ಸೇವೆ ಕನ್ನಡದಲ್ಲಿದ್ರೆ ಮಾತ್ರ 'ಎಂ ಆಡಳಿತ' ಸ್ವಾಗತಾರ್ಹ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮುಂದಾಳ್ತನದ ರಾಜ್ಯ ಸರ್ಕಾರ ನಾಡಿನ ಆಡಳಿತದಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ನಾಗರೀಕ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳಲು ಅನುವಾಗುವ "ಕರ್ನಾಟಕ ಮೊಬೈಲ್ - ಒನ್" ಸೇವೆಯನ್ನು ಶುರು ಮಾಡಿದೆ.
ಮೊದಲಿಗೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಪ್ರಾಯೋಗಿಕವಾಗಿ ಶುರುವಾಗಿದ್ದ ಈ ಸೇವೆಯು, ಇದೀಗ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಗೊಂಡಿದ್ದು, ಇದು ಜನರಿಗೆ ಬಹಳ ಉಪಕಾರಿಯಾಗಬಲ್ಲುದಾಗಿದೆ. ಇದರಿಂದಾಗಿ ಮೊಬೈಲ್ ಮೂಲಕವೇ ಸರ್ಕಾರದ ನಾಲ್ಕುನೂರಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ.
ಸರ್ಕಾರದ 37 ಇಲಾಖೆಗಳ 637 ಸೇವೆಗಳು (G2C) ಮೊಬೈಲ್ ಮೂಲಕ ಸಿಗಲಿದೆ. ಜೊತೆಗೆ ಉದ್ಯಮಿಗಳಿಂದ ಗ್ರಾಹಕರನ್ನು ತಲುಪಲು B2C ವಿಭಾಗದಲ್ಲಿಸುಮಾರು 3,644 ಸೇವೆಗಳನ್ನು ಒದಗಿಸಲಾಗುತ್ತಿದೆ. [ಕರ್ನಾಟಕ ಮೊಬೈಲ್ ಒನ್ ರಾಜ್ಯದ ಜನರಿಗೆ ಅರ್ಪಣೆ ]
ಕನ್ನಡದಲ್ಲಿ ಈ ಸೇವೆ ಇದ್ದೂ ಇಲ್ಲಾ!
ಈ ಸೇವೆಗಳು ಮೂರು ರೂಪದಲ್ಲಿ ಸಿಗುತ್ತದೆ. ಒಂದು ಐವಿಆರ್ ಸೇವೆ. ಇದರ ಮೂಲಕ ಯಾವುದೇ ದೂರವಾಣಿ ಬಳಸುವವರು ಸೇವೆ ಪಡೆಯಬಹುದು. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಆಯ್ಕೆಗಳಿವೆ.ಎರಡನೆಯದು ಅಂತರ್ಜಾಲ ತಾಣದ ಡೆಸ್ಕ್ ಟಾಪ್ ಸೇವೆ. ಇದರಲ್ಲೂ ಇಂಗ್ಲಿಷ್ ಮತ್ತು ಕನ್ನಡದ ಆಯ್ಕೆಯಿದ್ದು ಎರಡೂ ಕೆಲಸ ಮಾಡುತ್ತಿದೆ.

ಮೂರನೆಯದು ಅಂದರೆ ಮೊಬೈಲ್ ಸೇವೆಯನ್ನು ನೀಡುವ ಅಪ್ಲಿಕೇಶನ್ (ಆಪ್) ಗೂಗಲ್ ಪ್ಲೇಸ್ಟೋರ್ ಮತ್ತು ಐಓಎಸ್ ಗಳಲ್ಲಿ ಸಿಗುತ್ತಿದ್ದು ಇದರಲ್ಲಿ ಕನ್ನಡದ ಆಯ್ಕೆ ಇದ್ದೂ ಇಲ್ಲಾ. ಇಲ್ಲಿ ಕನ್ನಡದ ಆಯ್ಕೆಯಿದ್ದರೂ ಬಳಕೆ ಬರಿಯ ನೋಂದಾವಣಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಕನ್ನಡವನ್ನು ಆರಿಸಿಕೊಳ್ಳುವುದೆಂದರೆ ಏಳು ಕಡಲು ಈಜಿದಷ್ಟೇ ತೊಡಕಿನ ಕೆಲಸ. [ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]
ಅಂದರೆ ಇಡೀ ಯೋಜನೆಯ ಹಿರಿಮೆ ಇರುವುದೇ ಮೊಬೈಲ್ ಬಳಸಿ ಸೇವೆ ಪಡೆದುಕೊಳ್ಳಿ ಎಂಬುದರಲ್ಲಿ. ಆದರೆ ಈ ಉದ್ದೇಶವೇ ಈಡೇರುತ್ತಿಲ್ಲ. ಏಕೆಂದರೆ ಮೊಬೈಲಿನಲ್ಲಿ ಈ ಸೇವೆ ಕನ್ನಡದಲ್ಲಿ ಸುಲಭವಾಗಿ ಸಿಗುತ್ತಿಲ್ಲ.
ಈ ಕೊರತೆಯ ಕಾರಣದಿಂದಾಗಿ ಕರ್ನಾಟಕದ ಬಹುದೊಡ್ಡ ಪ್ರಮಾಣದ ಜನರನ್ನು ಈ ಯೋಜನೆ ಮುಟ್ಟೀತೆ ಎಂಬ ಅನುಮಾನ ಮೂಡುತ್ತದೆ. ಕರ್ನಾಟಕ ಸರ್ಕಾರ ತಾನು ಇಟ್ಟಿರುವ ಈ ಜನಪರ ಹೆಜ್ಜೆಯ ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಾದಲ್ಲಿ ಆದಷ್ಟು ಬೇಗ ಈ ಸೇವೆಗಳಲ್ಲಿ ಕನ್ನಡ ಸಿಗುವಂತೆ ಮಾಡಲಿ.
ಇಲ್ಲದಿದ್ದರೆ ಈ ಸೌಂದರ್ಯವೆಲ್ಲಾ ಶಿವನಿಲ್ಲದ ಸೌಂದರ್ಯದಂತೆಯೂ, ಶವ ಮುಖದ ಕಣ್ಣಿನಂತೆಯೂ ಆಗುತ್ತದೆ....ಮೊಬೈಲ್ ಆಡಳಿತ ಸಾರ್ಥಕವಾಗಲು ಕನ್ನಡ ಬೇಕು!
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications