ನಾವಿಕದಲ್ಲಿ ಸ್ವಿಚ್ಚೇವು ಕನ್ನಡದ ದೀಪ!

ಅಮೆರಿಕದಲ್ಲಿ ನಡೆಯುತ್ತಿರುವ ಕನ್ನಡದ ರಥೋತ್ಸವದಲ್ಲಿ ತೇರೆಳೆಯುವ ಕಾರ್ಯದಲ್ಲಿ ತಾವೂ ಭಾಗಿಯಾಗಲು ದೂರದ ಭಾರತದಿಂದ ಉತ್ಸಾಹದಿಂದ ಆಗಮಿಸಿದ ಸರಕಾರದ ಪ್ರತಿನಿಧಿಗಳಿಗೆ ಹಾಗೂ ಇತರರಿಗೆ ತೋರಿದ ಕೊಂಚ ತಣ್ಣನೆಯ ಪ್ರತಿಕ್ರಿಯೆಯಿಂದ ಮೊದಲು ಗಲಿಬಿಲಿ ಹಾಗೂ ಬೇಸರ ಮೂಡಿಸಿದ್ದು ನಿಜ. ಇದು ಸಮಾವೇಶದ ಉದ್ಘಾಟನಾ ಸಮಾವೇದಲ್ಲಿ ಎದ್ದು ಕಂಡಿತು.
ಐದೇ ನಿಮಿಷದಲ್ಲಿ ಭಾಷಣ ಮುಗಿಸುವಂತೆ ಸ್ಪೀಕರ್'ಗೇ ರೂಲಿಂಗ್ ನೀಡಿದ್ದರಿಂದ ಬೆದರಿದ ಹರಿಣಿಯಂತಾದ ಮುಖ್ಯ ಅತಿಥಿಗಳು ಭಾಷಣ ಒಪ್ಪಿಸಿ ಬರುವ ಶಾಸ್ತ್ರ ಮಾಡಬೇಕಾಯಿತು. ಹಾಗೆಂದು ಇದನ್ನೇ ದೊಡ್ಡದು ಮಾಡದೆ ಎಲ್ಲರೂ ಸ್ವಭಾವಜನ್ಯ ಹೃದಯ ವೈಶಾಲ್ಯ ಮೆರೆದಿದ್ದರಿಂದ ಮುಂದಿನ ಎಲ್ಲ ಕಾರ್ಯಕ್ರಮಗಳೂ ಸಾಂಗವಾಗಿ ನೆರವೇರಿದವು.
ನಾವಿಕ ಸಮ್ಮೇಳನ ಫೋಟೋಗಳು
ಉದ್ಘಾಟನಾ ಕಾರ್ಯಕ್ರಮ ನಡೆದ ಮುಖ್ಯ ಸಭಾಂಗಣ ನಾವಿಕ'ರಂಗ ಮಂದಿರವು ಪಾರಂಪರಿಕ ಸೌಂದರ್ಯದಿಂದ ಕೂಡಿದ ಪುರಾತನ ಕಟ್ಟಡ. ಈ ಬೃಹತ್, ಭವ್ಯ ಸಭಾ ಕೇಂದ್ರಕ್ಕೆ ಕುಸುರಿ ಕಲೆಯ ಪ್ರಸಾಧನ ಬಹಳ ಚೆನ್ನಾಗಿ ಒಪ್ಪಿದೆ. ಕಾರ್ಯಕ್ರಮ ಉದ್ಘಾಟನೆ ಕಾಲಕ್ಕೆ ಹಚ್ಚೇವು ಕನ್ನಡದ ದೀಪ' ಗೀತೆ ಸಂಪ್ರದಾಯದಂತೆ ಮೂಡಿ ಬರುತ್ತಿದ್ದಂತೆ ಪುಟಾಣಿಗಳು ಎಲ್ಲ ಅತಿಥಿಗಳ ಕೈಗೂ ಒಂದೊಂದು ಹಣತೆಯನ್ನು ಕೊಟ್ಟವು. ಹಣತೆಯನ್ನು ಹಚ್ಚುವ ಕೆಲಸವನ್ನು ಅತಿಥಿಗಳೇ ಮಾಡಬೇಕಿತ್ತು. ಆದರೆ ಅಲ್ಲಿ ಬೆಂಕಿ ಕಡ್ಡಿಯಾಗಲೀ, ಮೇಣಬತ್ತಿಯಾಗಲೀ ಇರಲಿಲ್ಲ. ಎಲ್ಲರೂ ಗೊಂದಲಕ್ಕೆ ಒಳಗಾಗುವ ಮೊದಲೇ ನಾವಿಕದ ಅಧ್ಯಕ್ಷರು, ದೀಪದ ಕೆಳಗೆ ಸ್ವಿಚ್ಚಿದೆ; ಅದನ್ನು ಅದುಮಿದರೆ ಸಾಕು ಎಂದು ಹೇಳಿದ್ದೇ ತಡ ಹಣತೆ ಬೆಳಗತೊಡಗಿದವು. ಲಾಸ್ ಏಂಜಲೀಸ್ ನಗರದಲ್ಲಿ ಯಾರೂ ಬೆಂಕಿ ಹಚ್ಚುವ' ಕೆಲಸ ಮಾಡುವಂತಿಲ್ಲ ಎಂಬ ನಿಯಮ ಇರುವ ಕಾರಣ ಈ ಹೊಸ ಆವಿಷ್ಕಾರ ಎಷ್ಟಾದರೂ ಇದು ತಂತ್ರಜ್ಞರ ತವರು ತಾನೆ? ಇಷ್ಟೆಲ್ಲ ಆಗುತ್ತಿರುವಂತೆ ಸಭಿಕರ ಸಾಲಿನಿಂದ ಕೇಳಿ ಬಂದ ಉದ್ಗಾರ ಸ್ವಿಚ್ಚೇವು ಕನ್ನಡದ ದೀಪ' ಎಂದು ಹಾಡುವುದು ಸೂಕ್ತ!
ಅದೇ ಸಭಾಂಗಣದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ವೈಜಯಂತಿ ಕಾಶಿ ತಂಡದವರಿಂದ ನೃತ್ಯ, ಸುಮಾ ಸುಧೀಂದ್ರರ ವೀಣಾ ವಾದನ, ಸ್ಥಳೀಯ ಕಲಾವಿದರಿಂದ ಎರಡು ನಾಟಕಗಳು. ಪುಷ್ಕಳ ಭೋಜನದ ಬಳಿಕ ಮತ್ತೊಂದು ಸುತ್ತಿನ ಕಾರ್ಯಕ್ರಮಗಳು.
ಈ ಅವಧಿಯ ಮತ್ತೊಂದು ಉತ್ತಮ ಕಾರ್ಯಕ್ರಮ ಎಂದರೆ ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ರಾಶಿ ಚಕ್ರ' ಏಕ ವ್ಯಕ್ತಿ ಹಾಸ್ಯ ಪ್ರಸಂಗಗಳು. ದ್ವಾದಶ ರಾಶಿಯವರ ಗುಣಸ್ವಭಾವಗಳು ನವಿರು ಹಾಸ್ಯದ ಮೂಲಕ, ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಅವರು ಪ್ರಸ್ತುತಪಡಿಸುತ್ತಿದ್ದಂತೆ ಕಿಕ್ಕಿರಿದು ನೆರೆದಿದ್ದ ಸಭಿಕರು ನಗೆಗಡಲಲ್ಲಿ ತೇಲಿದರು. ಯಶವಂತ್ ಅವರ ಹಾಸ್ಯಪ್ರಜ್ಞೆಗೆ ಭಲೇ ಎಂದರು. ಪ್ರತಿಭೆಗೆ ಭೇಷ್ ಎಂದರು. ಅಂತೂ, ಆಲ್ ದಿ ಬೆಸ್ಟ್ ಹೇಳಿಸಿಕೊಂಡು ಹೋಗಿದ್ದ ಈ ಕಲಾವಂತ, 45 ನಿಮಿಷದ ಕಾರ್ಯಕ್ರಮ ಮುಗಿಸಿದಾಗ ಎಲ್ಲರೂ ಅಂದುಕೊಂಡಿದ್ದು ಸಹಿ ರೀ ಸಹಿ'.
ಗಮನ ಸೆಳೆದ ಮತ್ತೊಂದು ಕಾರ್ಯಕ್ರಮ ಎಂದರೆ ಮಂಟಪ ಉಪಾಧ್ಯಾಯರ ಯಕ್ಷಗಾನ. ಆಗ್ರಹಪೂರ್ವಕ ಆಹ್ವಾನಕ್ಕೆ ಮಣಿದು ಇಲ್ಲಿಗೆ ಆಗಮಿಸಿರುವ ಈ ಸೂಕ್ಷ್ಮ ಮನಸ್ಸಿನ, ಸಂಭಾವಿತ ಪ್ರತಿಭಾವಂತ ಕಲಾವಿದ ಇಲ್ಲಿನ ವ್ಯವಸ್ಥೆ ಕಂಡು ಪೆಚ್ಚಾಗಿದ್ದು ಸುಳ್ಳಲ್ಲ. ಆದರೆ ವಾಸ್ತವವನ್ನು ಅರಿತು ಸುಧಾರಿಸಿಕೊಂಡ ಅವರು ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಧೋರಣೆಗೆ ಶರಣಾಗಿದ್ದರು. ಇದೆಲ್ಲದರ ನಡುವೆಯೂ ಅವರ ಯಕ್ಷಗಾನ ಪ್ರದರ್ಶನ ಮನಸೂರೆಗೊಂಡಿತು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications