ಪಲ್ಲಟ-ಪರಿಷ್ಕರಣ


ಪಲ್ಲಟ-ಪರಿಷ್ಕರಣ
ವಸ್ತುಗಳು ತಮ್ಮ ನಿರ್ದಿಷ್ಟ ಸ್ಥಾನ ತಪ್ಪಿರುವುದೇ ಕೊಳೆಯ ಮತ್ತು ಗೊಂದಲದ ಮೂಲ. ಇದು ಅಂತಃಕರಣದ ಶಿಸ್ತು ಮತ್ತು ನೈರ್ಮಲ್ಯಕ್ಕೂ ಅನ್ವಯ. ಪಂಚಭೂತಗಳು ಸ್ಥಾನಪಲ್ಲಟದ ಮೂಲಕ ಶುದ್ಧೀಕರಿಸುವ ಸಾಧನಗಳು. ಇವುಗಳಲ್ಲಿ ಪೃಥ್ವಿಯ ಪಾತ್ರ ಅನನ್ಯ. ನೀರು, ಗಾಳಿ, ಬೆಂಕಿ, ಆಕಾಶ ಇವುಗಳೆಲ್ಲ ಕೊಳೆ ತೆಗೆದರೂ, ಭೂಮಿಯ ಆಕರ್ಷಣೆಯಿಂದ ಕೊಳೆ ಬಂದು ಸೇರುವುದು ಮಣ್ಣನ್ನು. ಮಣ್ಣಲ್ಲಿ(ಪಂಚಭೂತಗಳಲ್ಲಿ) ಒಂದಾಗುವುದೇ ಶೋಧನೆಯ ಅಂತಿಮ ಗುರಿ. ಹಾಗಾದರೆ ಗುರುತ್ವಾಕರ್ಷಣೆ ಪರಿಸರದ (ಅಂತಃಕರಣದ) ನೈರ್ಮಲ್ಯಕ್ಕೆಂದೇ ಹುಟ್ಟಿತೆ? ಜೀವಿಗಳೆಲ್ಲ ಕೊನೆಯಲ್ಲಿ ಮಣ್ಣಲ್ಲಿ ಬೆರೆತುಹೋಗುವುದು ಅಂತಿಮ ಸತ್ಯ. ಹಾಗೆಂದು ಅವುಗಳ ಹುಟ್ಟೇ ಮಲದ ಮೂಲವೇ? ಹಾಗೆ ಬೆರೆಯುವುದೇ ನೈರ್ಮಲ್ಯದ ಪರಾಕಾಷ್ಠೆಯೇ?
Jayaram K. Udupa
  • ಜಯರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿಯ
    [email protected]
ಕೇಶ ಅನ್ನದಿ ಹೊಲಸು, ಅನ್ನ ಮುಡಿಯಲಿ ಹೊಲಸು,
ತಾಣ ಬದಲಿಸೆ ಹೇಸು, ಇದೆ ಮಡಿಯ ಸೊಗಸು.
ಒಂದೇ ಆಗಿರೆ ಅಮಲ, ಇಲ್ಲದಲಿ ಮಲಿನ;
ಒಂದಾಗಿಸಲು ತಾಣ ಪಲ್ಲಟವೆ ಕರಣ;
ತಾಣ ವಿನಿಮಯ ಪಂಚಭೂತದುಪಕರಣ.

ಜೀವದಲೆ ಸೃಷ್ಟಿ ಹೊಲೆ ಹೊರೆಯ ಕಲ್ಮಷ,
ಕಾಲದಲಿ ಸುಟ್ಟಿದನು ಅಳಿಸೆ ನಿಶ್ಶೇಷ,
ದೇಹ ಪುಷ್ಟಿಗೆ ಮನಕೆ ಸೌಖ್ಯಸಂತೋಷ.
ವಾಯು ಪೃಥ್ವೀ ಜಲ ಅಗ್ನಿ ಆಕಾಶ,
ಭೂತಗಳಿವುಗಳಿರವು ಶೌಚದುದ್ದೇಶ.

ಗಾಳಿ ಕೂಳೆಯ ಕಳೆದು ವ್ಯೋಮ ವ್ಯೂಹಕೆ ಕಳಿಸೆ,
ನೀರದನು ಬರಸೆಳೆದು ಇಳೆಗೆ ಸುರಿದಿಳಿಸೆ;
ವ್ಯೋಮದಲ್ಲಿನ ಕೊಳೆಯ ಭಾರವದ ಧರೆಗಿಳಿಸೆ;
ಕೂಳೆಯ ಮಲಿನವ ತೊಳೆವ ಪುಣ್ಯ ಜಲವೆಂದೆನಿಸೆ;
ತೇಜ ಕಲುಷವ ದಹಿಸೆ ವಿಮಲ ಭಸಿತೋದ್ಭವಿಸೆ.

ಅನಿಲಾಗ್ನಿ ಗಗನಾಪ ಮಲಿನವೆಸೆ ಭೂದೆಸೆಗೆ,
ಅವನಿ ಕೃಪೆಯಲಿಯದನು ಉದರದಲಿ ಭರಿಸೆ;
ಕ್ಷರಗೊಂಡು ಮಾಲಿನ್ಯ ಭೂತಗಳಲೊಂದಾಗೆ,
ಗುರುತ್ವದಾಕರ್ಷಣವೆ ಶುಚಿಯ ಸಾಧನವೆನಿಸೆ?
ಭೂ ಜಗದ ಮಲವಳಿಸಿ ‘ಕ್ಷಮಯಾಧರಾ’ ಎನಿಸೆ.

ವಾಕ್ಕಾಯ ಮನಃಶುದ್ಧಿ, ತ್ರಿಕರಣದ ಶುದ್ಧಿ,
ಅಂತಃಕರಣ ಶುದ್ಧಿ, ಸಂಪೂರ್ಣ ಶುದ್ಧಿ.
ತನುಮನದಿ ಪರಿಸರದಿ ತಿಳಿಯ ಸಾಧಿಸಿದವರು,
ತ್ರಿಕರಣದ ತಿಳಿಕೊಳದಿ ಮಿಂದ ತೀರ್ಥಂಕರರು,
ತಿಳಿದ ಮುನಿ ಯೋಗಿಗಳೆ ಮನದ ಮಡಿವಾಳರು.

ಶುಚಿ ಶುದ್ಧಿ ಶಿಸ್ತು ತಿಳಿ ಒಂದೆ ತಿರುಳಿನ ಮೂಲ,
ಮನುಜನಿರವಿನ ಕುರುಹೆ ಮಲಿನ ಗೊಂದಲ ಜಾಲ,
ತನುವಾತ್ಮ ಪೃಕೃತಿಯಲಿ ಲೀನವಾಗುವ ಲೀಲಾ.
ಮರ್ತ್ಯ ಜನ್ಮವೆ ಏನು ಇಹದ ಕಳೆ ಕಶ್ಮಲ?
ಇಹವ ತ್ಯಜಿಸುವುದೇನು ಅಂತಿಮದ ನಿರ್ಮಲ?


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+