ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಮುನ್ನಾ ನೋಟ

ಸಮ್ಮೇಳನದ ಆಯೋಜನೆ ಅಕ್ಕ ಮೂಲ ಸಂಸ್ಥೆಯಿಂದ. ಅಕ್ಕ ಪದಾಧಿಕಾರಿಗಳ ಪಟ್ಟಿ ಹೀಗಿದೆ. ಆದರೆ, ಸಮ್ಮೇಳನವನ್ನು ವ್ಯವಸ್ಥೆ ಮಾಡುವ ಪ್ರಾಥಮಿಕ ಜವಾಬ್ದಾರಿ ಸ್ಥಳೀಯ ಕನ್ನಡ ಕೂಟ ಅಥವಾ ಕನ್ನಡ ಸಂಘದ ಹೆಗಲೇರುತ್ತದೆ. ಈ ಬಾರಿ ಈ ಹೊಣೆಹೊತ್ತ ಬಳಗದ ಹೆಸರು ನ್ಯೂ ಜೆರ್ಸಿ ರಾಜ್ಯದ ಕನ್ನಡ ಸಂಘ 'ಬೃಂದಾವನ'. ಈ ಕೂಟದಲ್ಲಿ ಪದಾಧಿಕಾರಿಗಳ ಆಯ್ಕೆ ಎರಡು ವರ್ಷಕ್ಕೊಮ್ಮೆ ಜರುಗುತ್ತದೆ. ಡಿಸೆಂಬರ್ 09ಕ್ಕೆ ಐದು ವರ್ಷ ಪೂರೈಸುತ್ತಿರುವ ಬೃಂದಾವನದ 2008-10 ನೇ ಸಾಲಿನ ಪದಾಧಿಕಾರಿಗಳ ನೋಟ್ ಪ್ಯಾಡ್ ನೋಡಿ.
ಸ್ಥಳೀಯ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಮೇಳನ ವ್ಯವಸ್ಥೆಯಾದರೂ ಕೂಡ, ಬೃಹತ್ ಪ್ರಮಾಣದ ವಿಶ್ವ ಸಮ್ಮೇಳನ ಜವಾಬ್ದಾರಿ ನಿರ್ವಸುವುದಕ್ಕೆಂದೇ ವಿಶೇಷ ಸಮಿತಿಗಳನ್ನು ರಚಿಸಲಾಗುತ್ತದೆ. ಇದುವರೆಗೆ ಐದು ಸಮ್ಮೇಳನಗಳು ಜರುಗಿವೆ. ಆದರೆ ಈ ಬಾರಿಯ ವಿಶೇಷತೆಯೆಂದರೆ ಬೃಂದಾವನ ಸಂಘದ ಜತೆಗೆ ಅಕ್ಕಪಕ್ಕ ರಾಜ್ಯಗಳಾದ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್ವೇನಿಯಾ ಹಾಗೂ ಕನೆಕ್ಟಿಕಟ್ ರಾಜ್ಯಗಳ ಕನ್ನಡ ಸಂಘಗಳ ಮಾನವ ಸಂಪನ್ಮೂಲ ಕಲೆತು ವಿಶಾಲ ಸಮ್ಮೇಳನ ಸಮಿತಿ ರಚನೆಯಾಗಿದೆ.
ಸುಮಾರು ಒಂದು ನೂರು ಸ್ವಯಂಸೇವಕರಿರುವ ಈ ಮಾತೃ ಸಮಿತಿಯಿಂದ ಆಯ್ದ ನಾನಾ ಉಪ ಸಮಿತಿಗಳು ಇರುತ್ತವೆ. ಈ ಸಲ ಒಟ್ಟು 33 ಸಮಿತಿಗಳನ್ನು ರಚಿಸಲಾಗಿದ್ದು ಒಂದೊಂದೂ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿ ಇರುತ್ತದೆ. ಸಮಿತಿಯ ಹೆಸರು, ಸದಸ್ಯರು, ಜವಾಬ್ದಾರಿಯ ಕ್ಷೇತ್ರ ಮತ್ತು ಅವರವರ ದೂರವಾಣಿ ಸಂಖ್ಯೆಗಳು ಹಾಗೂ ಈ ಮೇಲ್ ವಿಳಾಸಗಳು ಕೋಷ್ಟಕದಲ್ಲಿ ಅಡಕವಾಗಿದೆ. ಉಪಯೋಗಿಸಿ. ಗಮನಾರ್ಹ ಸಂಗತಿಯೆಂದರೆ ಸಮಿತಿಯು ಯುವಕ ಯುವತಿಯರಿಂದ ತುಂಬಿ ತುಳುಕುತ್ತಿದೆ. ಪ್ರಸನ್ನವದನರಾಗಿರುವ ಸಗಟು ಸಮಿತಿಯ ಗ್ರೂಪ್ ಫೋಟೋ ಮೇಲೆ ಕಣ್ಣಾಡಿಸಿ.
ವಿಶಾಲ ಉತ್ತರ ಅಮೆರಿಕಾದಲ್ಲಿ ವಾಸಿಸುವ ಕನ್ನಡ ಕೂಟಗಳ ಮಾತೃ ಸಂಸ್ಥೆ ಅಕ್ಕನಿಗೆ ಎರಡು ವರ್ಷಗಳಿಗೊಮ್ಮೆ ಆಯ್ಕೆಯಾಗುವ ಪದಾಧಿಕಾರಿಗಳಲ್ಲದೆ, ಮೂಲಭೂತವಾಗಿ ಸಂಸ್ಥೆಗೆ ಮಾರ್ಗದರ್ಶನ ಮಾಡುವುದಕ್ಕೆ ಅಕ್ಕ ವಿಶ್ವಸ್ಥ ಮಂಡಳಿ ಇರುತ್ತದೆ. ಮಂಡಳಿಯಲ್ಲಿ 11 ಸದಸ್ಯರಿರುತ್ತಾರೆ. ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಹಾಗೂ ಸಮ್ಮೇಳನದ ಅಡ್ವೈಸರ್ ಅಮರ್ ನಾಥ ಗೌಡ. ಅವರೊಂದಿಗೆ ದಟ್ಸ್ ಕನ್ನಡ ಡಾಟ್ ಕಾಂ ಡಿಸೆಂಬರ್ 22ರ ಮಂಗಳವಾರ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಹೀಗಿವೆ. ಓದಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications