ನೆಲಮಂಗಲದಲ್ಲಿ ದುಡ್ಡು ಕೊಟ್ಟರೆ ದಾಖಲೆ ಇಲ್ಲದೆಯೇ 'ಆಧಾರ್' ಸಿಗುತ್ತೆ!

ಅದರೆ ನೆಲಮಂಗಲದಲ್ಲಿ ಈ ಯೋಜನೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿರುವುದು ದುರಂತ. ಇಲ್ಲಿನ 'ರಾಷ್ರೀಯ ಆಧಾರ್ ಗುರುತಿನ ಚೀಟಿ' ವಿತರಣಾ ಏಜೆನ್ಸಿಯವರು ದಿನ ಒಂದಕ್ಕೆ 50 ಮುಂಗಡ ಟೋಕನ್ ನೀಡುವ ವ್ಯವಸ್ಥೆ ಮಾಡಿಕೊಂಡು ಮುಂದಿನ ಮೂರು ನಾಲ್ಕು ತಿಂಗಳುಗಳ ನಂತರದ ದಿನಾಂಕ ನೀಡಿ ಕಳುಹಿಸುತ್ತಿದ್ದಾರೆ.
ಅದರೆ ದಲ್ಲಾಳಿಗಳ ಮೂಲಕ 100 ರೂಪಾಯಿಗಳನ್ನು ಕೊಟ್ಟರೆ ಯಾವುದೇ ದಾಖಾಲಾತಿ ಹೊಂದಿಲ್ಲದವರಿಗೂ ಆಧಾರ್ ಗುರುತಿನ ಚೀಟಿ ನೋಂದಣಿಯನ್ನು ಆ ದಿನವೇ ಮಾಡಿ ಕೊಡಲಾಗುತ್ತಿದೆ. ಅಂದರೆ ಹಣ ನೀಡಿದವರಿಗೆ ಒಂದೇ ದಿನದಲ್ಲಿ, ಹಣ ನೀಡದಿದ್ದರೆ ಮೂರ್ನಾಲ್ಕು ತಿಂಗಳು ಕಾಯಬೇಕು. ಇದು ಸರಿಯೇ? ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ?












Click it and Unblock the Notifications