತ್ತೂರು, ತಿರಪ್ಪೂರು, ಈರೋಡ್, ಸೇಲಂ, ಜೋಲಾರ್ಪೇಟೆ, ಕಟ್ಪಾಡಿ, ಚಿತ್ತೂರು, ತಿರುಪತಿ, ರಾನಿಗುಂಟ, ಗುಡೂರು, ಓಂಗೋಲ್, ವಿಜಯವಾಡ, ವಾರಂಗಲ್, ಬಲ್ಹರ್ಷ, ನಾಗ್ಪುರ, ಬೇತುಲ್, ಇಟ್ರಾಸಿ, ಭೋಪಾಲ್, ಬಿನಾ, ಝಾನ್ಸಿ, ಗ್ವಾಲಿಯರ್, ಆಗ್ರಾ, ಮಥುರಾ ಇಲ್ಲೆಲ್ಲ ನಿಲುಗಡೆ ಆಗಲಿದೆ.
ಬುಲೆಟ್ ರೈಲು ಸೇವೆಯ ಮಹತ್ವದ ಮಾಹಿತಿ: ಭಾರತದಲ್ಲಿ ರೈಲ್ವೆ ವಲಯದಲ್ಲಿ ದೊಡ್ಡ ದೊಡ್ಡ ಅಭಿವೃದ್ಧಿಗಳು ಆಗುತ್ತಲೇ ಇವೆ. ಅದರಲ್ಲೂ ವಂದೇ ಭಾರತ್ ರೈಲು ಭಾರೀ ಪ್ರಸಿದ್ಧಿ ಪಡೆಯುತ್ತಿದೆ. ಇದೀಗ ಬಹುನಿರೀಕ್ಷಿತ ಬುಲೆಟ್ ರೈಲು ಸೇವೆ ಆರಂಭದ ಬಗ್ಗೆ ಅಶ್ವಿನಿ ವೈಷ್ಣವ್ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಹಾಗಾದರೆ ಆ ಮಾಹಿತಿ ಏನು ಎಂದು ಇಲ್ಲಿ ಗಮನಿಸಿ.
ರೈಸಿಂಗ್ ಭಾರತ್ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಅಹಮದಾಬಾದ್-ಮುಂಬೈ ನಡುವೆ 2026ರ ವೇಳೆಗೆ ದೇಶದ ಮೊದಲ ಬುಲೆಟ್ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದರು. ಭಾರತದ ಮೊದಲ ಬುಲೆಟ್ ರೈಲು 2026ರಲ್ಲಿ ಸಿದ್ಧವಾಗಲಿದ್ದು, ಸೂರತ್ನಿಂದ ಒಂದು ವಿಭಾಗದಲ್ಲಿ ಓಡಲಿದೆ ಎಂದು ಹೇಳಿದರು.
ಭಾರತೀಯ ರೈಲ್ವೇಯಲ್ಲಿ ಆಗುತ್ತಿರುವ ಬದಲಾವಣೆಗಳತ್ತ ಗಮನಸೆಳೆದ ರೈಲ್ವೆ ಸಚಿವರು, ಮೋದಿ ಸರ್ಕಾರದ ಬಹುದೊಡ್ಡ ಉದ್ದೇಶ ಪ್ರಯಾಣಿಕರ ಸುರಕ್ಷತೆಯಾಗಿದೆ ಎಂದು ಹೇಳಿದರು. ಮೊದಲ ಗುರಿ ಸುರಕ್ಷಿತ ಪ್ರಯಾಣ ಮತ್ತು ನಂತರ ಸೌಲಭ್ಯಗಳ ವಿಸ್ತರಣೆ ಮಾಡಲಾಗುತ್ತದೆ. 284 ಕಿಲೋ ಮೀಟರ್ ಬುಲೆಟ್ ಟ್ರೈನ್ ಟ್ರ್ಯಾಕ್ ಕಾಮಗಾರಿ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
ಈ ಅಂಕಿ ಅಂಶವು 10-12 ದಿನಗಳ ಹಿಂದೆ, ನಾನು ವಿಮರ್ಶೆ ಮಾಡಿದಾಗ. ಇತರ ದೇಶಗಳಲ್ಲಿ ಬುಲೆಟ್ ಟ್ರೈನ್ ಯೋಜನೆಯನ್ನು ಪೂರ್ಣಗೊಳಿಸಲು 20 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಭಾರತದಲ್ಲಿ ನೋಡಿ ಇದೆಲ್ಲಕ್ಕೂ ಉತ್ತಮ ಸ್ಥಿತಿ ಇದೆ ಎಂದಿದ್ದಾರೆ. ಬುಲೆಟ್ ರೈಲು ಆರಂಭವಾದ ನಂತರ ಇದು ದೇಶದ ಪ್ರಬಲ ಆರ್ಥಿಕ ವಲಯ ಆಗಲಿದೆ ಎಂದು ರೈಲ್ವೆ ಸಚಿವರು ಹೇಳಿದರು.
ಈ ರೈಲು ಮುಂಬೈನಿಂದ-ಅಹಮದಾಬಾದ್ಗೆ ಸಂಚರಿಸಲಿದ್ದು, ಮುಂಬೈ, ಥಾಣೆ, ವಾಪಿ, ಸೂರತ್, ವಡೋದರಾ, ಆನಂದ್ ಮತ್ತು ಅಹಮದಾಬಾದ್ ನಗರಗಳ ಜನರು ಈ ಮಾರ್ಗದಲ್ಲಿ ಪ್ರಯಾಣ ಮಾಡಲು ಸಾಧ್ಯ ಆಗುತ್ತದೆ. ಈ ಎಲ್ಲಾ ನಗರಗಳ ಆರ್ಥಿಕತೆಯನ್ನು ಒಂದೇ ವಲಯಕ್ಕೆ ಜೋಡಿಸಲಾಗುತ್ತದೆ.
ಭದ್ರತೆಯತ್ತ ಸರ್ಕಾರದ ಗಮನ
ಅಶ್ವಿನಿ ವೈಷ್ಣವ್ ಮಾತನಾಡಿ, ಮೋದಿ ಸರ್ಕಾರದ ಸಂಪೂರ್ಣ ಗಮನವು ಪ್ರಯಾಣಿಕರ ಸುರಕ್ಷತೆಯ ಮೇಲಿದೆ. ರೈಲು ಪ್ರಯಾಣವನ್ನು ಶೇಕಡಾ 100ರಷ್ಟು ಸುರಕ್ಷಿತ ಆಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ನಿರಂತರವಾಗಿ ತಂತ್ರಜ್ಞಾನವನ್ನು ನವೀಕರಣ ಮಾಡುತ್ತಿದ್ದೇವೆ. ಸುರಕ್ಷತೆಗಾಗಿ ಅತ್ಯಂತ ಪ್ರಮುಖವಾದ ತಂತ್ರಜ್ಞಾನವಾದ ಯಾಂತ್ರೀಕೃತಗೊಂಡ ರೈಲು ರಕ್ಷಣೆಯನ್ನು ತ್ವರಿತವಾಗಿ ವಿಸ್ತರಣೆ ಮಾಡಲಾಗುತ್ತಿದೆ ಎಂದರು.












Click it and Unblock the Notifications