ನಾಚಿಕೆ, ಸೋಮಾರಿತನ, ಹಿಂಜರಿಕೆ ಕನ್ನಡಿಗನ ವೈಶಿಷ್ಟ್ಯ!
ಇಂದು ಲಕ್ಷಾಂತರ ತಮಿಳರು, ತೆಲುಗರೂ ಕನ್ನಡ ಮಾತನಾಡುತ್ತಾರೆ. ಹೊರಗಿನವರಿಗೆ ಕನ್ನಡ ಕಲಿಯಲು ಜನರೇಷನ್ನುಗಳು ಬೇಕಾಗಬಹುದು, ಆದರೆ ಅವರಿಗೆ ಕನ್ನಡ ಕಲಿಸುವ ಶಕ್ತಿ ಈ ಮಣ್ಣಿಗಿದೆ.
- ರಂಗನಾಥ ಅವಧಾನಿ, ಬೆಂಗಳೂರು
ಪ್ರಿಯ ಶ್ಯಾಮ್,
ಕವಿ ಸಿದ್ದಲಿಂಗಯ್ಯನವರ ಕುರಿ-ತಾದ ‘ಕನ್ನಡಿಗರಿಗೆ ಧೈರ್ಯನೇ ಇಲ್ಲ ಕಣ್ರೀ’ ಎಂಬ ಸೊಗಸಾದ ಲೇಖ-ನ-ದಲ್ಲಿ ಮೂಡಿ ಬಂದ ಕೆಲವು ವಿಷಯಗಳ ಬಗ್ಗೆ ನಾಲ್ಕು ಸಾಲು ಬರೆಯೋಣವೆನ್ನಿಸಿತು. ವಾಸ್ತವ ಸತ್ಯವನ್ನು ಈ ಲೇಖನ ಹಿಡಿದಿಟ್ಟಿದೆ. ಕನ್ನಡಿಗರಿಗೆ ಜಾತಿಗಿರುವಷ್ಟು ಆದರ ಕನ್ನಡಕ್ಕಿಲ್ಲ. ಬೇರಾವ ರಾಜ್ಯದಲ್ಲೂ ಕಾಣಲಾರದಷ್ಟು ಜಾತೀಯತೆ ಇಲ್ಲಿ ತುಂಬಿದೆ. ಇದರೊಂದಿಗೆ ಗಾಢವಾಗಿ ಸೇರಿರುವ ಪ್ರಾಂತೀಯತೆ, ಸಂಕೋಚ, ಸೋಮಾರಿತನ, ಹಿಂಜರಿಕೆ ಇವು ಕನ್ನಡಿಗನ ವೈಶಿಷ್ಟ್ಯ.
ಮೊನ್ನೆ ಯಾರೋ ನಮ್ಮ ಚಿತ್ರನಟನೊಬ್ಬನ ಬಗ್ಗೆ ಮಾತನಾಡುತ್ತಾ ಹೇಳಿದರು: ‘ ಇವನು ಇಷ್ಟೆ ಬಿಡ್ರೀ... ಚಿಕ್ಕ ಪುಟ್ಟ ಕನ್ನಡ ಚಿತ್ರಗಳಿಗೆ ಸರಿ... ಹಿಂದಿ ಚಿತ್ರಗಳಲ್ಲಿ ಅವನು ಅಭಿನಯಿಸಲಾರ...’. ನಾನು ಕೇಳಿದೆ: ‘ಅವನು ಅಷ್ಟಾದರೂ ಮಾಡಿದ್ದಾನೆ, ನೀವೇನು ಮಾಡಿದ್ದೀರಿ ಹೇಳಿ’. ಅವರಿಂದ ಉತ್ತರ ಬರಲಿಲ್ಲ. ನಮ್ಮವರನ್ನೇ ಉತ್ತೇಜಿಸದ ಕನ್ನಡಿಗರು ನಾವು. ನಾನು ಕೆಲಸ ಮಾಡುವ ಐ.ಟಿ. ಕಂಪನಿಯಲ್ಲಿ ಕೆಲವು ಕನ್ನಡಿಗರು ಕನ್ನಡಿಗರೊಡನೆ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ನೋಡುತ್ತಿರುತ್ತೇನೆ.
ಆದರೂ ಆ ಲೇಖನದಲ್ಲಿ ಒಪ್ಪಲಾರದ ಸಂಗತಿಗಳೂ ಇವೆ. ನಾನು ಕಂಡಂತೆ ಯಾವ ಕನ್ನಡಿಗನೂ ತಮಿಳು, ತೆಲುಗು ಕಲಿತು ಅವರೊಡನೆ ವ್ಯವಹರಿಸಲಿಲ್ಲ. ಮಲಯಾಳವನ್ನು ಕಲಿಯುವುದಂತೂ ದೂರವೇ ಸರಿ. ತಮಿಳು, ತೆಲುಗು ಸಿನೆಮಾಗಳನ್ನು ನೋಡಿ ‘ವಣಕ್ಕಂ’, ‘ಬಾಗುಂಡಾರಾ’ ‘ಇಕ್ಕ-ಡ-ರಾಮ್ಮಾ ’ ಶಬ್ದಗಳನ್ನು ಕಲಿತಿರಬಹುದಷ್ಟೆ. ನನಗೆ ತಿಳಿದಿರುವ ಯಾವ ಕನ್ನಡಿಗನಿಗೂ ಒಂದಕ್ಷರ ಮಲಯಾಳವೂ ಬರುವುದಿಲ್ಲ. ಬದಲಾಗಿ ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರೇ ಕನ್ನಡ ಕಲಿತಿದ್ದಾರೆ.
ಕನ್ನಡದಲ್ಲೇ ಮಾತನಾಡಬೇಕಾದ ಸಂದರ್ಭ ಬಂದಾಗ ಮಾತ್ರ ಅವ-ರು-ಗಳು ಮಾತನಾಡುತ್ತಾರೆಯಾದ್ದರಿಂದ ನಮಗೆ ತಿಳಿಯುವುದಿಲ್ಲ. ಇಂದು ಲಕ್ಷಾಂತರ ತಮಿಳರು, ತೆಲುಗರೂ ಕನ್ನಡ ಮಾತನಾಡುತ್ತಾರೆ. ಹೊರಗಿನವರಿಗೆ ಕನ್ನಡ ಕಲಿಯಲು ಜನರೇಷನ್ನುಗಳು ಬೇಕಾಗಬಹುದು, ಆದರೆ ಅವರಿಗೆ ಕನ್ನಡ ಕಲಿಸುವ ಶಕ್ತಿ ಈ ಮಣ್ಣಿಗಿದೆ.
ಹಾಗೆಯೇ
ಯಾವ
ಕನ್ನಡಿಗನೂ
ಕೆಳದರ್ಜೆಯೆಂದು
ಪರಿಗಣಿಸಲ್ಪಡುವ
ಝಾಡಮಾಲಿ
ಅಥವಾ
ಮಲ
ಹೊರುವ
ಕೆಲಸವನ್ನೂ
ಮಾಡಲಿಲ್ಲ.
ಝಾಡಮಾಲಿಗಳೆಲ್ಲ
ತೆಲುಗು
ಮಾತನಾಡುವುದನ್ನು
ನೋಡಬಹುದು.
ಹಾಗಾಗಿ
ಕೆಳದರ್ಜೆಯ
ಕೆಲಸಗಳೆಲ್ಲ
ಇಂದು
ತಮಿಳರ
ಹಾಗೂ
ತೆಲುಗರ
ಪಾಲಾಗಿವೆ.
ಹಾಗೆಯೇ
ತೀರಾ
ಉನ್ನತ
ದರ್ಜೆಯ
ಕೆಲಸಗಳು
ಕೂಡ.