ಸರ್ಜಿಕಲ್ ಸ್ಟ್ರೈಕ್ ಅಂದ್ರೆ... ಹಿಂಗಿರಬೇಕು! ಸೂಪರ್!
ಪ್ರಧಾನ ಮಂತ್ರಿ ಮೋದಿಜಿ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ನಮನ... ಇನ್ನು ಮುಂದೆಯೂ ಈ ರೀತಿಯ ಸ್ಟ್ರೈಕ್ಸ್ ಬರ್ತಾ ಇರ್ಲಿ ...ವ್ಯವಸ್ಥೆಯ ಸ್ವಚ್ಛ ಮಾಡ್ತಾ ಇರ್ಲಿ ಅಂಬುದೇ ಜನ ಸಾಮಾನ್ಯರ ಬಯಕೆ!
ಬಾಯ್ OR ಗರ್ಲ್ ಅಂತಾ ಅಮೆರಿಕಾ ಮಂದಿ ಓಟು ಹಾಕುತ್ತಾ ಕುತೂಹಲದಿಂದ ರಿಸಲ್ಟ್ಸ್ ಬಗ್ಗೆ ಯೋಚಿಸೋವಾಗ, ಅವರಿಗಿಂತ ಹೆಚ್ಚಾಗಿ ನಮ್ಮ ಭಾರತದಲ್ಲೇ "ಟ್ರಂಪ್ or ಹಿಲರಿ " ಅಂತಾ ಬೆಟ್ ಕಟ್ಟಿ ಚರ್ಚೆ ಮಾಡ್ತಾ, ಕೆಲವೊಂದು ಕಡೆ ಭಾವಿ ಅಮೇರಿಕಾ ಅಧ್ಯಕ್ಷರಿಗೋಸ್ಕರ ಹೋಮ, ಪೂಜೆ ಮಾಡ್ತಾ ಇರುವಾಗ...
ಇಂದು ನಮ್ಮ ಭಾರತದಲ್ಲಿ ಚಲಾವಣೆಯಲ್ಲಿರುವ 13,56,360 ಕೋಟಿ ರುಪಾಯಿ ಹಣವನ್ನು ಕೇವಲ ಐವತ್ತೇ ಐವತ್ತು ನಿಮಿಷಗಳಲ್ಲಿ ಅನಧಿಕೃತ ಮಾಡಿ ಜನರಿಗೆಲ್ಲರಿಗೂ ಒಂದೇ ಸಮನೆ ಶಾಕ್ ಕೊಟ್ಟು, ಭ್ರಷ್ಟರಿಗೆ ತಾವು "ಚೆಕ್ಮೇಟ್" ಎಂಬಂಥ ಭಾವನೆಯನ್ನು ಮೂಡುವಂತೆ ಮಾಡಿ, ಸಾವಿರಾರು ಮಂದಿಗೆ ಪರ್ಮನೆಂಟ್ ಆಗಿ ನಿದ್ದೆ ಬರದಂತೆ ಮಾಡಿದ ನರೇಂದ್ರ ಮೋದಿಯ "₹500, 1000 ನೋಟು ರದ್ದು.... ಕಪ್ಪು ಹಣ - ಭ್ರಷ್ಟ ಹಣ, ಖೋಟಾ ನೋಟು, ಭಯೋತ್ಪಾದನೆ" ತಡೆಯ ನಡೆ ....ನಿಜವಾಗ್ಲೂ ಸೂಪರ್ ಸರ್ಜಿಕಲ್ ಸ್ಟ್ರೈಕ್! [ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

ಅದರಲ್ಲೂ ಹೀಗಿನ 500, 1000 ನೋಟುಗಳನ್ನು ಬಳಸ ಬೇಕಂದ್ರೆ ಮುಂದಿನ 72 ಗಂಟೆಗಳೊಳಗೆ ರೈಲ್ವೆ, ವಿಮಾನ ಟಿಕೆಟ್ ಖರೀದಿ, ಪೆಟ್ರೋಲ್ ಬಂಕ್... ಬಿಟ್ರೆ ಸರ್ಕಾರಿ ಆಸ್ಪತ್ರೆ, ಶವಾಗಾರದಲ್ಲಿ ಮಾತ್ರ ಬಳಸಬಹುದು ಅಂತ ವಿನಾಯ್ತೋ ಕೊಟ್ಟಿರೋದು ನೋಡಿದ್ರೆ... "ಕಪ್ಪು ಹಣ - ಭ್ರಷ್ಟ ಹಣ, ಖೋಟಾ ನೋಟು" ಮಡುಗಿರೋರು ... ಇಲ್ಲ ಅಂದ್ರೆ ರೈಲ್, ವಿಮಾನದಲ್ಲಿ ಓಡಿ ಹೋಗ್ಬೇಕು.. ತಪ್ಪಿದರೆ ಹಾರ್ಟ್ ಅಟ್ಯಾಕ್ ನಿಂದ ಆಸ್ಪತ್ರೆ... ಇಲ್ಲ ಶವಾಗಾರದ ಕಡೆ" ಮುನ್ಸೂಚನೆಗಳು ಬಹಳ ಹೆಚ್ಚಾಗಿ ಗೋಚರಿಸುತ್ತಿವೆ ಅಲ್ವಾ?
ನಿಜಕ್ಕೂ ಇಂತಹ ಒಂದು ದಿಟ್ಟ - ಧೈರ್ಯದ ನಡೆ ಬೇಕಾಗಿತ್ತು ನಮ್ಮ ಭಾರತದಲ್ಲಿ ... ಸ್ವಚ್ಛ ಭಾರತ ನಿರ್ಮಿಸುವ ಹಾದಿಯಲ್ಲಿ ... [ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]
ಪ್ರಧಾನ ಮಂತ್ರಿ ಮೋದಿಜಿ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ನಮನ... ಇನ್ನು ಮುಂದೆಯೂ ಈ ರೀತಿಯ ಸ್ಟ್ರೈಕ್ಸ್ ಬರ್ತಾ ಇರ್ಲಿ ...ವ್ಯವಸ್ಥೆಯ ಸ್ವಚ್ಛ ಮಾಡ್ತಾ ಇರ್ಲಿ ಅಂಬುದೇ ಜನ ಸಾಮಾನ್ಯರ ಬಯಕೆ!
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications