ಇಂದು ಪ್ರೀತಿ! ನಾಳೆಯೇ ಮದುವೆ! ನಾಡಿದ್ದು ವಿಚ್ಛೇದನ!
ಹಿಂದೆ
ಹೆಂಡತಿ
ಬಿಟ್ಟವನು,
ಗಂಡನ
ಬಿಟ್ಟವಳು
ಎಂದು
ಸಂಬಂಧ
ಒಲ್ಲೆ
ಎಂದವರನ್ನು
ಸಮಾಜ
ದೂಷಿಸುತ್ತಿತ್ತು!
ಆದರೆ
ಇಂದು?
ಯಾರ
ಮನೆ
ದೋಸೆ
ನೆಟ್ಟಗಿದೆ?
ಉದ್ಯಾನ ನಗರಿ, ಐಟಿ ನಗರಿ ಎಂಬ ಖ್ಯಾತಿಯ ಬೆಂಗಳೂರು, ವಿಚ್ಛೇದಿತರ ನಗರಿ ಎಂದು ಸದ್ಯದಲ್ಲೇ ಕುಖ್ಯಾತವಾದರೆ ಅಚ್ಚರಿಯೇನಿಲ್ಲ!
ನವದೆಹಲಿಯನ್ನು ಹೊರತುಪಡಿಸಿದರೆ, ಬೆಂಗಳೂರಿನಲ್ಲಿಯೇ ವಿಚ್ಛೇದನಗಳು ಹೆಚ್ಚು. ಪ್ರತಿ ವರ್ಷ 4ಸಾವಿರಕ್ಕೂ ಅಧಿಕ ಮಂದಿ, ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದಾರೆ ಎನ್ನುತ್ತವೆ ಅಂಕಿಅಂಶಗಳು. ಈ ವಿಚಾರ ಕೇಳಿ ವಕೀಲರು, ಸಿಹಿ ಹಂಚಿದರಂತೆ ಎಂಬುದು ಕೇವಲ ಕುಹಕ!
ಹಿಂದಿನ ಮದುವೆಗೂ, ಇಂದಿನ ಮದುವೆಗೂ ವ್ಯತ್ಯಾಸಗಳಿವೆ. ಮದುವೆ ಎನ್ನುವುದು ಮೊದಲು, ಮನೆಮಂದಿ ಸಂಭ್ರಮಿಸುವ ಹಬ್ಬವಾಗಿತ್ತು. ಮನೆಗೆ ಬರುವ ಸೊಸೆ, ಗಂಡನ ಜೊತೆಗೆ ಮನೆಮಂದಿ ಜೊತೆಗೂ ಹೊಂದಿಕೊಳ್ಳಬೇಕಿತ್ತು. ಸಂಸಾರದಲ್ಲಿ ಸರಿಗಮವಿತ್ತು. ಎಲ್ಲೂ ಅಪಸ್ವರವಿರಲಿಲ್ಲ. ಗಂಡಹೆಂಡಿರ ಜಗಳ ಉಂಡು ಮಲಗಿದರೆ ಮುಗಿಯುತ್ತಿತ್ತು. ಮುಗಿಯದಿದ್ದರೆ, ಮನೆ ಹಿರಿಯರು ಬುದ್ಧಿ ಹೇಳಿ ಮುಗಿಸುತ್ತಿದ್ದರು. ಆದರೆ ಈಗ? ಇಂದು ಪ್ರೀತಿ, ನಾಳೆ ಮದುವೆ, ನಾಡಿದ್ದು ವಿಚ್ಛೇದನ!
ಈಗಿನ ಗಂಡಹೆಂಡಿರ ಜಗತ್ತಿನಲ್ಲಿ ಯಾರೂ ಇಲ್ಲ! ಯಾರೂ ಅವರಿಗೆ ಬೇಕಾಗಿಲ್ಲ! ಮುನಿದರೆ ಸಮಾಧಾನ ಹೇಳಲು ಮನೆಯಲ್ಲಿ ಹಿರಿಯರಿಲ್ಲ! ಇದ್ದರೂ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಅವಸರದ ಆಧುನಿಕ ಜಗತ್ತು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆಯೋ?