ಚನ್ನೆಕಲ್, ಚಂಡೆಮನೆ ಎಂಬ ಮಳೆಗಾಲದ ಜಲಪಾತ

ಬರಹ : ಆರ್.ಶರ್ಮಾ, ತಲವಾಟ
ಚಿತ್ರ : ಅರವಿಂದ ಗುಂಡೂಮನೆ ಬೆಂಗಳೂರು
ನೀರು ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧ. ಜುಳು ಜುಳು ಸದ್ದಿನೊಂದಿಗೆ ಸ್ವಚ್ಛವಾದ ಹರಿಯುವ ನೀರು ಕಂಡೊಡನೆ ಮನಸ್ಸು ಪುಳಕಗೊಳ್ಳುವುದು ಸಹಜ. ಕವಿಗಳು ನೀರಿನ ಮೇಲೆ ರಚಿಸಿದ ಕವಿತೆಗಳು ಲೆಕ್ಕವಿಲ್ಲದಷ್ಟು. ಹರಿವ ನದಿ ಜಲಪಾತವಾಗಿ ಬೀಳುವುದನ್ನು ಕಂಡು ರಚಿತವಾದ ಕವನಗಳ ಸಂಖ್ಯೆ ಅಗಣಿತ. ಜಲಪಾತಗಳ ಸೊಬಗು ಅಂತಹದ್ದು. ನೊರೆ ನೊರೆ ಹಾಲಿನಂತೆ ಧರೆಯಿಂದ ತೊರೆಗೆ ಬೀಳುವ ಜಲಪಾತದ ಸೊಬಗನ್ನ ಆಸ್ವಾದಿಸದಿರುವವರ ಸಂಖ್ಯೆ ಕಡಿಮೆ.
ಗುಡ್ಡ ಬೆಟ್ಟಗಳ ನಾಡು ಮಲೆನಾಡಿನಲ್ಲಿ ಜಲಪಾತಗಳ ಸಂಖ್ಯೆ ಅತಿ ಹೆಚ್ಚು. ವರ್ಷಪೂರ್ತಿ ಸೊಬಗನ್ನು ನೀಡುವ ಜಲಪಾತಗಳು ಒಂದೆಡೆಯಾದರೆ ಮಳೆಗಾಲ ಮತ್ತು ನಂತರದ ಮೂರ್ನಾಲ್ಕು ತಿಂಗಳುಗಳ ಕಾಲ ಬೀಳುವ ಜಲಪಾತದ ಸೊಬಗು ಮತ್ತೊಂದೆಡೆ. ಈ ವರ್ಷ ಶರಾವತಿ ಉಕ್ಕಿ ಹರಿದು ಸಮುದ್ರ ಸೇರುವ ತವಕದಲ್ಲಿದ್ದಾಗ ಜೋಗ ಜಲಪಾತದ ವೈಭವ ವರ್ಣಿಸಲಸದಳ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೋಗದ ಸೊಬಗನ್ನು ಸವಿದ ಜನರು ತಮ್ಮ ನೆನಪಿನಾಳದಲ್ಲಿ ಉಳಿಸಿಕೊಂಡಿದ್ದಾರೆ. ಬಿಳಿ ಹಾಲಿನ ಜಲಪಾತಕ್ಕೆ ತಲೆ ಒಡ್ಡಿ ಕುಳಿತುಕೊಳ್ಳುವ ಆಸೆ ಎಲ್ಲರಿಗೂ. ಆದರೆ ಈ ವರ್ಷದ ಅಬ್ಬರದ ಮಳೆಗಾಲದಿಂದ ಜೋಗ ಜಲಪಾತದ ರುದ್ರ ನರ್ತನ ಪ್ರವಾಸಿಗರನ್ನು ತನ್ನ ಹತ್ತಿರ ಬಿಟ್ಟುಕೊಳ್ಳಲಾರದಷ್ಟು ರಭಸ. ಜಲಪಾತ ನೀರಿನ ರಭಸಕ್ಕೆ ತಲೆಯೊಡ್ಡುವ ಆಸೆಯನ್ನು ಪೂರ್ಣಗೊಳಿಸಲೆಂಬಂತೆ ಜೋಗದಿಂದ ಭಟ್ಕಳ ತೆರೆಳುವ ಮಾರ್ಗದಲ್ಲಿ ಎರಡು ಜಲಪಾತಗಳನ್ನು ಪ್ರಕೃತಿ ನಿರ್ಮಿಸಿದೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅಲ್ಲಿಗೆ ತೆರೆಳುವವರ ಸಂಖ್ಯೆ ಕಡಿಮೆ. ಆ ಜಲಪಾತದ ಹೆಸರು ಚನ್ನೆಕಲ್ ಹಾಗೂ ಚಂಡೆಮನೆ ಫಾಲ್ಸ್.

ರಸ್ತೆಯಂಚಿನಲ್ಲಿ ಬಿಳಿ ಹಾಲಿನಂತೆ ನೊರೆ ನೊರೆಯಾಗಿ ಹರಿಯುವ ಮೂರು ಕಿಲೋಮೀಟರ್ ಅಂತರದಲ್ಲಿರುವ ಈ ಎರಡೂ ಜಲಪಾತಗಳ ವೀಕ್ಷಣೆ ಅತ್ಯಂತ ಸುಲಭ. ರಸ್ತೆಯಂಚಿನಲ್ಲಿಯೇ ಇವುಗಳ ವೀಕ್ಷಣೆ ಸಾಧ್ಯ. ಕಲ್ಲು ಬಂಡೆಗೆ ತಲೆ ಆನಿಸಿ ಗಂಟೆಗಟ್ಟಲೆ ಕುಳಿತುಕೊಳ್ಳಬಹುದು. ಮಳೆಗಾಲದ ಜಲಪಾತವಾದ್ದರಿಂದ ಸಪ್ಟೆಂಬರ್ ಅಂತ್ಯದವರೆಗೆ ಮಾತ್ರ ಆಸ್ವಾದಿಸಬಹುದು. ಜೋಗದಲ್ಲಿನ ಜಲಪಾತ ಕೈಯಲ್ಲಿ ಹಿಡಿಯುವ ಆಸೆಯನ್ನು ಇಲ್ಲಿ ಸುಲಭದಲ್ಲಿ ಈಡೇರಿಸಿಕೊಳ್ಳಬಹುದು. ಬಂಡೆಗಳನ್ನು ಹತ್ತುವ ಆಸೆಯಿದ್ದವರು ಜಲಪಾತದ ಮೂಲಕ್ಕೂ ತೆರಳಬಹುದು. ಪೋಟೊ ತೆಗೆಯಲು ಮಾತ್ರ ಸ್ವಲ್ಪ ಪರದಾಟಬೇಕಾಗುತ್ತದೆ. ಎಷ್ಟೆ ಹರಸಾಹಸ ಮಾಡಿದರೂ ಜಲಪಾತದ ಸಂಪೂರ್ಣ ದೃಶ್ಯವನ್ನು ಸೆರೆಹಿಡಿಯಲು ಕಂದಕ ಅಡ್ಡಿಯುಂಟು ಮಾಡುತ್ತದೆ ಎಂಬ ಒಂದು ಕಾರಣ ಹೊರತುಪಡಿಸಿದರೆ ಇವೆರಡು ಅವಳಿ ಜಲಪಾತ ನೋಡಲು ಜೋಗದಿಂದ 44 ಕಿಲೋಮೀಟರ್ ಬಂದಿರುವ ಸಾರ್ಥಕ ಭಾವದೊಂದಿಗೆ ತೆರಳಬಹುದು.
ಕರ್ನಾಟಕದ ಪ್ರಸಿದ್ಧ ಜಲಪಾತಗಳ ಛಾಯಾಂಕಣ
;-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications