ಅಕ್ಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ
ಉದಯೋನ್ಮುಖ ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈಬಾರಿ ಅಕ್ಕ' ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿತ್ತು. ನಗದು ಬಹುಮಾನಗಳನ್ನು ಒಳಗೊಂಡ ಕಥಾಸ್ಪರ್ಧೆಯಲ್ಲಿ ವಿಜೇತರ ಹೆಸರುಗಳು ಇಂತಿವೆ.
ಮೊದಲನೇ ಬಹುಮಾನ: ನವೀನ ಭಟ್ ಗಂಗೋತ್ರಿ (ದೀಪ ತೋರಿದೆಡೆಗೆ')
ಎರಡನೇ ಬಹುಮಾನ: ಸಿರಿ ಹುಲಿಕಲ್ ('ನಡೆದಷ್ಟೂ ದಾರಿ ದೂರ')
ಮೂರನೇ ಬಹುಮಾನ: ವೈ.ಎಂ. ಶರಣ್ ಹಂಪಿ (ಸಾವಿನ ಮನೆ').
ಸ್ಪರ್ಧೆಗೆ ಬಂದಿದ್ದ ನೂರೈವತ್ತು ಕಥೆಗಳನ್ನು ಓದಿ ಫಲಿತಾಂಶ ನಿರ್ಧರಿಸಿದವರು ಡಾ.ವೀಣಾ ಶಾಂತೇಶ್ವರ, ಅಬ್ದುಲ್ ರಶೀದ್ ಮತ್ತು ಎಸ್.ದಿವಾಕರ್. ಕೃತಿಯ ಪ್ರಧಾನ ಸಂಪಾದಕರು ಡಾ.ಮೈ.ಶ್ರೀ.ನಟರಾಜ್ ಮತ್ತು ಸಹಸಂಪಾದಕಿಯರಾದ ನಳಿನಿ ಮೈಯ ಮತ್ತು ತ್ರಿವೇಣಿ ಶ್ರೀನಿವಾಸ ರಾವ್. ಸಮ್ಮೇಳನ ಸಾಹಿತ್ಯ ಸಮಿತಿಯ ಸಹ ಅಧ್ಯಕ್ಷ ಮತ್ತು ಸಲಹೆಗಾರರು ಎಚ್.ವೈ.ರಾಜಗೋಪಾಲ್.
ಕಥಾಸ್ಪರ್ಧೆಗೆ 150ಕ್ಕೂ ಹೆಚ್ಚು ಕಥೆಗಳು ಬಂದಿದ್ದರಿಂದ ಅಂತಿಮ ಸುತ್ತಿಗೆ ಹದಿನೈದರ ಬದಲಾಗಿ ಇಪ್ಪತ್ತು ಅತ್ಯುತ್ತಮ ಕಥೆಗಳನ್ನು ಆಯಲಾಗಿತ್ತು. ಈ ಎಲ್ಲ ಇಪ್ಪತ್ತು ಕಥೆಗಳ ಕಥಾಸಂಕಲನ 'ದೀಪ ತೋರಿದೆಡೆಗೆ'ಯನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಒಟ್ಟು 2500 ಪ್ರತಿಗಳನ್ನು ಮುದ್ರಿಸಲಾಗಿದ್ದು, ಕಥೆಗಾರರಿಗೆ ಎರಡೆರಡು ಪ್ರತಿಗಳನ್ನು ನೀಡಲಾಗುವುದು ಎಂದು ಸಂಪಾದಕೀಯ ಮಂಡಳಿ ಹೇಳಿದೆ.
ಸ್ಮರಣಸಂಚಿಕೆ ಮತ್ತು ಅಕ್ಕ ಪ್ರಕಟಣೆಗಳು : ಕನ್ನಡಿಗರ ಸಮ್ಮೇಳನ ಕೊನೆಗೂ ಉಳಿಸಿಹೋಗುವುದು ನೆನಪಿನ ಬುತ್ತಿಗಳು ಮತ್ತು ಅಳಿಸಲಾಗದ ಅಕ್ಷರಸಂಪತ್ತುಗಳು. ಈ ಸಮ್ಮೇಳನದಲ್ಲಿ ಒಟ್ಟು ಐದು ಪುಸ್ತಕಗಳು ಅಕ್ಕ' ವತಿಯಿಂದ ಸಮ್ಮೇಳನಾರ್ಥಿಗಳ ಕೈಚೀಲ ಸೇರಿದವು. ಸಮ್ಮೇಳನ ಸ್ಮರಣ ಸಂಚಿಕೆ ಸಿಂಚನ', ಉದಯೋನ್ಮುಖ ಕಥೆಗಾರರ ಕಥಾಸಂಕಲನ ದೀಪ ತೋರುವೆಡೆಗೆ', ವೈಚಾರಿಕ ಪ್ರಬಂಧ ಸಂಪುಟ ಕನ್ನಡ ಪ್ರಜ್ಞೆ' (ಸಂಪಾದಕ: ಸತೀಶ್ ಹೊಸನಗರ), ಮಕ್ಕಳಿಗಾಗಿಯೇ ಹೊರತಂದ ವಿಶೇಷ ಸಂಚಿಕೆ ಗುಬ್ಬಿಗೂಡು' (ಸಂಪಾದಕಿ: ಮೀರಾ ಪಿ.ಅರ್) ಮತ್ತು ಸಮ್ಮೇಳನ ಕಾರ್ಯಕ್ರಮಗಳ ದಾಖಲೆ ರಂಜಿನಿ' ಇವೇ ಆ ಐದು ಹೊತ್ತಗೆಗಳು. ಈ ಎಲ್ಲ ಕೃತಿಗಳ ಪ್ರಕಟಣೆಯ ಹಿಂದೆ ನುರಿತ ಸಂಪಾದಕವರ್ಗದ, ಪ್ರಬುದ್ಧ ಮತ್ತು ಉತ್ಸಾಹಿ ಲೇಖಕರ ಲೇಖನ ವ್ಯವಸಾಯ ಕನ್ನಡ ಸಾಹಿತ್ಯದ ಫಲಗಳಲ್ಲಿ ತನ್ನ ಛಾಪನ್ನು ಬಹುಕಾಲ ಕಾಪಿಡುವುದರಲ್ಲಿ ಸಂಶಯವಿಲ್ಲ.
ಬಿಡುಗಡೆಯ ಸಂಭ್ರಮ : ಲಹರಿ ರೆಕಾರ್ಡಿಂಗ್ ಕಂಪೆನಿ ಅಕ್ಕ' ಸಮ್ಮೇಳನ ನಿಮಿತ್ತ ಹೊರತಂದ ಮುನ್ನೂರು ಹಾಡುಗಳ ಧ್ವನಿಸಂಪುಟವನ್ನು ಅಕ್ಕ ಅಧ್ಯಕ್ಷ ಅಮರನಾಥ ಗೌಡ ಬಿಡುಗಡೆ ಮಾಡಿದರು. ಲಹರಿಯ ವೇಲು ಉಪಸ್ಥಿತರಿದ್ದರು. ಪ್ರೊ.ಕೃಷ್ಣೇಗೌಡರ ಹಾಸ್ಯರಸಾಯನದ ಸಿ.ಡಿ ಸಂಪುಟ (ಹಾಸ್ಯದ ಹೊನಲು') ವನ್ನೂ ಅಮರನಾಥ ಗೌಡ ಬಿಡುಗಡೆ ಮಾಡಿದರು. ಶನಿವಾರ ಬಿಡುಗಡೆಯ ಭಾಗ್ಯ ಕಂಡ ಇನ್ನೊಂದು ಕೃತಿ ಮನು ಬಳಿಗಾರ್ ಅವರ ಕೆಲವು ಕತೆಗಳು'. ಸಿ.ಡಿಗಳು ಮತ್ತು ಪುಸ್ತಕ ಪರಿಚಯ ಕಪ್ಪಣ್ಣ ಮತ್ತು ಯಶವಂತ ಸರದೇಶಪಾಂಡೆ ಅವರಿಂದ.
ಅಕ್ಕ ಸಮ್ಮೇಳನ ಸೌಂದರ್ಯ ಸ್ಪರ್ಧೆಯ ಚಿತ್ರಪಟ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications