ಕೊನೆಯ ದಿನ ಕೊನೆಯಾಗದ ಹರ್ಷ

ಮೊದಲೆರಡು ದಿನಗಳಲ್ಲಿ ಕಂಡು ಬಂದ ಗೊಂದಲ-ಗಲಿಬಿಲಿಯನ್ನು ನಿವಾರಿಸಿದ ಪರಿಣಾಮವೋ ಅಥವಾ ಅದಕ್ಕೆ ಎಲ್ಲರೂ ಹೊಂದಿಕೊಂಡಿದುದರ ಫಲವೋ ಏನೊ. ಅಂತೂ ಕೊನೆಯ ದಿನ ಸಾಕಷ್ಟು ಮೌಲಿಕವಾಗಿದ್ದಂತೂ ನಿಜ. ಸ್ಥಳೀಯರಲ್ಲಿ ಸ್ವಾತಂತ್ರ್ಯ ದಿನದ ಸಡಗರ ಏನೂ ಕಂಡು
ಬರಲಿಲ್ಲ.
ಗ್ಯಾಲರಿ: ನಾವಿಕ ಸಮ್ಮೇಳನದ ವರ್ಣರಂಚಿತ ಚಿತ್ರಗಳು
ಆದರೆ ಇಲ್ಲಿನ ಕನ್ನಡಿಗರು ಮಾತ್ರ ಮೆರವಣಿಗೆ ನಡೆಸಿ ಸಂತಸಪಟ್ಟರು. ಬೆಳಗ್ಗೆ ನಡೆದ ಈ ಶೋಭಾಯಾತ್ರೆ ಎಲ್ಲರ ಮನಸೂರೆಗೊಂಡಿತು. ಮುಖ್ಯ ವೇದಿಕೆಯಲ್ಲಂತೂ ಸಹಜವಾಗಿ ಹಲವು ಪ್ರಮುಖ ಕಾರ್ಯಕ್ರಮಗಳು ನಡೆದವು. ಆದರೆ ಪರ್ಯಾಯ ವೇದಿಕೆಯಲ್ಲಿ ನಡೆದ ಬಹುತೇಕ ಎಲ್ಲ ಕಾರ್ಯಕ್ರಮಗಳೂ ಅದಕ್ಕೆ ಜಿದ್ದಿಗೆ ಬಿದ್ದಂತೆ ಉತ್ತಮವಾಗಿ ನಡೆದವು.
ಅಮೆರಿಕದಲ್ಲಿ ನೆಲೆ ನಿಂತವರು ರಚಿಸುವ ಕೃತಿಗಳ ಆಳ- ಅಗಲ, ವಿಸ್ತಾರದ ಬಗ್ಗೆ ಗಂಭೀರ ಚರ್ಚೆ, ವಿಮರ್ಶೆ ನಡೆಸಿದರೆ ಅದೇ ಒಂದು ಸಾಹಿತ್ಯ ಪ್ರಕಾರವಾಗಬಲ್ಲದು ಎಂಬುದನ್ನು ಅರವಿಂದ ಮಾಲಗತ್ತಿಯವರು ವಿಶದವಾಗಿ ವಿವರಿಸಿದರು. ಆದರೆ ಈ ವೇದಿಕೆಯ ಕಲಾಪದ ಹೈಲೈಟ್ ಎಂದರೆ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರು ನಡೆಸಿಕೊಟ್ಟ ಸಂವಾದ.
ಹೃದಯಕ್ಕೆ ಹತ್ತಿರವಾದ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ವಿನಿಮಯ ಮಾಡಿಕೊಳ್ಳುವ ಮೂಲಕ ಅವರು ಇಡೀ ಸಂವಾದದ ಆಯಾಮವನ್ನು ಎತ್ತರಕ್ಕೆ ಕೊಂಡೊಯ್ದರು. ಮುಖ್ಯ ವೇದಿಕೆಯಲ್ಲಿ ಒಂದೇ ದಿನ 6 ನಾಟಕಗಳು ಪ್ರದರ್ಶನಗೊಂಡವು.
ಈ ಪೈಕಿ ವಲ್ಲೀಶ ಶಾಸ್ತ್ರಿ ಮತ್ತು ತಂಡ ಅಭಿನಯಿಸಿದ ತಿರುಗೇಟು ನಾಟಕವು ಗಮನಸೆಳೆಯಿತು. ವೈಜಯಂತಿ ಕಾಶಿ ಮತ್ತು ತಂಡದವರು ಪ್ರಸ್ತುತಪಡಿಸಿದ ನೃತ್ಯರೂಪಕ ಅದ್ಭುತ, ಅಮೋಘವಾಗಿತ್ತು.
ಕಿಕ್ಕೇರಿ ಕೃಷ್ಣಮೂರ್ತಿ, ಜೆನ್ನಿ, ಪ್ರಕಾಶ್ ಸೊಂಟಕ್ಕೆ ಅವರ ಸಂಗೀತ ಸುಧೆಯನ್ನೂ ಎಲ್ಲರೂ ಸವಿದರು. ಇದರ ಮಧ್ಯೆ ಅಧಿಕಾರ ಹಸ್ತಾಂತರ, ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ವಂದನಾರ್ಪಣೆ ಕಾರ್ಯಕ್ರಮಗಳು ನಡೆದವು.
ಬಳಿಕ ದಿನದ ಕಾರ್ಯಕ್ರಮದ ಹೈಲೈಟ್ ಎಂದರೆ ಶಿವರಾಜ್ ಕುಮಾರ್, ಜೆನ್ನಿಫರ್ ಕೊತ್ವಾಲ್, ಶರ್ಮಿಳಾ ಮಾಂಡ್ರೆ ಮೊದಲಾದವರು ಭಾಗವಹಿಸಿದ್ದ ಸಂಗೀತ ಕಾರ್ಯಕ್ರಮ. ಒಟ್ಟಾರೆ ನಾವಿಕ ಸಮ್ಮೇಳನದ ಮೂರೂ ದಿನಗಳ ಕಲಾಪ ಅದ್ಭುತ ಎನ್ನುವಂತೆ ನಡೆಯಲಿಲ್ಲವಾದರೂ ಅಲ್ಲೊಂದು ಕನ್ನಡದ ಕಲರವ ಕೇಳಿ ಬಂದಿದ್ದಂತೂ ಹೌದು. ಅಷ್ಟರಮಟ್ಟಿಗೆ ಇದೊಂದು ಯಶಸ್ವಿ ಪ್ರಯತ್ನ.
ಆದರೆ ಕಲಾವಿದರ ಉಪೇಕ್ಷೆ, ಸಂಘಟನೆ, ವ್ಯವಸ್ಥೆಯ ಕೊರತೆ ಒಂದು ಕಪ್ಪು ಚುಕ್ಕೆಯಾಗಿ ಉಳಿದುಹೋಯಿತು. ಇನ್ನೊಂದಿಷ್ಟು ಪ್ರೀತಿ, ಆತ್ಮೀಯತೆ, ಶಿಸ್ತು, ಸೌಜನ್ಯ ಬೆರೆತಿದ್ದರೆ ಅದು ಸ್ಮರಣೀಯ ಎನಿಸುತ್ತಿತ್ತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications