ಗಂಡು ಜಾತಿಯ ಮೇಲೆ ಹೆಣ್ಣಿನ ಸೇಡಿನ ನಂಜು

ನಮ್ಮ ಅಜ್ಜಿಯ ಜನಪದ ಕತೆಗಳಲ್ಲಿ,
ಯಾವಾಗಲು ಇರುತಿದ್ದ ಒಬ್ಬ ಕಠಾರಿವೀರ
ಕುದುರೆ ಓಡಿಸುತ, ಒಬ್ಬಳನೆ ಪ್ರೀತಿಸುತಾ
ಸುಂದರ ಸೊಗಸುಗಾರ ಕುದುರೆ ಸವಾರ...
ಬಾಯಿಬಿಟ್ಟು ಕೇಳುತಿದ್ದರು ನಮ್ಮ ಸೀತಾ, ವನಿತಾ ಗೀತಾ...
ಎಲ್ಲಾ ಕಾಲಕ್ಕೂ ಎಲ್ಲಾ ಹುಡುಗಿಯರಿಗೆ ಬೇಕು
ಅದೇ ಸುಂದರ ಸೊಗಸುಗಾರ ರಾಜಕುಮಾರ
ಇಗೆಲ್ಲಾ ಅಜ್ಜಿ ಕತೆಗಳ ರಾಜಕುಮಾರೆಲ್ಲ
ಸಾಫ್ಟ್ವೇರ್ ತುಂಡುಗಳಾದಂತೆ ನನ್ನ ಗುಮಾನಿ
ಅನುಮಾನವಿದ್ದರೆ ಹುಡುಗಿಯರನ್ನು ಕೇಳಿ ಸ್ವಾಮಿ
ಅಮೇರಿಕಾ ವೀಸಾವಿದ್ದವನು ಪಾಶುಪತಾಸ್ತ್ರ ಪಡೆದಂತೆ
ವಿದೇಶಕ್ಕೆ ಹೋಗಿ ಮರಳಿ ಬಂದವನು
ಸ್ವರ್ಗಾರೋಹಣ ಮಾಡಿ ಮರಳಿ ಬಂದಂತೆ
ಮರಳಿ ಬರದೇ ಇದ್ದವನು, ಭೂಪತಿ ಗಂಡಂತೆ!
ಅತಲ, ವಿತಳ, ಪಾತಾಳದಲ್ಲಿ ಹುಡುಕಿದರೂ
ನಮ್ಮ ಪೂಜಾರಿ, ರೈತ, ಮೇಸ್ತ್ರಿಗೆ ಹೆಣ್ಣು ಸಿಕ್ಕೊಲ್ಲ!
ಕಾರಣ ನಿಮಗೇ ಗೊತ್ತಲ್ಲ...
ಎಲ್ಲಾ ಹೆಣ್ಣು ಮಕ್ಕಳದು ಒಂದೇ ಹರಕೆ
ಸಿಗಲಿ ನಮಗೆ ಸಾಫ್ಟ್ವೇರ್ ಗಂಡೊಂದು
ಹುಟ್ಟಲಿ ನಮ್ ಹೊಟ್ಟೆಲಿ ಸಾಫ್ಟ್ವೇರ್ ತುಂಡೊಂದು!
ಈ ತನಕ ಕಾಡಿದ ಗಂಡುಜಾತಿಯ ಬಗ್ಗೆ
ಹೀಗೂ ಇರಬಹುದೇ... ಸೇಡಿನ ನಂಜು?
-2-
ಧರ್ಮ ಕೊಟ್ಟಳೇ ಮೀರಲಾರದ ಪುಕ್ಕಲ ಗಂಡು
ನೋಡಲಾರನೇಕೆ ಧರ್ಮ ಬೇಲಿಯ ಜಿಗಿದಿಂದು?
ಅಪ್ಪಣೆ ಕೊಡಿಸಬೇಕಾದ ನಮ್ಮ ಜಗದ್ಗುರು
ಎಲ್ಲಿ ಹೋದರು ಎಂದು ಹೊಡುಕಿದರೆ..
ಅವರು... ದೈವಾಂಶ ಸಂಭೂತರು
ಗೊಸಂತತಿಯ ಸಂರಕ್ಷಣೆಯಲ್ಲಿ ತಲ್ಲಿನರು!
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications