ಬಿಡಿಎ ಸೈಟನ್ನು ಯಾರಾದರೂ ಕೈಗೆಟುಕುವ ಬೆಲೆ ಅನ್ನುವುದಕ್ಕೆ ಸಾಧ್ಯವಾ?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆಂಪೇಗೌಡ ಬಡಾವಣೆಯಲ್ಲಿ ಐದು ಸಾವಿರ ನಿವೇಶನ ಹಂಚಲು ಅರ್ಜಿ ಕರೆಯಲಾಗಿದೆ. ಈ ನಿವೇಶನಗಳಿಗೆ ನಿಗದಿ ಮಾಡಿರುವ ಮೊತ್ತ ನೋಡಿದರೆ ಖಾಸಗಿ ಲೇಔಟ್ ಗಳಲ್ಲಿ ಸೈಟು ಖರೀದಿಸುವುದೇ ಉತ್ತಮ ಅನಿಸುತ್ತದೆ. ಜತೆಗೆ ಖಾಸಗಿಯಾಗಿ ಸೈಟು ಮಾರಾಟ ಮಾಡುವವರನ್ನು ಬಡವರ ಬಂಧು ಎಂದು ಕರೆದರೂ ಯಾವ ಅತಿಶಯೋಕ್ತಿಯೂ ಆಗಲಾರದು.
ಯಾವ ಅಳತೆಯ ಸೈಟಿಗೆ ಎಷ್ಟು ಮೊತ್ತವನ್ನು ಬಿಡಿಎ ನಿಗದಿ ಮಾಡಿದೆ ಎಂಬುದರ ಮೇಲೆ ಒಮ್ಮೆ ಕಣ್ಣಾಡಿಸಿ.

20X30 (ಆರ್ಥಿಕವಾಗಿ ಹಿಂದುಳಿದ ವರ್ಗ) 5,23,126
20X30 (ಸಾಮಾನ್ಯ ವರ್ಗ) 10,46,251
30X40 23,25,002
40X60 52,31,255
50X80 96,87,510
ಅಂದರೆ ಸಾವಿರದ ಇನ್ನೂರು ಚದರಡಿಯ ಒಂದು ಸೈಟು ಖರೀದಿಸಲು 23,25,002 ರುಪಾಯಿ ಆಗುತ್ತದೆ. ಬರೀ ಸೈಟು ಖರೀದಿಗೆ ಇಷ್ಟು ಹಣ ತೆತ್ತ ನಂತರ ಮನೆ ಕಟ್ಟಲು ಇನ್ನೆಷ್ಟು ಖರ್ಚು? ಇದು ಕೈಗೆಟುಕುವ ಬೆಲೆ ಎನ್ನುತ್ತದೆ ಬಿಡಿಎ. ಹತ್ತು ಮಂದಿ ಸಮಾನಾಸಕ್ತರು ಎರಡು ಕೋಟಿ ರುಪಾಯಿಗೆ ಒಂದು ಎಕರೆ ಭೂಮಿ ಅಭಿವೃದ್ಧಿ ಪಡಿಸಿದರೆ, ಅದರಲ್ಲಿ ಎಷ್ಟು ಸೈಟು ಆಗಬಹುದು? ಒಬ್ಬೊಬ್ಬರಿಗೆ ತಲಾ ಎಷ್ಟು ಸೈಟು ಉಳಿಯಬಹುದು?
ಕಾನೂನು ಬದ್ಧವಾಗಿಯೇ ಎಲ್ಲ ನಿಯಮ ಅನುಸರಿಸಿ ಅಭಿವೃದ್ಧಿ ಪಡಿಸಿದ ನಿವೇಶನ ಖಾಸಗಿಯವರಿಗೆ ಅಷ್ಟು ಖರ್ಚಾಗುವುದಿಲ್ಲ ಅಂದ ಮೇಲೆ ಸರಕಾರದ ಅಡಿಯಲ್ಲಿ ಬರುವ ಸಂಸ್ಥೆಯೊಂದು ಬಡವರಿಗೆ ಹಂಚುವ ಸೈಟಿನ ಬೆಲೆ ಇಷ್ಟು ದುಬಾರಿಯೆ? ಇನ್ನು 50X80ರ ಅಳತೆಯ ನಾಲ್ಕು ಸಾವಿರ ಚದರಡಿ ನಿವೇಶನಕ್ಕೆ 96,87,510 ರುಪಾಯಿ. ಹತ್ತಿರ ಹತ್ತಿರ ಒಂದು ಕೋಟಿ ರುಪಾಯಿ.
ಆರ್ಥಿಕವಾಗಿ ಹಿಂದುಳಿದವರಿಗೆಂದು ಇರುವ ಆರುನೂರು ಚದರಡಿಯ ಸೈಟಿನ ಬೆಲೆಯೇ 5,23,126 ರುಪಾಯಿ. ಅಲ್ಲಿಗೆ ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ ಇರುವ ವ್ಯಾಖ್ಯೆಯನ್ನೇ ಬದಲಾಯಿಸಬೇಕಾಗುತ್ತದೆ. ಬಿಡಿಎನಿಂದಲೇ ಖಾಸಗಿಯಾಗಿ ಭೂ ಅಭಿವೃದ್ಧಿ ಪಡಿಸುವವರಿಗೆ ಉತ್ತೇಜನ ನೀಡಲಾಗುತ್ತಿದೆಯಾ ಎಂಬ ಗುಮಾನಿ ಬರುವುದಿಲ್ಲವೆ?
-
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್












Click it and Unblock the Notifications