ಕಳಚಿರಿ ಮನುಜರೆ ಬಣ್ಣದ ವೇಷವ, ನಿಲ್ಲಿಸಿರಿ ನಾಟಕವ
- ಶೃತಿ ಸತೀಶ್, ನ್ಯೂಜೆರ್ಸಿ
ಬಣ್ಣ ಕಳೆದುಕೊಂಡಿವೆ ಭಾವನೆಗಳಿಲ್ಲಿಮನುಷ್ಯನ ಸ್ವಾರ್ಥದಲ್ಲಿ,ಬಿರುನುಡಿಗಳಲ್ಲಿ
ಹಸಿರಾಗಿದ್ದ ಎದೆ ಬರಡಾಗಿದೆಯಿಲ್ಲಿ
ನಿಂದನೆಯೆಂಬ ಬಾಣದ ಇರಿತದಲ್ಲಿ
ಮೃದುವಾಗಿದ್ದ ಮನ ಭಾರವಾಗಿದೆಯಿಲ್ಲಿ
ಮೌನದ ಸಂಕೋಲೆಯಲ್ಲಿ
ಬಣ್ಣ ಕಳೆದುಕೊಂಡ ಭಾವನೆಗಳಿಗೆ ರಂಗು ಬೇಕಿದೆ
ಬತ್ತಿದೆಗೆ ಪ್ರೀತಿಯೆಂಬ ಅನುಭೂತಿ ಬೇಕಿದೆ
ಭಾರವಾಗಿರುವ ಮನಕ್ಕೆ ನಗೆಬುಗ್ಗೆಯ ಚಿಲುಮೆ ಬೇಕಿದೆ
ಬರಡಾಗಿರುವ ಜೀವನಕ್ಕೆ ಭರವಸೆ ಬೇಕಿದೆ.
ಕಳಚಿರಿ ಮನುಜರೆ,
ನಿಮ್ಮ ಬಣ್ಣದ ವೇಷವ,
ನಿಲ್ಲಿಸಿರಿ ನಾಟಕವ
ಸಹನೆ,ಸ್ನೇಹ ಒಲುಮೆಯಾಡನೆ ಬೆರೆಯಿರಿ.
ಜೀವನವೆಂಬ ನಾಟಕಕ್ಕೆ ಬಣ್ಣತನ್ನಿ,
ಸಮರಸವೆಂಬ ಜೇನು ತುಂಬಿ.












Click it and Unblock the Notifications