ಅಕ್ಕ ಕನ್ನಡ ಕೈಪಿಡಿಗೆ ಮಾಹಿತಿ ಆಹ್ವಾನ

ಕನ್ನಡ ಭಾಷೆ, ಕಲೆ, ಮತ್ತು ಸಂಸ್ಕ್ರತಿಗಳನ್ನು ಹೆಮ್ಮೆಯಿಂದ ಮತ್ತು ಶ್ರದ್ಧೆಯಿಂದ ಅಳವಡಿಸಿಕೊಳ್ಳುವುದಲ್ಲದೆ ಕನ್ನಡ ಸಂಸ್ಕೃತಿಯನ್ನು ಕಾಯಾ ವಾಚಾ ಮನಸಾ ಹರಡುತ್ತಿರುವ ಕನ್ನಡ ಕೂಟ, ಕನ್ನಡ ಸಂಘ ಮತ್ತಿತರ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆಗಳು ಅಮೆರಿಕಾ ನೆಲದಲ್ಲಿ ನಡೆದುಬಂದ ದಾರಿಯನ್ನು ಪುಸ್ತಕ ಕೈಪಿಡಿಯಲ್ಲಿ ಅಡಕಮಾಡುವುದು ಈ ಪ್ರಯತ್ನದ ಉದ್ದೇಶವಾಗಿದೆ.
ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಅಂಗವಾಗಿ, ಅಕ್ಕ ಸಂಸ್ಥೆ ಹೊರತರುತ್ತಿರುವ 'ಅಮೆರಿಕನ್ನಡ ಕೈಪಿಡಿ' ಇದಾಗಿದೆ. "ಬಾರಿಸು ಕನ್ನಡ ಡಿಂಡಿಮವ" ಶೀರ್ಷಿಕೆಯಲ್ಲಿ ಪ್ರಕಟವಾಗುವ, ಉದ್ದೇಶಿತ ಕೈಪಿಡಿಯನ್ನು ಬರುವ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂ ಜೆರ್ಸಿಯಲ್ಲಿ ಜರುಗುವ ಆರನೇ ಅಕ್ಕ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುತ್ತದೆ.
ನಿಮ್ಮ ಕನ್ನಡ ಕೂಟ, ಕನ್ನಡ ಶಾಲೆ, ಸಂಗೀತ ಶಾಲೆ, ನೃತ್ಯ ಶಾಲೆ, ರಂಗಸಂಸ್ಥೆ, ಸಾಹಿತ್ಯ ಕುಟೀರ, ಚಲನಚಿತ್ರ, ದಾನ ದತ್ತಿ ಯೋಜನೆಗಳು, ಧಾರ್ಮಿಕ ಚಟುವಟಿಕೆ ಮುಂತಾದುವುಗಳ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಈ ಮೂಲಕ ಕೋರಲಾಗುತ್ತಿದೆ.
ಉತ್ತರ ಅಮೆರಿದಕಾದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆ ಮತ್ತು ಕನ್ನಡ ಜನರ ಬೆಸುಗೆಗೆ ವಿಶಿಷ್ಟ, ಅತಿ ವಿಶಿಷ್ಟವಾದ ಕಾಣಿಕೆ ಸಲ್ಲಿಸಿದ ಮಹನೀಯರು ಮತ್ತು ಮಹಿಳೆಯರು ತಮ್ಮ ಸೇವಾ ವಿವರಗಳನ್ನು ಸಂಕ್ಷಿಪ್ತವಾಗಿ ಬರೆದು ಅದರ ಜತೆಗೆ ತಮ್ಮ ಭಾವಚಿತ್ರ ಲಗತ್ತಿಸಿ ಕಳಿಸಬೇಕು.
ಬರಹದ ರೂಪ ರೇಷೆಗಳು:
* ನೀವು ಕಳಿಸುವ ಮಾಹಿತಿ ಬರಹ 7.0 ಅಥವಾ ಯೂನಿಕೋಡ್ ನಲ್ಲಿರಲಿ.
* ಲೇಖನಗಳು ಅಥವಾ ಮಾಹಿತಿ 5 ಪುಟಗಳಿಗೆ ಮೀರಬಾರದು
* ಮಾಹಿತಿಯನ್ನು ಈ ವಿಳಾಸಕ್ಕೆ ಕಳಿಸಿ : ಕೆ. ಶ್ರೀನಿವಾಸ ಭಟ್, ಸಿಯಾಟಲ್ [[email protected]]
ವಿವರಗಳು ಅನುಕ್ರಮವಾಗಿ ಈ ಕೆಳಗೆ ಸೂಚಿಸಿರುವಂತೆ ಇರಬೇಕು:
* ನಿಮ್ಮ ಸಂಸ್ಥೆಯ ಹೆಸರು ; ಊರು ಕೇರಿಯ ಹೆಸರು
* ಈ ವರ್ಷದ ಆಡಳಿತ ಮಂಡಳಿ ಸದಸ್ಯರ ಒಂದು ಗ್ರೂಪ್ ಫೋಟೊ
* ನಿಮ್ಮ ಸಂಸ್ಥೆ ಸ್ಥಾಪನೆ ಆದ ವರ್ಷ
* ಸಂಸ್ಥೆಯನ್ನು ಸ್ಥಾಪಿಸಿದವರು (ಕಮಿಟಿ)
* ಮೊದಲನೆ ಸಮಿತಿಯ ಸದಸ್ಯರ ಗ್ರೂಪ್ ಫೋಟೊ (ಲಭ್ಯವಿದ್ದರೆ)
* ಈಗ ಇರುವ ಸದಸ್ಯರ ಒಟ್ಟು ಸಂಖ್ಯೆ
* ನಿಮ್ಮದು ಸೇವಾ(ಲಾಭೋದ್ದೇಶವಿಲ್ಲದ) ಸಂಸ್ಥೆಯೇ?
* ವರ್ಷದಲ್ಲಿ ಸಾಮಾನ್ಯವಾಗಿ ನಡೆಸುವ ಕಾರ್ಯಕ್ರಮಗಳ ಪಟ್ಟಿ
* ವಿಶೇಷ ಕಾರ್ಯಕ್ರಮಗಳು
* ಸೇವಾ(ಚಾರಿಟಿ) ಕೆಲಸಗಳು
* ಪ್ರಮುಖ ಸಾಧನೆಗಳು (ಸಮಾಜಕ್ಕೆ, ದೇಶಕ್ಕೆ, ಕರ್ನಾಟಕಕ್ಕೆ ಕೊಡುಗೆ)
* ಸಂಸ್ಥೆಯ ಇತರ ವೈಶಿಷ್ಟ್ಯಗಳು
* ಉದ್ದೇಶಿತ ಯೋಜನೆಗಳು
* ಸಂಸ್ಥೆಯ ಅಂತರ್ಜಾಲ ವಿಳಾಸ
* ಸಂಸ್ಥೆಯ ಇ-ಮೈಲ್ ವಿಳಾಸ
* ಮಾಹಿತಿ ಸಲ್ಲಿಸುವವರ ದೂರವಾಣಿ ಸಂಖ್ಯೆ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications