ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ವೇಜ್‌ ಮುಷಾರಾಫನಿಗೊಂದು ಎಚ್ಚರಿಕೆ!

By Staff
|
Google Oneindia Kannada News

ಪರ್ವೇಜ್‌ ಮುಷಾರಾಫನಿಗೊಂದು ಎಚ್ಚರಿಕೆ!
ಎಲವೋ ಮುಷಾರಾಫ
ಏನೆಂದು ತಿಳಿದಿಯೋ ಈ ನಮ್ಮ ನವಭಾರತವ
ಭಾರತದೊಂದಂಗವನೇ ಹರಿದು ಹುಟ್ಟಿತಾ ನಿನ್ನ ನಾಡಂದು
ಮರೆಯದಿರು ಭಾರತದ ಕೃಪಾಭಿಕ್ಷೆಯಾನೀನಿಂದು
ನರಳುತಿಹರು ನಿನ್ನ ಜನ ಅನ್ನನೀರಿಲ್ಲದೆ
ಮೊದಲು ಉಣಬಡಿಸವರಿಗೆ ಧರ್ಮವಿಹುದಲ್ಲೇ
ಶತಶತಮಾನಂಗಳಿಂದ ಕಿತ್ತು ತಿಂದಿರಿ ಭಾರತವ
ಇನ್ನು ತಡೆಯುವೆವು ನಿಮ್ಮ ಈ ಪುಂಡಾಟವ

ಜೋಕೆ! ಎಚ್ಚರಿಕೆ!
ಮಾನವನಂತೆ ಬಾಳುವುದ ನೀ ಕಲಿ
ಬಿಡು ನಿನ್ನ ದುರಾಸೆಯ ಅನ್ಯರಾ ಸ್ವತ್ತಿಗೆ
ಕಾಶ್ಮೀರ ಭಾರತದಾ ಮಣಿಮುಕುಟ ತಿಳಿ
ಅತಿಯಾಸೆ ಗತಿಕೇಡೆಂಬ ನಾಣ್ನುಡಿಯ ಕಲಿ
ಯುಗ ಯುಗಗಳಿಂದ ತುಂಬಿಬಂದಿದೆ ಧರ್ಮ
ಈ ನಮ್ಮ ಭಾರತದಲಿ,
ಅದನರಿತು ಬಾಳ್‌, ಅದರಿಂದ ಕಲಿ,
ಅದರಿಂದ್ದುದರಿಸು ಆ ನಿನ್ನಜನರ
ಪಶುಗಳೂ ಹಿಂಸಿಸುವುದಿಲ್ಲನ್ಯರ
ತಮ್ಮ ಪುಂಡಾಟಕೆ, ಆ
ಪಶುಗಳಿಂದಾದರೂ ಕಲಿ ನೀನ್‌
ಬೀಳದಂತೆ ಪ್ರಪಾತಕೆ

ಹನುಮ ಭೀಮರುದಿಸಿದಾನಾಡಿದು ಭಾರತ
ಬೆಂದೀಯೇ ನೀನವರ ಕೋಪದುಸಿರಿಗೆ
ಸಿಲುಕಿ ತಕತಕ
ಸತ್ಯ ಧರ್ಮ ಅಹಿಂಸೆಯಾ ನಾಡಾದರೇನ್‌ ಭಾರತ
ನಿಶ್ಯಕ್ತಿಯೆಂದೆಣಿಸದಿರು ಅದನೀನ್‌ ಅಹಂಕರಿಸುತ
ಕೆಣಕದಿರು ಭಾರತವ ನಿನ್ನ ಹಿತವಿಹುವುದಲ್ಲೇ
ಅಹಿಂಸೆಯಾ ಮೂರ್ತಿಯಾದರೇನ್‌ ಈ ನಮ್ಮ ಜನನಿ
ಕೆಣಕಿದೆಯಾದೆಯೋ
ಆದೀತದೇ ನಿನ್ನ ಸುಟ್ಟು ಬೂದಿ ಮಾಳ್ಪ ದಾವಾಗ್ನಿ!
ಎಚ್ಚರ! ಎಚ್ಚರ! ಎಚ್ಚರವಿರಲೈ! ಎಚ್ಚರ

(ಭಾರತ-ಪಾಕಿಸ್ತಾನದ ನಡುವಿನ ಕಾರ್ಗಿಲ್‌ ಯುದ್ಧಕ್ಕೆ ಪರ್ವೇಜ್‌ ಮುಷ್ರಾಫ್‌ ಕಾರಣವೆಂಬುದನ್ನು ಓದುಗರು ಇಲ್ಲಿ ಸ್ಮರಿಸಬೇಕು)


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X