ಕಡ್ಲೇಕಾಯಿ ಪರಿಷೆ ಫೇಸ್ ಬುಕ್ ಪುಟದಲ್ಲಿ ಕನ್ನಡ ಗಂಧವಿಲ್ಲ
ಪ್ರತೀ ವರ್ಷ ಜರಗುವಂತೆ ಈ ವರುಷವೂ "ಕಳ್ಳೆಕಾಯಿ ಪರ್ಸೆ/ಪರಿಶೆ" ನಡೆಯುತ್ತಿದೆ. ಪರಿಶೆ ನಡೆಯುವ ಜಾಗ ಹಳೆ ಬೆಂಗಳೂರೆಂದೇ ಕರೆಯಲ್ಪಡುವ, ಕನ್ನಡಿಗರೆ ಹೆಚ್ಚಿನ ಸಂಖೆಯಲ್ಲಿರುವ ಬಸವನಗುಡಿಯಲ್ಲಿ. ಹೆಸರನ್ನು ಮೊದಲು ಮಾಡಿ, ನಮ್ಮ ಸೊಗಡನ್ನು ಬಿಂಬಿಸೋ ಪರಿಶೆಯ ಹಿಂದೆ ದೊಡ್ಡ ಇತಿಹಾಸವೇ ಇದೆ. ಪರಿಶೆ ನಡೆಯೋ ಸಮಯದಲ್ಲಿ ಸಾಕಷ್ಟು ಜನ ಸೇರಿರುತ್ತಾರೆ. ಒಂದು ರೀತಿ ಜಾತ್ರೆಯ ವಾತಾವರಣವನ್ನೇ ನಾವು ಬಸವನಗುಡಿಯಲ್ಲಿ ನೋಡಬಹುದು.
ಇಂತ ಪರಿಶೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಫೇಸ್ಬುಕ್ ಪುಟವೊಂದನ್ನು ಮಾಡಲಾಗಿದೆ. ಪುಟದ ಕೊಂಡಿ ಇಲ್ಲಿದೆ ಕ್ಲಿಕ್ ಮಾಡಿ
ಪರಿಶೆ ಬಗ್ಗೆ ಹೇಳುತ್ತಾ ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು, ಹೆಚ್ಚು ಜನರನ್ನು ಸೆಳೆಯಲು ಈ ಪುಟದಲ್ಲಿ ಮಾಹಿತಿ ಹಾಕುತ್ತಿರುತ್ತಾರೆ. ನಿಜಕ್ಕೂ ಮೆಚ್ಚುವಂತ ಕೆಲಸ. ಆದರೆ ಈ ಪುಟದಲ್ಲಿ ನಮ್ಮತನದ ಸೊಗಡು ಕಾಣಿಸುವುದಿಲ್ಲ. ಫೇಸ್ಬುಕ್ ಪುಟದಿಂದ ಹಿಡಿದು, ಎಲ್ಲ ಮಾಹಿತಿಯನ್ನೂ ಇಂಗ್ಲೀಷಿನಲ್ಲೇ ನೀಡುತ್ತಿದ್ದಾರೆ.
ಕನ್ನಡ ಹುಡುಕಿದರೂ ಸಿಗುವುದಿಲ್ಲ. ಈ ಪುಟವನ್ನು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಅವರು ಅಣತಿಯಂತೆ ರೂಪಿಸಲಾಗಿದೆ ಎಂದು ಕೂಡಾ ಹಾಕಿಕೊಳ್ಳಲಾಗಿದೆ.
ಈ ಪುಟ ನಿರ್ಮಿಸಿದವರು ಕನ್ನಡದವರು ಫೇಸ್ಬುಕ್ ಬಳಸುವುದಿಲ್ಲ ಅಂತಾ ಭಾವಿಸಿದ್ದಾರೆನೋ ಅಥವಾ ಕನ್ನಡದವರಿಗೆ ಈ ಸಡಗರದ ಬಗ್ಗೆ ಅಂತರ್ಜಾಲದ ಮೂಲಕ ತಿಳಿಸಬಾರದು ಎಂಬ ಪ್ರತಿಜ್ಞೆ ಮಾಡಿದಾರೆನೋ ಅಂತ ಕನ್ನಡಿಗರಿಗೆ ಅನಿಸದೆ ಇರದು.
ಇಂತ ಸಂಭ್ರಮಗಳಲ್ಲಿ ಹೆಚ್ಚಿನ ಕನ್ನಡಿಗರು ಪಾಲ್ಗೊಂಡರೆ ಜಾತ್ರೆಗೂ ಮೆರುಗು ತಾನೇ? ನಮ್ಮತನ ಬಿಂಬಿಸುವ ಈ ಪರಿಶೆಗೆ ನಮ್ಮ ಜನರ ಪಾಲ್ಗೊಳ್ಳುವಿಕೆಗೆ ಕರೆ ಕೊಡದಿದ್ದರೆ ಹೇಗೆ? ಕನ್ನಡದಲ್ಲಿ ಮಾಹಿತಿ ನೀಡದೆ ಇರುವುದು ಕೂಡ, ಕನ್ನಡಿಗರನ್ನು ಹೊರಗಿಟ್ಟು ಕನ್ನಡೇತರರನ್ನುಮಾತ್ರ ಓಲೈಸುವ ಪರಿ ಅಲ್ಲವೇ ಅನ್ನುವ ಅನುಮಾನವೂ ಸುಳಿಯದೇ ಇರದು. ಹೀಗೆ ಕನ್ನಡವನ್ನು ಕಡೆಗಣಿಸುತ್ತಾ, ಕನ್ನಡವನ್ನು ಕನ್ನಡಿಗರೇ ನುಂಗಿಬಿಟ್ಟರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕನ್ನಡದ ಹರವು ವಿಸ್ತಾರಗೊಳ್ಳಲು ಸಾಧ್ಯವೇ? ಕನ್ನಡಿಗರೇ ಕನ್ನಡಿಗರನ್ನು ಕಡೆಗಣಿಸುವ ಇಂತ ತಪ್ಪು ನಡೆಗಳನ್ನು ತಿದ್ದಲು ಎಲ್ಲರೂ ಮೊದಲು ಮುಂದಾಗಬೇಕು.
ನನ್ನಿ,
ಅನ್ನದಾನೇಶ ಶಿ ಸಂಕದಾಳ
ಬೆಂಗಳೂರು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ













Click it and Unblock the Notifications