ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಚಿರಿ ಮನುಜರೆ ಬಣ್ಣದ ವೇಷವ, ನಿಲ್ಲಿಸಿರಿ ನಾಟಕವ

By Staff
|
Google Oneindia Kannada News
Shruthi Sateesh in NJಬಣ್ಣ ಕಳೆದುಕೊಂಡಿವೆ ಭಾವನೆಗಳಿಲ್ಲಿ
ಮನುಷ್ಯನ ಸ್ವಾರ್ಥದಲ್ಲಿ,ಬಿರುನುಡಿಗಳಲ್ಲಿ
ಹಸಿರಾಗಿದ್ದ ಎದೆ ಬರಡಾಗಿದೆಯಿಲ್ಲಿ
ನಿಂದನೆಯೆಂಬ ಬಾಣದ ಇರಿತದಲ್ಲಿ
ಮೃದುವಾಗಿದ್ದ ಮನ ಭಾರವಾಗಿದೆಯಿಲ್ಲಿ
ಮೌನದ ಸಂಕೋಲೆಯಲ್ಲಿ

ಬಣ್ಣ ಕಳೆದುಕೊಂಡ ಭಾವನೆಗಳಿಗೆ ರಂಗು ಬೇಕಿದೆ
ಬತ್ತಿದೆಗೆ ಪ್ರೀತಿಯೆಂಬ ಅನುಭೂತಿ ಬೇಕಿದೆ
ಭಾರವಾಗಿರುವ ಮನಕ್ಕೆ ನಗೆಬುಗ್ಗೆಯ ಚಿಲುಮೆ ಬೇಕಿದೆ
ಬರಡಾಗಿರುವ ಜೀವನಕ್ಕೆ ಭರವಸೆ ಬೇಕಿದೆ.

ಕಳಚಿರಿ ಮನುಜರೆ,
ನಿಮ್ಮ ಬಣ್ಣದ ವೇಷವ,
ನಿಲ್ಲಿಸಿರಿ ನಾಟಕವ
ಸಹನೆ,ಸ್ನೇಹ ಒಲುಮೆಯಾಡನೆ ಬೆರೆಯಿರಿ.
ಜೀವನವೆಂಬ ನಾಟಕಕ್ಕೆ ಬಣ್ಣತನ್ನಿ,
ಸಮರಸವೆಂಬ ಜೇನು ತುಂಬಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X