ಟೆಕ್ಸಾಸ್ನಲ್ಲಿ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ವೃಂದಾವನ ಉದ್ಘಾಟನೆ
ಹೂಸ್ಟನ್, ಟೆಕ್ಸಾಸ್ : ಶ್ರೀ ಕೃಷ್ಣ ವೃಂದಾವನವನ್ನು 'ತುಳಸಿ ಕ್ಷೇತ್ರ' ಎಂದು ಬಣ್ಣಿಸಿದ ಪುತ್ತಿಗೆ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ತುಳಸಿ ಹಬ್ಬದಂದೇ ಟೆಕ್ಸಾಸ್ನ ಭಕ್ತ ಸಮುದಾಯಕ್ಕೆ ವಿಧ್ಯುಕ್ತವಾಗಿ ಅರ್ಪಿಸಿದರು.
ಅಂದು ಶುಗರ್ಲ್ಯಾಂಡ್, ಟೆಕ್ಷಾಸ್ನ ಶ್ರೀಕೃಷ್ಣ ವೃಂದಾವನದಲ್ಲಿ ದೈವಿಕ ಭಾವ ಮೈದುಂಬಿತ್ತು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ತಾಣವಾಗಿತ್ತು. ನವೆಂಬರ್ 23, 2015ರಂದು ಸುಗುಣೇಂದ್ರ ತೀರ್ಥ ಸ್ವಾಮೀಜೀಯವರು ಹೂಸ್ಟನ್ ಭಕ್ತರಿಗೆ ಹಾಗೂ ಸಾಮಾನ್ಯವಾಗಿ ಸಮುದಾಯಕ್ಕೆ ಮೀಸಲಾಗಿರುವ ಭವ್ಯವಾದ ಶ್ರೀ ಕೃಷ್ಣ ವೃಂದಾವನ ಉತ್ಥಾನ ದ್ವಾದಶಿಯಂದು ಉದ್ಘಾಟಿಸಿದರು. [ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ ತುಳಸಿ ನಮೋ ನಮಃ]

ಶ್ರೀಮನ್ ನಾರಾಯಣನ ಆಳವಾದ ನಿದ್ರೆ ನಾಲ್ಕು ತಿಂಗಳ ನಂತರ ಜಾಗೃತವಾದಾಗ ನಡೆದ ಘಟನೆಗಳ ಪರಾಕಾಷ್ಠೆ, ತುಳಸಿ ಕಲ್ಯಾಣ- ನಾರಾಯಣನ ಜೊತೆ ತುಳಸಿಯ ಬಾಹ್ಯಾಕಾಶದ ವಿವಾಹ ಮಹೋತ್ಸವದ ಜೊತೆಗೆ ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಮಂತ್ರಘೋಷದೊಂದಿಗೆ ಅದ್ದೂರಿಯಾಗಿ ನಡೆಯಿತು.
ಮಹಾಲಕ್ಷ್ಮಿ ಅವತಾರದಲ್ಲಿ ದೇವಾಲಯದ ಉದ್ಘಾಟನೆ ಆಶೀರ್ವಾದವೆಂದು ಪರಿಗಣಿಸಲಾಗಿದೆ. ಶ್ರೀ ಪಾದಂಗಳವರು ಈ ಕ್ಷೇತ್ರವನ್ನು 'ತುಳಸಿ ಕ್ಷೇತ್ರ' ಎಂದು ಘೊಷಿಸಿದರು. ಸಾವಿರಾರು ಭಕ್ತಾಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಸತ್ವಯುತವಾದ ನೆಲ್ಲಿಕಾಯಿ ಮರಕ್ಕೆ (ಅಮಲ) ಪೂಜೆ, ತುಳಸಿ ಪೂಜೆ, ಕಾರ್ತೀಕ ದಾಮೋದರ ಮಹೋತ್ಸವದ ಆಚರಣೆಯು ವಿಜೃಂಭಣೆಯಿಂದ ನಡೆಯಿತು. [ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ]

ಭಾರತದ ಪ್ರತಿಭಾನ್ವಿತ ಗಾಯಕ ರಾಯಚೂರು ಶೇಷಗಿರಿ ದಾಸ್ ಅವರಿಂದ ಸಂಗೀತ ಕಚೇರಿ ನಡೆಯಿತು. ಶುಗರ್ಲ್ಯಾಂಡ್ ಆಧ್ಯಾತ್ಮಿಕ ವಿಚಾರಗಳ ಕೇಂದ್ರವಾಗಿ ಮೂಡಿಬರುತ್ತಿದೆ. ಮೂರು ತತ್ವ - ಶಂಕರರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತ ಮತ್ತು ಆಚಾರ್ಯ ಮಧ್ವರ ದ್ವೈತ ವಿಚಾರಗಳ ಪ್ರತಿಬಿಂಬವಾಗಿದೆ.
ಈ ಸ್ಥಳದಲ್ಲಿ ಪೂರ್ವ ಹಾಗು ಪಾಶ್ಚಿಮಾತ್ಯ ಧರ್ಮಗಳ ಸಂಗಮವಾಗಿದೆ. ಧರ್ಮಗಳು ಮತ್ತು ಸಂಪ್ರದಾಯಗಳು ಒಟ್ಟಿಗೆ ಸೇರುವುದರಿಂದ, ಶ್ರೀ ಕೃಷ್ಣ ವೃಂದಾವನವು ಹೂಸ್ಟನಿನಲ್ಲಿ ಅತ್ಯುತ್ತಮ ವೈವಿದ್ಯತೆಯನ್ನು ಹೊಂದಿದೆ. ಎಲ್ಲಾ ಧರ್ಮಗಳ, ಪಂಗಡಗಳು ಮತ್ತು ತತ್ವಗಳನ್ನು ಒಂದು ಸ್ಥಳದಲ್ಲಿ ಸಂಧಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ಹಾಗು ಅನ್ನ ಸಂತರ್ಪಣೆಯೊಂದಿಗೆ ಸಮಾಪನಗೊಂಡಿತು. ಮುಖ್ಯ ಅತಿಥಿ ಅರವಿಂದ ಯಂ ಎಲ್ಲಿಗೇರಿ ಮತ್ತು ಚಿನ್ಮಯ ಮಿಷನಿನ ಮುಖ್ಯಸ್ಥರು ಉಪಸ್ಥಿತರಿದ್ದರು.
ಭಗವದ್ಗೀತೆಯ ಸಾರವನ್ನು ತಿಳಿಸುತ್ತಾ, ಹೇಗೆ ಭಗವದ್ಗೀತೆಯು ಶ್ರೀ ಕೃಷ್ಣನ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆಯೋ ಹಾಗೆಯೇ ತುಳಸಿ ಕ್ಷೇತ್ರವು ಶ್ರೀಕೃಷ್ಣನ ಹಾಗೂ ಮಹಾಲಕ್ಷ್ಮಿಯ ಸನ್ನಿಧಾನವಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ಶ್ರೀ ಪಾದಂಗಳವರು ತಿಳಿಸಿದರು.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications