ನ್ಯೂ ಜೆರ್ಸಿ ಸಮ್ಮೇಳನದಲ್ಲಿ 'ಅಕ್ಕ ಕ್ರಿಕೆಟ್ ಲೀಗ್'

ಕೇಳಲು ಇಂಪಾದ 'ಸೈಕೋ' ಖ್ಯಾತಿಯ ರಘು ದೀಕ್ಷಿತರ 'ಲೈವ್ ಆರ್ಕೆಸ್ಟ್ರಾ', ಜೊತೆಗೆ ಪ್ರಪ್ರಥಮ ಬಾರಿಗೆ ನೋಡಲು ಸೊಗಸಾದ ಕ್ರಿಕೆಟ್ ಆಟ. 'ಅಕ್ಕ ಕ್ರಿಕೆಟ್ ಲೀಗ್' ಇದೆ ಜೂನ್ 26, ಶನಿವಾರದಂದು ನ್ಯೂ ಜೆರ್ಸಿಯಲ್ಲಿ ಆರಂಭವಾಗುತ್ತಿದೆ. ಅಮೆರಿಕದ ಆರು ಪಟ್ಟಣಗಳಿಂದ ಬಂದಿರುವ ಒಟ್ಟು 8 ಕ್ರಿಕೆಟ್ ಟೀಮ್ ಗಳ ನಡುವೆ ಮೊದಲು ಲೀಗ್, ನಂತರ ನಾಕ್ ಔಟ್ ಮ್ಯಾಚ್ ಗಳು ನಡೆಯಲಿದ್ದು, ಫೈನಲ್ಸ್ ಪಂದ್ಯವನ್ನು ಅಕ್ಕ ಸಮ್ಮೇಳನದ ಸಮಯದಲ್ಲಿ ನಡೆಸಲಾಗುವುದು.
"ಆಟ ಊಟ ನೋಟ ಕನ್ನಡ ಒಂದನೆ ಪಾಠ" ಎಂಬಂತೆ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಈ ಮೂರಕ್ಕು ವಿಶಿಷ್ಟವಾದ ರೀತಿಯಲ್ಲಿ ಪ್ರಾಶಸ್ತ್ಯ ಕೊಡಲಾಗುತ್ತಿದೆ. ವಿನೂತನ ಶೈಲಿಯಲ್ಲಿ ನಡೆಯುವ ಕನ್ನಡ ಸಿನಿಮಾ ತಾರೆಯರ ತಾರಾಮೇಳ "ಸ್ಟಾರ್ ನೈಟ್" ಬಗೆಗಿನ ವಿಚಾರವನ್ನು ಶೀಘ್ರದಲ್ಲೇ ಬಿಡುಗಡೆಮಾಡಲಾಗುವುದು.
ಪ್ರಭಾತ ಕಲಾವಿದರ ನೃತ್ಯ, ರಘು ದೀಕ್ಷಿತ್ ಲೈವ್ ಆರ್ಕೇಸ್ಟ್ರ, ಬಾಲಮುರಳಿಯವರ ಗಾಯನ, ಬನ್ನಂಜೆ ಅವರ ಪ್ರವಚನ, ವಿನೂತನ ತಾರಮೇಳ 'ಸ್ಟಾರ್ ನೈಟ್', ಹರಿಕಥೆ, ಯಕ್ಷಗಾನ, ನಾಟಕ, ನೃತ್ಯ, ಪ್ರಹಸನ, ಸಾಹಿತ್ಯ ಸಂಕಿರಣ, ನಗೆ ಹಬ್ಬ, ಆಧ್ಯಾತ್ಮ, ಬಿಸಿನೆಸ್ಸ್ ಫೋರಮ್, ಯೂತ್ ಫೋರಮ್, ಸಿ.ಎಮ್.ಇ, ಮಿಸ್ ಅಕ್ಕ, ಫ್ಯಾಶನ್ ಶೊ, ಮ್ಯಾಜಿಕ್ ಶೊ, ವಧು-ವರರ ಅನ್ವೇಷಣೆಗೆ 'ಸಿಂಗಲ್ಸ್ ಮೀಟ್', ಕಾಲೇಜಿನ ಹಳೆಯ ವಿದ್ಯಾರ್ಥಿಗಳ 'ಅಲುಮ್ನಿ ಮೀಟ್', ಸಂಗೀತ ಸ್ಪರ್ಧೆ 'ಅಕ್ಕ ಐಡಲ್', ಸಮೂಹ ನೃತ್ಯ ಸ್ಪರ್ಧೆ - 'ಡ್ಯಾನ್ಸ್ ಅಕ್ಕ ಡ್ಯಾನ್ಸ್', ಅಕ್ಕ ಕ್ರಿಕೆಟ್ ಲೀಗ್...
ಅಬ್ಬಬ್ಬಬ್ಬಬ್ಬ... ಇವೆಲ್ಲ ಇದೆ ಅಂತ ಗೊತ್ತಾದ ಮೇಲು ನೀವಿನ್ನೂ ಸಮ್ಮೇಳನಕ್ಕೆ ನೋಂದಾಯಿಸಿಲ್ಲವ?....ತಡ ಏಕೆ ಮಾಡುವಿರಿ? ಜೂನ್ 30ರೊಳಗೆ ರಿಯಾಯಿತಿ ದರದಲ್ಲಿ ನೋಂದಾಯಿಸಿರಿ. ಹೆಚ್ಚಿನ ವಿವರಗಳಿಗೆ ಹಾಗು ನೋಂದಾಯಿಸಲು ಅಕ್ಕ ವೆಬ್ ಸೈಟ್ ಗೆ ಭೇಟಿ ಕೊಡಿ. ನಿಮ್ಮ ಸ್ನೇಹಿತರಿಗೂ ನೋಂದಾಯಿಸಲು ದಯವಿಟ್ಟು ತಿಳಿಸಿ.
ಬನ್ನಂಜೆ ಅವರ ಪ್ರವಚನ - ತಿಳಿಯಲು ಬನ್ನಿ
ಪ್ರಭಾತ್ ಕಲಾವಿದರ ನೃತ್ಯ - ನೋಡಲು ಬನ್ನಿ
ರಘು ದೀಕ್ಷಿತರ ಹಾಡನು - ಕೇಳಲು ಬನ್ನಿ
ಕರ್ನಾಟಕದ ತಿಂಡಿಯೂಟವನು - ಸವಿಯಲು ಬನ್ನಿ
ಸಮ್ಮೇಳನ ಕಾರ್ಯಕಾರಿ ಸಮಿತಿ
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications