ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಂದ ವಸಂತ

By Staff
|
Google Oneindia Kannada News

ಮತ್ತೆ ಬಂದ ವಸಂತ
ಸುಂದರ ಮುಂಜಾವಿನಲಿ ಕತ್ತಲ ಹೊದಿಕೆ ಬಿಡಿಸಿ
ಮಂಜು ಕವಿದಿಹ ಪರದೆಯನು ಸರಿಸಿ
ಉದಯಗಿರಿ ತಪ್ಪಲು ಶಿಖರಗಳ ನಡುವಿಂದ
ಅಗೋ ಮೂಡಿಹನು ಮೂಡಣದಿ ನೇಸರನು ।।

ಬೆಟ್ಟ ಕಣಿವೆಗಳೆಲ್ಲ ಮತ್ತೊಮ್ಮೆ ಅಣಿಯಾಗುತಿವೆ
ನವ ಪ್ರೇಮ ಋತುವಿಗೆ ಸ್ವಾಗತವ ನೀಡಿ
ನೆನಪುಗಳು ಚಿಗುರೊಡೆದು ಹೊಸ ಜೀವ ಪಡೆಯುತಿವೆ
ಕಳೆದ ರಸ ಘಳಿಗೆಗಳ ಕಂಪ ಸೂಸಿ ।।

ಹೇಳದಿಹ ಕೇಳದಿಹ ಹುದುಗಿರುವ ಬಯಕೆಗಳು
ಅರೆ ಬಿರಿದ ನಿದ್ದೆಯಲಿ ಕಣ್ತೆರೆದು ನೋಡಿರಲು
ಹೊಸತಾಗಿ ಕಾಣುತಿದೆ ಮತ್ತದೇ ಬದಲಾಗದ ರೂಪ
ಭಾವ ರಸಮಯ ಭರಿತ ಜೀವನದ ದೀಪ ।।

ಒಂದೊಂದು ಕ್ಷಣವು ನದಿಯಂತೆ ಮುಂದೋಡುತಿದೆ
ಪಿಸುಗುಟ್ಟಿವೆ ಕೆಲವು ಭೋರ್ಗರೆಯುತಲಿ ಹಲವು
ಪ್ರಿಯ ಮಿಲನ ಅಗಲಿಕೆಗೆ ಸ್ಪಂದಿಸಿವೆ ಹಾಡುತಲಿ
ಮತ್ತೆ ಬಂದಿದೆ ವಸಂತ ಇಂದೆನ್ನ ಬಾಳಿನಲಿ ।।


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X