ನಮ್ಮಪ್ಪ ಚಿರಂಜೀವಿ : ಗಿರಿಜಾ ಮೇಘನಾಥ್ ಕವನ
ಅಕ್ಕನ ಬಿಟ್ಟಿರಲಾರದೆ ಅಕ್ಕನ ಬಳಿ ಹೋದಿರಾ ಅಪ್ಪಾ...
ಅಕ್ಕ (ಅಮ್ಮ)ನ ಪ್ರೀತಿ-ಪ್ರೇಮವನ್ನು ನಮ್ಮಲ್ಲಿ ತುಂಬುತ್ತಾ
ಅಕ್ಕ ಇಲ್ಲಾ ಎನ್ನುವ ನೋವನ್ನು ನಿಮ್ಮ ವಾತ್ಸಲ್ಯ ಮರೆಮಾಡಿತ್ತು
ಬಯಸಲಿಲ್ಲಾ
ನೀವು
ಯಾರಿಂದ
ಯಾವುದನ್ನು
ಏನನ್ನೂ
ಅಜ್ಞಾನ
ಅಹಂಕಾರವೆಂಬುದು
ತಲೆಎತ್ತಿದ್ದಿಲ್ಲ
ಕೈ
ನೀಡಿ
ಬರಲಿ
ಕೈ
ನೀಡದೇ
ಬರಲಿ
ಬರಿಗೈಲಿ
ಹಿಂದಿರುಗಿದವರ್ಯಾರೂ
ಇಲ್ಲಾ
ಹಸನ್ಮುಖ
ಕಿರು-ಹುಸಿನಗೆಯೇ
ಸ್ಫೂರ್ತಿ
ನಮಗೆಲ್ಲಾ
ಅಪ್ಪಾ
ಹದವಾದ
ನಿಮ್ಮ
ಬುದ್ದಿಮಾತು
ನಡೆ-ನುಡಿ
ಪ್ರೋತ್ಸಾಹ
ತುಂಬಿದ
ಮಾತುಗಳನ್ನು
ಕೇಳಲು
ಮನ
ಕಾತುರದಿಂದ
ಪುನಃ
...ಪುನಃ
ಕೇಳಬೇಕೆಂದು...
ದಾಹ
ತಾಳಲಾರದಂತೆ
ಹಾತೊರೆಯುತ್ತಿತ್ತು...ಹಾತೊರೆಯುತಿದ್ದೆವಪ್ಪಾ
ನೀವು
ಪ್ರೀತಿಯಿಂದ
ಕರೆಯುತ್ತಿದ್ದ
ಹೆಸರುಗಳು
ಕಿವಿಯಲ್ಲಿ
ಗುಂಯ್ಗುಡುತ್ತಿದ್ದವಪ್ಪಾ
ನೀವು
ಕಲಿಸಿದ
ಶ್ರದ್ದೆ-ಭಕ್ತಿ
,
ಹಿತವಚನಗಳೇ...
ಬಾಳಿನಲ್ಲಿ
ನಮ್ಮೆಲ್ಲರಿಗೂ
ದಾರಿ-ದೀಪವಾಗಿ
ಹರಸುತ್ತಾ
ಬೆಳೆಸುತ್ತಾ....ಮಾರ್ಗ-ದರ್ಶನವಾಗಿದ್ದವಪ್ಪಾ
ಸದಾ
ಮನದುಂಬಿ
ಕೂಗುತಿದೆ...ನಾವೇ
ಭಾಗ್ಯವಂತರು
ಪುಣ್ಯವಂತರೆಂದು
ನಿಮ್ಮ
ಮಕ್ಕಳು
ಮೊಮ್ಮಕ್ಕಳು
ಸಾಧಿಸಿದ
ಸಾಧನೆ
ಪುಟ್ಟದ್ದೋ
ದೊಡ್ದದ್ದೋ
...
ಎಲ್ಲವೂ
ನಿಮಗರ್ಪಿತವಪ್ಪಾ
ದೂರ
ಕರೆಮಾಡಿ
ಅಪ್ಪಾ...ಎಂದು
ಕರೆದಾಗ
ಆಗುವ
ಆನಂದ
ಏನೆಂದು
ಹೇಳಲಿ
ನಿಮ್ಮಿಂದ
ಬರುವ
ಸಿಹಿ-ಸಕ್ಕರೆ
ಜೇನಿಗಿಂತ
ಸವಿಯಾದ
ಪ್ರೀತಿ
ತುಂಬಿದ...ಆ
ನಿಮ್ಮ
ದ್ವನಿ
ಕೇಳಿ
ಅತೀವ
ಉಲ್ಲಾಸ-ಉತ್ಸಾಹದಿಂದ
ಗರಿ-ಕೆದರಿ
ಕುಣಿವ
ನವಿಲಿನಂತೆ
ಚೇತನ
ತುಂಬಿ
ಮನ
ಸಂತೋಷದಿಂದ
ತುಳುಕುತ್ತಿತ್ತು
ಅದ
ಕೇಳಲು
ಮನ
ಹಾತೊರೆದು
ಅರಸುತ್ತಿದೆಯಪ್ಪಾ...
ಬಂದೆವಾ...ನೀವಿಲ್ಲದ
ಮನೆಗೆ
ನೂರ-ಇಪ್ಪತ್ಮೂರು
ದಿನಗಳ
ನಂತರ
ಸಂಕಟ
ದುಃಖ
ಬೇಸರ
ಹೊತ್ತು
ತಾಯಿನಾಡಾದ
ತವರೂರು
ತಂದೆತಾಯಿ
ಮನೆಗೆ
ಸ್ವಾಗತಿಸಿತು
ಮುಂಬಾಗಿಲಿನಲ್ಲೇ
ಸ್ಮಿತವದನದ
ಆ
ನಿಮ್ಮ
ಚಿತ್ರಪಟ
ಈಗ
ಬಂದಿರಾ
ಬನ್ನಿ-ಬನ್ನಿ,
ಬಾ...ಮಗ
ಬಾ
ಬಾ...
ಎನ್ನುವಂತಿತ್ತು
ದುಃಖ
ಉಕ್ಕಲಿಲ್ಲ
ಕಣ್ಣೀರು
ಸುರಿಯಲಿಲ್ಲ
ಮರೆತೆನಾಕ್ಷಣ
ನಾನೆಲ್ಲ.
ಅನಾಥರಾದೆವಾ...ನಾವೆಲ್ಲಾ
ಎಂದು
ದುಃಖಿಸುತ್ತಿರುವಾಗ
ಮಿನುಗಿತು
ಮನದಾಳದಿಂದ
ಅನಾಥರಲ್ಲ
ನೀವು
ಅನಾಥರಲ್ಲಾ...
ಎಂದು
ಕಣ್ಣೀರೋರಸಿ
ಕಣ್ತೆರೆದು
ನೋಡಿದಾಗ
ಕಂಡೆನಾ
ನಿಮ್ಮನ್ನು....
ಲಕ್ಷ್ಮಿ-ನಾರಾಯಣ,
ಶಿವ-ಪಾರ್ವತಿಯರಂತೆ
ಜೊತೆಯಾಗಿ
ಎಲ್ಲೆಲ್ಲೂ....
ಕಣ್ಮುಚ್ಚಿತು
ಕೈ-ಜೋಡಿಸಿದವು
ಭಕ್ತಿ-ಭಾವದಿಂದ
ಮನ
ನುಡಿಯಿತಪ್ಪಾ
ನಮ್ಮಪ್ಪ
ಚಿರಂಜೀವಿ
ಶ್ರೀರಾಮಚಂದ್ರ
ಎಂದು
ಇದೋ
ನಿಮಗೆ
ನಮ್ಮೆಲ್ಲರ
ನಮೋ
ನಮಃ