ಸರ್ಜಿಕಲ್ ಸ್ಟ್ರೈಕ್ ಅಂದ್ರೆ... ಹಿಂಗಿರಬೇಕು! ಸೂಪರ್!
ಪ್ರಧಾನ ಮಂತ್ರಿ ಮೋದಿಜಿ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ನಮನ... ಇನ್ನು ಮುಂದೆಯೂ ಈ ರೀತಿಯ ಸ್ಟ್ರೈಕ್ಸ್ ಬರ್ತಾ ಇರ್ಲಿ ...ವ್ಯವಸ್ಥೆಯ ಸ್ವಚ್ಛ ಮಾಡ್ತಾ ಇರ್ಲಿ ಅಂಬುದೇ ಜನ ಸಾಮಾನ್ಯರ ಬಯಕೆ!
ಬಾಯ್ OR ಗರ್ಲ್ ಅಂತಾ ಅಮೆರಿಕಾ ಮಂದಿ ಓಟು ಹಾಕುತ್ತಾ ಕುತೂಹಲದಿಂದ ರಿಸಲ್ಟ್ಸ್ ಬಗ್ಗೆ ಯೋಚಿಸೋವಾಗ, ಅವರಿಗಿಂತ ಹೆಚ್ಚಾಗಿ ನಮ್ಮ ಭಾರತದಲ್ಲೇ "ಟ್ರಂಪ್ or ಹಿಲರಿ " ಅಂತಾ ಬೆಟ್ ಕಟ್ಟಿ ಚರ್ಚೆ ಮಾಡ್ತಾ, ಕೆಲವೊಂದು ಕಡೆ ಭಾವಿ ಅಮೇರಿಕಾ ಅಧ್ಯಕ್ಷರಿಗೋಸ್ಕರ ಹೋಮ, ಪೂಜೆ ಮಾಡ್ತಾ ಇರುವಾಗ...
ಇಂದು ನಮ್ಮ ಭಾರತದಲ್ಲಿ ಚಲಾವಣೆಯಲ್ಲಿರುವ 13,56,360 ಕೋಟಿ ರುಪಾಯಿ ಹಣವನ್ನು ಕೇವಲ ಐವತ್ತೇ ಐವತ್ತು ನಿಮಿಷಗಳಲ್ಲಿ ಅನಧಿಕೃತ ಮಾಡಿ ಜನರಿಗೆಲ್ಲರಿಗೂ ಒಂದೇ ಸಮನೆ ಶಾಕ್ ಕೊಟ್ಟು, ಭ್ರಷ್ಟರಿಗೆ ತಾವು "ಚೆಕ್ಮೇಟ್" ಎಂಬಂಥ ಭಾವನೆಯನ್ನು ಮೂಡುವಂತೆ ಮಾಡಿ, ಸಾವಿರಾರು ಮಂದಿಗೆ ಪರ್ಮನೆಂಟ್ ಆಗಿ ನಿದ್ದೆ ಬರದಂತೆ ಮಾಡಿದ ನರೇಂದ್ರ ಮೋದಿಯ "₹500, 1000 ನೋಟು ರದ್ದು.... ಕಪ್ಪು ಹಣ - ಭ್ರಷ್ಟ ಹಣ, ಖೋಟಾ ನೋಟು, ಭಯೋತ್ಪಾದನೆ" ತಡೆಯ ನಡೆ ....ನಿಜವಾಗ್ಲೂ ಸೂಪರ್ ಸರ್ಜಿಕಲ್ ಸ್ಟ್ರೈಕ್! [ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

ಅದರಲ್ಲೂ ಹೀಗಿನ 500, 1000 ನೋಟುಗಳನ್ನು ಬಳಸ ಬೇಕಂದ್ರೆ ಮುಂದಿನ 72 ಗಂಟೆಗಳೊಳಗೆ ರೈಲ್ವೆ, ವಿಮಾನ ಟಿಕೆಟ್ ಖರೀದಿ, ಪೆಟ್ರೋಲ್ ಬಂಕ್... ಬಿಟ್ರೆ ಸರ್ಕಾರಿ ಆಸ್ಪತ್ರೆ, ಶವಾಗಾರದಲ್ಲಿ ಮಾತ್ರ ಬಳಸಬಹುದು ಅಂತ ವಿನಾಯ್ತೋ ಕೊಟ್ಟಿರೋದು ನೋಡಿದ್ರೆ... "ಕಪ್ಪು ಹಣ - ಭ್ರಷ್ಟ ಹಣ, ಖೋಟಾ ನೋಟು" ಮಡುಗಿರೋರು ... ಇಲ್ಲ ಅಂದ್ರೆ ರೈಲ್, ವಿಮಾನದಲ್ಲಿ ಓಡಿ ಹೋಗ್ಬೇಕು.. ತಪ್ಪಿದರೆ ಹಾರ್ಟ್ ಅಟ್ಯಾಕ್ ನಿಂದ ಆಸ್ಪತ್ರೆ... ಇಲ್ಲ ಶವಾಗಾರದ ಕಡೆ" ಮುನ್ಸೂಚನೆಗಳು ಬಹಳ ಹೆಚ್ಚಾಗಿ ಗೋಚರಿಸುತ್ತಿವೆ ಅಲ್ವಾ?
ನಿಜಕ್ಕೂ ಇಂತಹ ಒಂದು ದಿಟ್ಟ - ಧೈರ್ಯದ ನಡೆ ಬೇಕಾಗಿತ್ತು ನಮ್ಮ ಭಾರತದಲ್ಲಿ ... ಸ್ವಚ್ಛ ಭಾರತ ನಿರ್ಮಿಸುವ ಹಾದಿಯಲ್ಲಿ ... [ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]
ಪ್ರಧಾನ ಮಂತ್ರಿ ಮೋದಿಜಿ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ನಮನ... ಇನ್ನು ಮುಂದೆಯೂ ಈ ರೀತಿಯ ಸ್ಟ್ರೈಕ್ಸ್ ಬರ್ತಾ ಇರ್ಲಿ ...ವ್ಯವಸ್ಥೆಯ ಸ್ವಚ್ಛ ಮಾಡ್ತಾ ಇರ್ಲಿ ಅಂಬುದೇ ಜನ ಸಾಮಾನ್ಯರ ಬಯಕೆ!
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications