ಸಿಂಗಪುರ ಕನ್ನಡ ವೈಭವ ಸಮ್ಮೇಳನದ ಕರೆಯೋಲೆ

ಕರ್ನಾಟಕ ವೈಭವ ಸಂಸ್ಥೆಯ ಲಾಂಛನದಲ್ಲಿ ವ್ಯವಸ್ಥೆಯಾಗಿರುವ ಈ ಸಮ್ಮೇಳನ ನಡೆಯುವುದು ನವೆಂಬರ್ 6 ಮತ್ತು 7ರ ಶನಿವಾರ ಮತ್ತು ಭಾನುವಾರ. ಶನಿವಾರ ದೀಪಾವಳಿ ಅಮಾವಾಸ್ಯೆ, ಭಾನುವಾರ ಬಲಿಪಾಡ್ಯಮಿ. ಸಿಂಗಪುರ ಕನ್ನಡಿಗರಿಗೆ ಈ ಬಾರಿ ಕನ್ನಡ ಹಬ್ಬವೇ ದೀಪಾವಳಿ ಆಗುತ್ತಿರುವುದು ಒಂದು ಸೊಗಸು ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಾಮಚಂದ್ರ ಹೆಗಡೆ ಹೇಳಿದ್ದಾರೆ.
ಎರಡು ದಿನಗಳ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ರೂಪುರೇಷೆಗಳು ಇಂತಿವೆ.
ಸಮ್ಮೇಳನದ ತಾಣ : ಸಿಂಗಪುರ ಪಾಲಿಟೆಕ್ನಿಕ್ ಸಭಾಗೃಹ, 500 ಡೋವರ್ ರಸ್ತೆ, ಸಿಂಗಪುರ.
ಕಾರ್ಯಕ್ರಮ ವಿವರ
* ಶನಿವಾರ, ನ. 6 : ಉದ್ಘಾಟನಾ ಸಮಾರಂಭ, ಸಂಜೆ 3.30ರಿಂದ 8.30ರವೆರೆಗೆ ; ಶ್ರೀಲಕ್ಷ್ಮೀ ಪೂಜೆ, ಸಮೂಹ ಗೀತೆಗಳು, ಸಂಗೀತ ನೃತ್ಯ ಕಾರ್ಯಕ್ರಮಗಳು, ಉದ್ಘಾಟನೆ : ಸಮ್ಮೇಳನಾಧ್ಯಕ್ಷ ಜೋಗದ ಸಿರಿಬೆಳಕಿನ ಕವಿ ನಿಸಾರ್ ಅಹಮದ್. 8.30ಕ್ಕೆ ಪಂಕ್ತಿ ಭೋಜನ.
* ಭಾನುವಾರ, ನ. 7 : ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮಹಾಪೂರ. ಗೀತ ಗಾಯನ, ನೃತ್ಯ ಶೋಭೆ, ಸಾಹಿತ್ಯಗೋಷ್ಠಿ, ಕವಿಗೋಷ್ಠಿ. ರಾತ್ರಿ 9ಕ್ಕೆ ಭೋಜನ.
ಸಿಂಗಪುರದ ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ಡಾ.ಸಂಜಯ್ ಶಾಂತಾರಾಮ್ ಅವರು ತಮ್ಮ ತಂಡದೊಂದಿಗೆ "ರೂಪ ವಿರೂಪ" ನೃತ್ಯ ರೂಪಕ ನಡೆಸಿಕೊಡುತ್ತಾರೆ. ಕರ್ನಾಟಕದಿಂದ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸಾಹಿತಿಗಳು, ಕವಿಗಳು, ಪತ್ರಕರ್ತರು ಮತ್ತು ಕಲಾವಿದರು:
ನಾಡೋಜ ಕೆ.ಎಸ್.ನಿಸಾರ್ ಅಹ್ಮದ್ : ನಮ್ಮ ಸಮ್ಮೇಳನಾಧ್ಯಕ್ಷರು, ಸಂವೇದನಾಶೀಲ ಜನಪ್ರಿಯ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ; 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
ಸಾಹಿತಿ ಜಯಂತ ಕಾಯ್ಕಿಣಿ : ಖ್ಯಾತ ಕವಿ, ಲೇಖಕ, ಚಿತ್ರಕಥೆ/ಚಿತ್ರಗೀತೆಗಳ ಲೇಖಕ.
ಪತ್ರಕರ್ತ ವಿಶ್ವೇಶ್ವರ ಭಟ್ : ಕರ್ನಾಟಕದ ನಂ. ಒನ್ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ.
ಪತ್ರಕರ್ತ ಎಸ್.ಕೆ.ಶಾಮಸುಂದರ : ಜನಾನುರಾಗಿ ಕನ್ನಡ ಅಂತರ್ಜಾಲ ತಾಣ ದಟ್ಸ್ ಕನ್ನಡ ಡಾಟ್ ಕಾಮ್ ಪ್ರಧಾನ ಸಂಪಾದಕ.
ನೃತ್ಯ ರೂಪಕ "ರೂಪ ವಿರೂಪ" : ಪ್ರಸ್ತುತ ಪಡಿಸುವವರು ಜನಪ್ರಿಯ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಕಲಾವಿದ, ಗುರು ಹಾಗೂ ಸಂಯೋಜಕ ಡಾ.ಸಂಜಯ್ ಶಾಂತಾರಾಮ್ ಮತ್ತು ಅವರ ತಂಡ. ಈ ಕಾರ್ಯಕ್ರಮದ ವಿಶೇಷವೆಂದರೆ ಸ್ಥಳೀಯ ಕಲಾವಿದರು ಭಾಗವಹಿಸುತ್ತಿರುವುದು. ಸಂಗೀತ ರಸಮಂಜರಿ ಕಾರ್ಯಕ್ರಮ: ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಪ್ರಥಮ ಬಾರಿಗೆ ಸಿಂಗಪುರದಲ್ಲಿ ತಮ್ಮ 15 ಮಂದಿಯ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸತತ ಮೂರು ಬಾರಿ ಚಲನಚಿತ್ರ ಸಂಗೀತ ನಿರ್ದೇಶನಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದ ಗುರುಕಿರಣ್ ಅವರೊಂದಿಗೆ ಪ್ರಸಿದ್ಧ ಹಿನ್ನೆಲೆ ಗಾಯಕ ಗಾಯಕಿಯರು ನೃತ್ಯ ಕಲಾವಿದರು ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗಾನಕೋಗಿಲೆ ಅರ್ಚನಾ ಉಡುಪ ಮತ್ತು ಮಿಮಿಕ್ರಿ ದಯಾನಂದ್ ಅವರು ಈ ತಂಡದ ವಿಶೇಷ ಆಕರ್ಷಣೆ.
ಈ ಅಪೂರ್ವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮದ ಜೇನನ್ನು ಆಸ್ವಾದಿಸಲು ಸದಭಿರುಚಿಯ ಸಿಂಗಪುರದ ಸಮಸ್ತ ಕನ್ನಡಿಗರೂ ಬರಬೇಕೆಂದು ಜೊತೆಗೆ ತಮ್ಮ ಪರಿವಾರ ಹಾಗೂ ಸ್ನೇಹಿತರನ್ನು ಕರೆದು ತಂದು ಕನ್ನಡಮ್ಮನ ತೇರನ್ನು ಎಳೆಯುವಲ್ಲಿ ತನು ಮನ ಧನದ ಬಲವೂ ಸೇರಬೇಕೆಂದು ರಾಮಚಂದ್ರ ಹೆಗಡೆ ಮನವಿ ಮಾಡಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ. ನೊಂದಾಯಿಸಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications