ತುಳುನಾಡಿನ ಸಂಭ್ರಮದ 'ಢಕ್ಕೆಬಲಿ' ನಡಾವಳಿ

ಸನ್ನಿಧಾನದಲ್ಲಿ ಬ್ರಹ್ಮಸ್ವರೂಪಿಯಾಗಿರುವ ಖಡ್ಗೇಶ್ವರೀಗೆ ಮೊದಲ ಆದ್ಯತೆ. ಇಲ್ಲಿ ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲರ ಸಾನಿಧ್ಯವೂ ಇದೆ. ದಟ್ಟಾರಣ್ಯದಲ್ಲಿರುವ ಈ ಸಾನಿಧ್ಯದಲ್ಲಿ ರಾತ್ರಿಯ ಕಾಲದಲ್ಲಿ ಢಕ್ಕೆಬಲಿ ಸೇವೆ ಆರಂಭವಾಗುತ್ತದೆ. ಇಲ್ಲಿ ಮರಳೇ ಆಸನ. ಇಲ್ಲಿನ ಬೀಡಿನ ಅರಸರೆಂದು ಕರೆಯಲ್ಪಡುವ ವಂಶಸ್ಥರಿಗೆ ಚಾಪೆ, ಉಡುಪಿ ಅಷ್ಠಮಠಾಧೀಶರಿಗೆ ಚಪ್ಪಡಿ ಕಲ್ಲಿನ ವ್ಯವಸ್ಥೆ ಮಾತ್ರ ಇರುತ್ತದೆ. ಕರ್ಪೂರ ಮತ್ತು ದೊಂದಿ ದೀಪಗಳು ರಾತ್ರಿಯ ವೇಳೆ ಈ ಪ್ರದೇಶವನ್ನು ಬೆಳಗುವ ಪರಿಕರ.
ಸಂಜೆಯ ಬಳಿಕ ದೇವಾಲಯವು ಹೂ ಮತ್ತು ಹಿಂಗಾರಗಳಿಂದ ಅಲಂಕೃತಗೊಳ್ಳುತ್ತದೆ. ಅಲಂಕಾರದ ಬಳಿಕ ಇಲ್ಲಿನ ದರ್ಶನ ಪಾತ್ರಿಗಳು ಮಡಿಯನ್ನುಟ್ಟು ಬಂದ ನಂತರ ಸನ್ನಿಧಾನದಲ್ಲಿ ಪ್ರಸನ್ನ ಪೂಜೆಗಳು ನಡೆಯುತ್ತದೆ. ಆ ನಂತರ ವೈದ್ಯ (ನಾಗಪಾತ್ರಿಯನ್ನು ಆಡಿಸುವವರು) ಕುಟುಂಬದವರು ಬಾರಿಸುವ ಕಂಚಿನ ಢಕ್ಕೆಯ ನಿನಾದಕ್ಕೆ ನಾಗಪಾತ್ರಿಗಳಲ್ಲಿ ಆವೇಶ ಮೈದೆಳೆದು ಬರುತ್ತದೆ. ಮೊದಲಾರ್ಧದಲ್ಲಿ ರಾತ್ರಿ ಪ್ರಸಾದ ತಂಬಿಲ ವಿತರಣೆಯಾದ ನಂತರ ನಾಗಪಾತ್ರಿಗಳು ಮತ್ತು ವೈದ್ಯರು ವಿಶ್ರಾಂತಿ ಪಡೆಯುತ್ತಾರೆ.
ವಿಶ್ರಾಂತಿಯ ನಂತರ ಪಾತ್ರಿಗಳು ಮತ್ತು ವೈದ್ಯರು ಮತ್ತೆ ನಾಗಕನ್ನಿಕೆಯಾಗಿ ಅಲಂಕರಿಸಿಕೊಂಡು ಢಕ್ಕೆಬಲಿ ಮಂಡಲ, ನಾಗಮಂಡಲಗಳನ್ನು ಸುತ್ತುವರಿದು ಅಲ್ಲಿ ಢಕ್ಕೆಬಲಿಯ ಪ್ರಧಾನ ಆಚರಣೆಗಳು, ಪೂಜೆಗಳು ಬೆಳಗಿನ ಜಾವದವರೆಗೆ ನಡೆಯುತ್ತವೆ. ಢಕ್ಕೆಬಲಿ ಸೇವೆಗಳಲ್ಲದೆ ಪಂಚಾಮೃತ, ಹಗಲು ತಂಬಿಲ, ರಾತ್ರಿ ತಂಬಿಲ ಸೇವೆ ನಡೆಯುತ್ತದೆ. ಈ ನಡಾವಳಿಗೆ ಶತಮಾನಗಳ ಇತಿಹಾಸವಿದೆ.
ಇದೇ ಜನವರಿ 18, 2011ರಿಂದ ಢಕ್ಕೆಬಲಿ ಮಹೋತ್ಸವ ಆರಂಭವಾಗಿದೆ. ಮಾರ್ಚ್ 12, 2011ರ ಮಂಡಲ ವಿಸರ್ಜನೆಯೊಂದಿಗೆ ಈ ವಿಜೃಂಭಣೆಯ ನಡಾವಳಿ ಮುಕ್ತಾಯಗೊಳ್ಳುತ್ತದೆ. ಸರ್ವಧರ್ಮ ಸಾಮರಸ್ಯದ ಈ ನಡಾವಳಿಗೆ ಹರಕೆಯ ರೂಪದಲ್ಲಿ ಹಿಂಗಾರದ ಹಾಳೆಗಳನ್ನು ಭಕ್ತರು ತಂದು ತಮ್ಮ ಮನದ ದುಗುಡಗಳಿಗೆ ಪರಿಹಾರ ಕೊಂಡು ಕೊಳ್ಳುತ್ತಾರೆನ್ನುವುದು ಕ್ಷೇತ್ರದ ನಂಬಿಕೆ. [ದೇಗುಲ ದರ್ಶನ]
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications