ಕನ್ನಡಿಗರ್ಯಾಕೆ ಹೀಗೆ? ಅವರಿರೋದೆ ಹಾಗೆ!
ಕನ್ನಡಿಗರ್ಯಾಕೆ ಹೀಗೆ? ಅವರಿರೋದೆ ಹಾಗೆ! ಹತ್ತಿದಮೇಲೆ ಏಣಿಯನ್ನೇ ಒದಯಬಾರದು. ಮಾತೃ ಭಾಷೆ ಕನ್ನಡವನ್ನು ಮರೆಯಬಾರದು. ಯಾರಿಗೆ ಗೊತ್ತು ಈ ಯುವ ಕನ್ನಡಿಗರು, ತಾವುದೊಡ್ಡವರಾದಮೇಲೆ ಅದರಲ್ಲೂ ಅವರು ಹೊರದೇಶದಲ್ಲಿ ವಾಸಿಸಿದ ಮೇಲೆ ಅವರಿಗೆ ಕನ್ನಡ ಪ್ರೇಮ ಹೆಚ್ಚಾಗಬಹುದು! ನಮ್ಮಂತಹವರಿಗೆ ಆಗಿಲ್ಲವೇ?
ಪ್ರಶಾಂತ ಬೀಚಿ ಯವರ 'ನಿಮ್ಮ ಗಡ್ಡ ಬೆಳ್ಳಗಾಗುವುದರೊಳಗೆ ಎದ್ದೇಳಿ' ಎಂಬ ಕನ್ನಡ ಜಾಗೃತಿ ಲೇಖನವು ಎಲ್ಲ ಕನ್ನಡಿಗರಿಗೂ ಅದರಲ್ಲೂ ಕನ್ನಡ ನಾಡಿನಲ್ಲೇ ಇರುವ ಕನ್ನಡಿಗರಿಗೆ ಹೆಚ್ಚಾಗಿ ಅನ್ವಹಿಸುವುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ, ಹೊರದೇಶದಲ್ಲಿರುವ ನಮ್ಮಗಳಂತಹ ಕನ್ನಡಿಗರಿಗೆ ಆಶ್ಚರ್ಯವಾಗುದೇನೆಂದರೆ, ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕನ್ನಡ ಯುವಜನರು ಕನ್ನಡವೇ ಗೊತ್ತಿಲ್ಲವೆಂಬುವ ಹಾಗೆ ನಟಿಸುವುದು. ಈ ಯುವಜನರಿಗೆ ಕನ್ನಡದ ಬಗ್ಗೆ ಆಲಸ್ಯ ಮತ್ತು ಅಸಡ್ಡೆ.
ಕರ್ನಾಟಕವು ಅದರಲ್ಲೂ ಬೆಂಗಳೂರು ವಿಶ್ವದಲ್ಲೇ ಅತಿಮುಖ್ಯ ಗಣಕತಂತ್ರಾಂಶ ಕೇಂದ್ರವಾಗಿರುವುದರಿಂದ ಪ್ರಪಂಚದ ಎಲ್ಲಾ ದೇಶದ ಜನಗಳೊಂದಿಗೆ ನೇರವಾಗಿಒಂದಲ್ಲಾ ಒಂದು ವಿಧದಲ್ಲಿ ವಿಚಾರಸಂಪರ್ಕದಲ್ಲಿ ಭಾಗವಹಿಸಬೇಕಾಗುವುದು. ಆದುದರಿಂದ ಪ್ರಪಂಚದ ಸಾಮಾನ್ಯ ಭಾಷೆಯಾದ ಆಂಗ್ಲಭಾಷೆಯನ್ನೇ ತಮ್ಮ ವಿದ್ಯಾಭ್ಯಾಸ ಮತ್ತು ಕಾರ್ಯಗಳಲ್ಲಿ ಉಪಯೋಗಿಸಬೇಕಾಗುವುದು ಅನಿವಾರ್ಯವಾಗುವುದು.

ಅದೂ ಅಲ್ಲದೆ ಭಾರತದಲ್ಲೇ ಇರುವ ಇತರ ಭಾಗಗಳ ಯುವಜನರಿಗೆ ಕರ್ನಾಟಕದಲ್ಲಿ ಈ ಆಧುನಿಕ ಉದ್ಯಮಗಳಲ್ಲಿ ಅಧಿಕವಾಗಿ ಅವಕಾಶಗಳು ಒದಗಿರುವುದರಿಂದ, ಎಲ್ಲರಿಗೂ ತಿಳಿದಿರುವ ಸಾಮಾನ್ಯವಾದ ಆಂಗ್ಲ ಭಾಷೆಯನ್ನೇ ಉಪಯೋಗಿಸಬೇಕಾಗುವುದು. ಆದರೆ ಪ್ರಶಾಂತ ಬೀಚಿಯವರು ಹೇಳಿದಹಾಗೆ ಎಲ್ಲರೂ ಅಂದರೆ ಮಾತೃಭಾಷೆ ಆಂಗ್ಲಭಾಷೆಯಾಗಿಲ್ಲದವರೂ, ಆಂಗ್ಲಭಾಷೆಯನ್ನಾಡುವಾಗ ತಮ್ಮತಮ್ಮ ಮನಸ್ಸಿನಲ್ಲಿ ತಮ್ಮ ತಮ್ಮ ಮಾತೃಭಾಷೆಯನ್ನೇ ಮೊದಲು ಸೃಷ್ಟಿಸಿರುತ್ತಾರೆ. ಉದಾಹರಣೆಗೆ ಕನ್ನಡಿಗರು ಕನ್ನಡವನ್ನೂ, ತಮಿಳರು ತಮಿಳನ್ನೂ, ಮರಾಠಿಗರು ಮರಾಠಿಯನ್ನೇ ಮೊದಲು ಸೃಷ್ಟಿಸಿರುತ್ತಾರೆ. ಆ ನಂತರ ಅವರು ಆಂಗ್ಲಭಾಷೆಯಲ್ಲಿ ಉಚ್ಚರಿಸುತ್ತಾರೆ.
ಅವರು ಆಂಗ್ಲಭಾಷೆಯಲ್ಲಿ ನಿಪುಣರಾದಮೇಲೆ ಆಂಗ್ಲಭಾಷೆಯಲ್ಲಿ ಮಾತಾಡುವಾಗ ಅವರ ಮನಸ್ಸಿನ ತಳಹದಿಯಲ್ಲಿ ಚಲಿಸುತ್ತಿರುವ ಕನ್ನಡವು ಅಜ್ಞಾತವಾಗುತ್ತದೆ. ಆದುದರಿಂದ ಈ ನವೀನಕಾಲದ ಯುವಕರು ಒಂದು ಸಂದಿಗ್ಧತೆ ಅಂದರೆ ಒಂದು ಪೀಕಲಾಟದಲ್ಲಿ ಸಿಲುಕಿರುತ್ತಾರೆ. ಅಧಿಕವಾಗಿ ಆಂಗ್ಲಭಾಷೆಯನ್ನೇ ಇಡೀ ದಿನವೂ ಉಚ್ಚರಿಸಿತ್ತಿರುವಾಗ ಅವರ ಕನ್ನಡವು ಸಂಪೂರ್ಣವಾಗಿ ಅಜ್ಞಾತವಾಗುತ್ತದೆ.
ಪ್ರಶಾಂತ ಬೀಚಿಯವರು ಹೇಳುವಹಾಗೆ ಹತ್ತಿದಮೇಲೆ ಏಣಿಯನ್ನೇ ಒದಯಬಾರದು. ಯಾರಿಗೆ ಗೊತ್ತು ಈ ಯುವ ಕನ್ನಡಿಗರು, ತಾವುದೊಡ್ಡವರಾದಮೇಲೆ ಅದರಲ್ಲೂ ಅವರು ಹೊರದೇಶದಲ್ಲಿ ವಾಸಿಸಿದಮೇಲೆ ಅವರಿಗೆ ಕನ್ನಡ ಪ್ರೇಮ ಹೆಚ್ಚಾಗಬಹುದು. ಸ್ವದೇಶದಲ್ಲಿರುವರಿಗೆ ಕನ್ನಡದಲ್ಲಿ ಆಲಸ್ಯವಿದ್ದಾಗ ವಿದೇಶದಲ್ಲಿರುವರಿಗೆ ಕನ್ನಡದ ಅಭಿಮಾನ ಹೆಚ್ಚಾಗುವುದು. ನಮ್ಮಂತಹವರಿಗೆ ಆಗಿಲ್ಲವೇ?
ಈ ಯೋಚನೆಯಲ್ಲಿದ್ದ ನನಗೆ, ನಾನು ಬರೆದ 'ವಿದೇಶೀ ಕನ್ನಡಿಗನ ಕೊರಗು' ಎಂಬ ಒಂದು ಪದ್ಯ ಜ್ಞಾಪಕಕ್ಕೆ ಬಂದಿತು. ಈ ಪದ್ಯವನ್ನು 1988ರಲ್ಲಿ ಮ್ಯಾಂಚೆಸ್ಟರಲ್ಲಿ ನಡೆದ ಮೊದಲನೆಯ ವಿಶ್ವಕನ್ನಡಿಗರ ಸಮ್ಮೇಳನದಲ್ಲಿ ನಾನು ಓದಿದ್ದೆನು. ಅದು 'ಅಪರಂಜಿ' ಯಲ್ಲೂ ಪ್ರಕಟವಾಗಿದೆ.
ವಿದೇಶೀಕನ್ನಡಿಗನ ಕೊರಗು
ಆಂಗ್ಲ ಮಾಧ್ಯಮವೇ ಬೇಕೆಂದ
ಆಂಗ್ಲಭಾಷೆಯು ಬಲುಚಂದ
ಆಂಗ್ಲನಾಡಲಿ ಬಂದು ನೆಲಸಿ
ಕನ್ನಡ ಕನ್ನಡ ಎಂದು ಕೊರಗಿದನಾ ವಿದೇಶೀ ಕನ್ನಡಿಗ.
ದುಡಿದು ಗಳಿಸಿದ ಹಣವ ಕಸಿವನಾ ಕಂದಾಯದಾರ
ಕೊಡುವನಾ ಹಣವ ದುಡಿಯದವಗೆ
ದುಡಿದವನು ಸೋತ ದುಡಿಯದವ ಗೆದ್ದ
ಇದಾವನ್ಯಾಯವೆಂದು ಕೊರಗಿದನಾ ವಿದೇಶೀ ಕನ್ನಡಿಗ.
ಕೈಯಲ್ಲಿ ಕಾಸಿದ್ದರೇನು? ಮನೆಗೆರಡು ಕಾರಿದ್ದರೇನು?
ದುಡಿದು ದಣಿವಿ ಮನೆಗೆ ಬರಲ್
ಪೋಗಿರವಳಾಸತಿ ಕೆಲಸಕೆ
ಎನಗಿನ್ನು ತಂಗಳೇಗತಿಯೆಂದು ಕೊರಗಿದನಾ ವಿದೇಶೀ ಕನ್ನಡಿಗ.
ಮೈಕ್ರೋವೇವ್ ಬೇಕೆಂದ ಕಂಪ್ಯೂಟರ್ ಬಲು ಚೆಂದ
ಕಾರ್ಡಿನಲಿವುಗಳನ್ ಕೊಳ್ಳಲ್
ಕಾರ್ಡಿಗನು ಬಂದೆಳೆದಾಗ
ಕೀಲು ಮುರಿದಂತೆ ಕೊರಗಿದನಾ ವಿದೇಶೀ ಕನ್ನಡಿಗ.
ಅಪ್ಪ ಅರಸಗೆ ಮಂತ್ರಿ ಮಾವ ಪಾಳೆಯಗಾರ
ಬೀದಿಯಲಿ ಹೆಮ್ಮೆಯಿಂ ಪೋಗುತಿರಲ್
ಪಾಕಿ ನೀನೆಂಬುವರು. ನಾನೇಕೆ ಇಲ್ಲಿರುವೆ?
ಎಂದು ಕೊರಗಿದನಾ ಕೊರಗಿದನಾ ವಿದೇಶೀ ಕನ್ನಡಿಗ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications