Hogenakkal: ಬೆಂಗಳೂರಿನ ಸಮೀಪದಲ್ಲಿರುವ ಈ ಅದ್ಭುತ ಹೊಗೆನಕಲ್ ಜಲಪಾತವನ್ನು ಮಿಸ್ ಮಾಡಬೇಡಿ
ಈ ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ದೂರದ ಊರುಗಳಿಗೆ ಹೋಗಿ ಜಲಪಾತಗಳನ್ನು ನೋಡಲು ಸಾಧ್ಯವಿಲ್ಲದವರು ಇಲ್ಲೇ ಹತ್ತಿರದಲ್ಲಿರುವ ಹೊಗೇನಕಲ್ ಜಲಪಾತವನ್ನು ನೋಡಿಬನ್ನಿ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಈ ತಾಣ ಭಾರತದ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಧರ್ಮಪುರಿ ಜಿಲ್ಲೆಯಿಂದ 46 ಕಿ.ಮೀ ದೂರದಲ್ಲಿದೆ ಈ ಹೊಗೇನಕಲ್ ಜಲಪಾತ. ಬೆಂಗಳೂರಿನಲ್ಲಿರುವವರಿಗೆ ಹೊಗೇನಕಲ್ ಒಂದು ದಿನದ ಪ್ರವಾಸವಾಗಿದೆ. ಏಕೆಂದರೆ ಇದು ಬೆಂಗಳೂರಿನಿಂದ ಕೇವಲ 4 ಗಂಟೆಗಳ ಸಣ್ಣ ಪ್ರಯಾಣವಾಗಿದೆ. ಈ ಸಣ್ಣ ಪ್ರಯಾಣದಲ್ಲಿಯೇ ನೀವು ಅದ್ಭುತ ಪ್ರವಾಸದ ಅನುಭವ ಪಡೆಯಬಹುದು.

ತಮಿಳುನಾಡಿನ ಚೆನ್ನೈನಿಂದ ಬಹಳ ದೂರದಲ್ಲಿದೆ ಹೊಗೆನಕಲ್. ಈ ಜಲಪಾತವು ಚೆನ್ನೈ ನಗರದಿಂದ ಸುಮಾರು ಏಳು ಗಂಟೆಗಳ ದೂರದಲ್ಲಿದೆ. ಆದರೆ ಬೆಂಗಳೂರಿಗರಿಗೆ ಹೆಚ್ಚು ಹತ್ತಿರವಿದ್ದು, ಸಿಲಿಕಾನ್ ಸಿಟಿಯಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ನೆಮ್ಮದಿ ಬಯಸುವವರು ಒಮ್ಮೆ ಜಲಪಾತದ ಬಳಿ ಹೋಗಿ ನೀರಿನ ಜುಳು ಜುಳು ನಾದವನ್ನು ಆನಂದಿಸಬಹುದು.
ಹೊಗೇನಕಲ್ ಜಲಪಾತವು ಕಾವೇರಿ ನದಿಯಿಂದ ರೂಪುಗೊಂಡ ಜಲಪಾತಗಳ ಸರಣಿ. ಕಾವೇರಿಯು ಕಲ್ಲಿನ ಭೂಪ್ರದೇಶದಲ್ಲಿ ಹರಿದು ಜಲಪಾತ ಸೃಷ್ಟಿಸುತ್ತದೆ. ಇಲ್ಲಿ ನೀರು ಎತ್ತರದಿಂದ ಧುಮುಕುತ್ತದೆ ಮತ್ತು ಅದ್ಭುತವಾದ ದೃಶ್ಯವನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ನದಿಯು ತನ್ನ ಪೂರ್ಣ ಹರಿವಿನಲ್ಲಿದ್ದಾಗ ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಹೊಗೇನಕಲ್ ಜಲಪಾತದಲ್ಲಿನ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಸ್ನಾನ ಮಾಡಲು ಆಸಕ್ತಿ ಇರುವವರಿಗೆ ಗೊತ್ತುಪಡಿಸಿದ ಸ್ಥಳವಿದೆ. ಆದರೆ ಜಾಗವು ಕಿಕ್ಕಿರಿದಿದೆ. ಕೆಲವರು ಇದು ನೀರಿನ ಮಹಿಮೆ ಎಂದು ಹೇಳುತ್ತಾರೆ ಮತ್ತು ಕೆಲವರು ನೀರು ರಭಸವಾಗಿ ಬಂದು ಹೊಡೆಯುವ ರೀತಿ ಎಂದು ನಂಬುತ್ತಾರೆ. ಆದರೆ ಅವರವರ ನಂಬಿಕೆ ಅವರವರಿಗೆ.
ಬೋಟಿಂಗ್ ಮತ್ತು ತೆಪ್ಪದ ಪ್ರಯಾಣ
ಆ ತಪ್ಪದಲ್ಲಿ ಸವಾರಿ ಮಾಡಲು ಯಾರಿಗೆ ಇಷ್ಟವಾಗುವುದಿಲ್ಲ. ಇದಕ್ಕೂ ಇಲ್ಲಿ ಅವಕಾಶವಿದೆ. ಜಲಪಾತಗಳ ಮಧ್ಯೆ ತೆಪ್ಪದಲ್ಲಿ ಕುಳಿತು ತೆರಳುವಾಗ ಚುಮ್ಮುವ ನೀರಿನ ಹನಿಗಳು ಮತ್ತಷ್ಟು ಖುಷಿ ನೀಡುತ್ತವೆ. ಈ ತೆಪ್ಪದ ಸವಾರಿ ಜಲಪಾತವನ್ನು ಮತ್ತಷ್ಟು ಹತ್ತಿರದಿಂದ ನೋಡಲು ಅವಕಾಶ ನೀಡುತ್ತದೆ. ಹೊಗೇನಕಲ್ ಕಾಡುಗಳು ಮತ್ತು ಕಲ್ಲಿನ ಬೆಟ್ಟಗಳಿಂದ ಸುತ್ತುವರಿದ ಹಚ್ಚ ಹಸಿರಿನ ಪರಿಸರವಾಗಿದೆ. ಈ ಪ್ರದೇಶದ ರಮಣೀಯ ಸೌಂದರ್ಯವು ಜಲಪಾತದ ಆಕರ್ಷಣೆಯನ್ನು ಹೆಚ್ಚಿಸುತ್ತದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಸೂಕ್ತವಾದ ಸ್ಥಳವಾಗಿದೆ.
ಹೊಗೇನಕಲ್ ಜಲಪಾತದ ಸುತ್ತಲಿನ ಪ್ರದೇಶವು ಟ್ರೆಕ್ಕಿಂಗ್ ಮಾಡಲು ಒಳ್ಳೆಯ ಸ್ಥಳವಾಗಿದೆ. ಸುಂದರವಾದ ಗ್ರಾಮಾಂತರ ಪ್ರದೇಶದ ಮೂಲಕ ನಿಮ್ಮನ್ನು ಜಲಪಾತದ ಬಳಿಗೆ ಕರೆದೊಯ್ಯುವ ಹಲವಾರು ಟ್ರೆಕ್ಕಿಂಗ್ ಮಾರ್ಗಗಳಿವೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications