ಸಿಂಗಪುರ ಕನ್ನಡ ವೈಭವ ಸಮ್ಮೇಳನದ ಕರೆಯೋಲೆ

ಕರ್ನಾಟಕ ವೈಭವ ಸಂಸ್ಥೆಯ ಲಾಂಛನದಲ್ಲಿ ವ್ಯವಸ್ಥೆಯಾಗಿರುವ ಈ ಸಮ್ಮೇಳನ ನಡೆಯುವುದು ನವೆಂಬರ್ 6 ಮತ್ತು 7ರ ಶನಿವಾರ ಮತ್ತು ಭಾನುವಾರ. ಶನಿವಾರ ದೀಪಾವಳಿ ಅಮಾವಾಸ್ಯೆ, ಭಾನುವಾರ ಬಲಿಪಾಡ್ಯಮಿ. ಸಿಂಗಪುರ ಕನ್ನಡಿಗರಿಗೆ ಈ ಬಾರಿ ಕನ್ನಡ ಹಬ್ಬವೇ ದೀಪಾವಳಿ ಆಗುತ್ತಿರುವುದು ಒಂದು ಸೊಗಸು ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಾಮಚಂದ್ರ ಹೆಗಡೆ ಹೇಳಿದ್ದಾರೆ.
ಎರಡು ದಿನಗಳ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ರೂಪುರೇಷೆಗಳು ಇಂತಿವೆ.
ಸಮ್ಮೇಳನದ ತಾಣ : ಸಿಂಗಪುರ ಪಾಲಿಟೆಕ್ನಿಕ್ ಸಭಾಗೃಹ, 500 ಡೋವರ್ ರಸ್ತೆ, ಸಿಂಗಪುರ.
ಕಾರ್ಯಕ್ರಮ ವಿವರ
* ಶನಿವಾರ, ನ. 6 : ಉದ್ಘಾಟನಾ ಸಮಾರಂಭ, ಸಂಜೆ 3.30ರಿಂದ 8.30ರವೆರೆಗೆ ; ಶ್ರೀಲಕ್ಷ್ಮೀ ಪೂಜೆ, ಸಮೂಹ ಗೀತೆಗಳು, ಸಂಗೀತ ನೃತ್ಯ ಕಾರ್ಯಕ್ರಮಗಳು, ಉದ್ಘಾಟನೆ : ಸಮ್ಮೇಳನಾಧ್ಯಕ್ಷ ಜೋಗದ ಸಿರಿಬೆಳಕಿನ ಕವಿ ನಿಸಾರ್ ಅಹಮದ್. 8.30ಕ್ಕೆ ಪಂಕ್ತಿ ಭೋಜನ.
* ಭಾನುವಾರ, ನ. 7 : ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮಹಾಪೂರ. ಗೀತ ಗಾಯನ, ನೃತ್ಯ ಶೋಭೆ, ಸಾಹಿತ್ಯಗೋಷ್ಠಿ, ಕವಿಗೋಷ್ಠಿ. ರಾತ್ರಿ 9ಕ್ಕೆ ಭೋಜನ.
ಸಿಂಗಪುರದ ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ಡಾ.ಸಂಜಯ್ ಶಾಂತಾರಾಮ್ ಅವರು ತಮ್ಮ ತಂಡದೊಂದಿಗೆ "ರೂಪ ವಿರೂಪ" ನೃತ್ಯ ರೂಪಕ ನಡೆಸಿಕೊಡುತ್ತಾರೆ. ಕರ್ನಾಟಕದಿಂದ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸಾಹಿತಿಗಳು, ಕವಿಗಳು, ಪತ್ರಕರ್ತರು ಮತ್ತು ಕಲಾವಿದರು:
ನಾಡೋಜ ಕೆ.ಎಸ್.ನಿಸಾರ್ ಅಹ್ಮದ್ : ನಮ್ಮ ಸಮ್ಮೇಳನಾಧ್ಯಕ್ಷರು, ಸಂವೇದನಾಶೀಲ ಜನಪ್ರಿಯ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ; 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
ಸಾಹಿತಿ ಜಯಂತ ಕಾಯ್ಕಿಣಿ : ಖ್ಯಾತ ಕವಿ, ಲೇಖಕ, ಚಿತ್ರಕಥೆ/ಚಿತ್ರಗೀತೆಗಳ ಲೇಖಕ.
ಪತ್ರಕರ್ತ ವಿಶ್ವೇಶ್ವರ ಭಟ್ : ಕರ್ನಾಟಕದ ನಂ. ಒನ್ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ.
ಪತ್ರಕರ್ತ ಎಸ್.ಕೆ.ಶಾಮಸುಂದರ : ಜನಾನುರಾಗಿ ಕನ್ನಡ ಅಂತರ್ಜಾಲ ತಾಣ ದಟ್ಸ್ ಕನ್ನಡ ಡಾಟ್ ಕಾಮ್ ಪ್ರಧಾನ ಸಂಪಾದಕ.
ನೃತ್ಯ ರೂಪಕ "ರೂಪ ವಿರೂಪ" : ಪ್ರಸ್ತುತ ಪಡಿಸುವವರು ಜನಪ್ರಿಯ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಕಲಾವಿದ, ಗುರು ಹಾಗೂ ಸಂಯೋಜಕ ಡಾ.ಸಂಜಯ್ ಶಾಂತಾರಾಮ್ ಮತ್ತು ಅವರ ತಂಡ. ಈ ಕಾರ್ಯಕ್ರಮದ ವಿಶೇಷವೆಂದರೆ ಸ್ಥಳೀಯ ಕಲಾವಿದರು ಭಾಗವಹಿಸುತ್ತಿರುವುದು. ಸಂಗೀತ ರಸಮಂಜರಿ ಕಾರ್ಯಕ್ರಮ: ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಪ್ರಥಮ ಬಾರಿಗೆ ಸಿಂಗಪುರದಲ್ಲಿ ತಮ್ಮ 15 ಮಂದಿಯ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸತತ ಮೂರು ಬಾರಿ ಚಲನಚಿತ್ರ ಸಂಗೀತ ನಿರ್ದೇಶನಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದ ಗುರುಕಿರಣ್ ಅವರೊಂದಿಗೆ ಪ್ರಸಿದ್ಧ ಹಿನ್ನೆಲೆ ಗಾಯಕ ಗಾಯಕಿಯರು ನೃತ್ಯ ಕಲಾವಿದರು ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗಾನಕೋಗಿಲೆ ಅರ್ಚನಾ ಉಡುಪ ಮತ್ತು ಮಿಮಿಕ್ರಿ ದಯಾನಂದ್ ಅವರು ಈ ತಂಡದ ವಿಶೇಷ ಆಕರ್ಷಣೆ.
ಈ ಅಪೂರ್ವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮದ ಜೇನನ್ನು ಆಸ್ವಾದಿಸಲು ಸದಭಿರುಚಿಯ ಸಿಂಗಪುರದ ಸಮಸ್ತ ಕನ್ನಡಿಗರೂ ಬರಬೇಕೆಂದು ಜೊತೆಗೆ ತಮ್ಮ ಪರಿವಾರ ಹಾಗೂ ಸ್ನೇಹಿತರನ್ನು ಕರೆದು ತಂದು ಕನ್ನಡಮ್ಮನ ತೇರನ್ನು ಎಳೆಯುವಲ್ಲಿ ತನು ಮನ ಧನದ ಬಲವೂ ಸೇರಬೇಕೆಂದು ರಾಮಚಂದ್ರ ಹೆಗಡೆ ಮನವಿ ಮಾಡಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ. ನೊಂದಾಯಿಸಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications