ಲಂಡನ್ನಿನಲ್ಲಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ
ಅಲ್ಲೊಂದಷ್ಟು ಜನ. ಎಲ್ಲರೂ ಕನ್ನಡಿಗರು. ಒಂದು ಕಡೆ ಪೂಜೆ, ಮಂತ್ರಗಳು, ಸ್ತ್ರೋತ್ರಗಳು. ಕೆಲವರು ಅಲ್ಲೇ ತನ್ಮಯರಾಗಿದ್ದರೆ ಮತ್ತೊಂದು ಬದಿಯಲ್ಲಿ ಬರಿಯ ಮಾತು. ಮಾತಾಡಿದಷ್ಟೂ ಮುಗಿಯದು. ಹೊಸ ಪರಿಚಯ. ಹೊಸ ಸ್ನೇಹಿತರು. ಮಾತಿನ ಭರದಲ್ಲಿ ತಮ್ಮ ಬಂಧುಗಳ, ಸ್ನೇಹಿತರ ತಾಯ್ನಾಡಿನ ಯಾವುದೋ ಒಂದು ಸಂಪರ್ಕ ಕೊಂಡಿ ಕಂಡುಕೊಂಡರಂತೂ ಸಂಭ್ರಮವೋ ಸಂಭ್ರಮ.
ಓಹ್ ! ನೀವು ನಮಗೆ ಬಹಳ ಹತ್ತಿರದವರು ಮಾರ್ರೆ ! ಅಯ್ಯೋ, ಇಷ್ಟುವರ್ಷದಿಂದ ಇದೇ ಊರಲ್ಲೇ ಇದ್ದೆವಲ್ರೀ ?! ವಾಹ್ ನೀವಾ !? ನೀವು ಯಾಗಾಗ ಇಲ್ಲಿ ಬಂದ್ರಿ ಇಲ್ಲಿಗೆ?? ಎಂಬಿತ್ಯಾದಿ ಉದ್ಗಾರಗಳು ಬೇರೆ.
ಪೂಜೆ ಮುಗಿಯಿತು. ಇನ್ನು ತೀರ್ಥಪ್ರಸಾದ. ಸಾಂಪ್ರದಾಯಿಕ ಪದ್ಧತಿಯಲ್ಲಿ ನೆಲದ ಮೇಲೆ ಸಾಲು ಸಾಲಾಗಿ, ಶಿಸ್ತುಬದ್ಧವಾಗಿ ಇರಿಸಿದ ಬಾಳೆಎಲೆಗಳು. ರಸವತ್ತಾದ ಕನ್ನಡದ ಹುಳಿ, ಸಾರು, ಪಲ್ಯ ಗೊಜ್ಜು, ಪಾಯಸ, ಕೋಸಂಬರಿ, ಮೈಸೂರು ಪಾಕು, ಹಯಗ್ರೀವ, ಬಜ್ಜಿ, ಮಜ್ಜಿಗೆ.....ಹೀಗೆ ಹತ್ತು ಹಲವು ರಸವತ್ತಾದ ಭಕ್ಷ್ಯಭೋಜ್ಯಗಳ ರಸದೌತಣ. ಯಾರಿಗೆ ಅನ್ನಾ ? ಸಾರೂ ? ಹುಳೀ ? ಪಾಯಸಾ ಎಂದು ಕನ್ನಡದಲ್ಲೇ ಕೇಳುತ್ತಾ ಬಡಿಸುತ್ತಾ ಸಂಭ್ರಮಿಸುವುದನ್ನು ಕಂಡರೆ ಬೆಂಗಳೂರೇ ಇಲ್ಲಿಗೆ ಬಂತು ಅಂತ ಯಾರಿಗೆ ತಾನೇ ಅನ್ನಿಸದಿರದು?

ಹೀಗೆ ಎರಡು ಮೂರು ಪಂಕ್ತಿಗಳಲ್ಲಿ ನೂರಾರು ಜನರು ಭೋಜನವನ್ನು ಸಂಭ್ರಮಿಸಿದ ಮೇಲೆ. ಇನ್ನು ಸಂಗೀತ. ಕನ್ನಡದ ದಾಸರ ನಾಮಗಳು. ಸಾಂಪ್ರದಾಯಿಕ ಭಜನೆಗಳು. ಕನ್ನಡದಲ್ಲಿ ಧಾರ್ಮಿಕ ಉಪನ್ಯಾಸಗಳು. ಅದೇನು ಖುಶಿ! ಪುಳಕ ! ರೋಮಾಂಚನ! ತನ್ಮಯತೆ !
ಇದು ಸಾಮಾನ್ಯವಾಗಿ ರಾಯರ ಅರಾಧನೆಗಳು ಪರವೂರಿನಲ್ಲಿ, ಪರದೇಶದಲ್ಲಿ ನಡೆಯುವಾಗ ಮಾತ್ರ ಕಾಣಸಿಗುವ ದೃಶ್ಯ. ಭಕ್ತಿ ಭಾವಭರಿತ ಸಂಭ್ರಮೋಲ್ಲಾಸದ ಸನ್ನಿವೇಶ.
ಲಂಡನ್ ಕನ್ನಡಿಗರೇ, ಇದು ಇನ್ನು ನಿಮಗೂ ದೂರವಲ್ಲ. ಈ ಸಲದ ರಾಯರ ಆರಾಧನೆ ನಿಮ್ಮ ನೆಲದಲ್ಲೂ ನಡೆಯಲಿದೆ ಮತ್ತು ಇದೇ ಸಂಭ್ರಮದೊಂದಿಗೆ ! ಆಗಸ್ಟ್ 31 ಸೋಮವಾರ (ಸ್ಥಳೀಯರಿಗೆ ರಜಾದಿನ) ಉಡುಪಿ ಪುತ್ತಿಗೆ ಶ್ರೀಗಳ ಮಾರ್ಗದರ್ಶನ, ಶ್ರೀಮಠದ ವಿದ್ವಾಂಸರ ನೇತೃತ್ವ, ಉಡುಪಿಯ ಅನುಭವಸ್ಥ ಪಾಕಪ್ರವೀಣರ ಕೈಚಳಕ ಮತ್ತು ಸ್ಥಳೀಯ ಭಕ್ತರ ಸಂಪೂರ್ಣ ಸಹಕಾರ / ವ್ಯವಸ್ಥೆ ಗಳೊಂದಿಗೆ ಇದು ಸಾಕಾರಗೊಳ್ಳಲಿದೆ.
ದಿನ/ ದಿನಾಂಕ: ಸೋಮವಾರ/ 31ನೇ ಆಗಸ್ಟ್ 2015
ಸ್ಥಳ: ಶ್ರೀ ಅಯ್ಯಪ್ಪನ್ ಕೋವಿಲ್ ಹಾಲ್, 36, ಮೇಸನ್ಸ್ ಅವಿನ್ಯೂ
ಹ್ಯಾರೋ, ಗ್ರೇಟರ್ ಲಂಡನ್, 0208-8615825
ಇದೇ ಪ್ರಥಮಬಾರಿಗೆ ಲಂಡನ್ ನಗರದ 'ಹ್ಯಾರೋ' ಎಂಬಲ್ಲಿ ಇದು ಸಂಪನ್ನಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಜಾಲತಾಣಕ್ಕೆ ಭೇಟಿ ಕೊಡುವಂತೆ ಸ್ಥಳೀಯ ವ್ಯವಸ್ಥಾಪಕರು ವಿನಂತಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications