ಮೂರನೇ ನಾವಿಕ ಸಮ್ಮೇಳನಕ್ಕೆ ನೋಂದಾವಣಿ ಮಾಡಿಸಿದ್ರಾ?
ಸೆಪ್ಟೆಂಬರ್ 4ರಿಂದ 6ರವರೆಗೆ ರಾಲೆ ನಗರದಲ್ಲಿ ನಡೆಯಲಿರುವ ನಾವಿಕದ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇನ್ನು ಕೇವಲ 36 ದಿನಗಳ ಮಾತ್ರ ಬಾಕಿ ಉಳಿದಿವೆ. ಕನ್ನಡದ ಉತ್ಸವಕ್ಕೆ ನೋಂದಣಿ ಭರದಿಂದ ಸಾಗಿದ್ದರೆ, ನೋಂದಾಯಿಸಿಕೊಂಡವರು ಸೂಟ್ ಕೇಸುಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ.
ಹಚ್ಚ ಹಸಿರಿನ ನಿಸರ್ಗ ಸೌಂದರ್ಯದ ಬೀಡಾದ, ಸಂಶೋಧನಾ ತ್ರಿಭುಜ (Research Triangle) ಕೇಂದ್ರಬಿಂದುವಾದ ರಾಲೆ (Raleigh) ನಗರದಲ್ಲಿ - ಸಂಪಿಗೆ, Triad ಕನ್ನಡ ಕೂಟ ಮತ್ತು ಕರೋಲಿನಾ ಕನ್ನಡ ಬಳಗದ ಸಂಗಮದಲ್ಲಿ ನಡೆಯಲಿರುವ 2015ರ ನಾವಿಕಾ ಕನ್ನಡ ಸಮಾವೇಶಕ್ಕೆ ನೋಂದಾವಣಿ ಸಮಿತಿ ಸ್ವಾಗತ ಕೋರಿದೆ.
ಮೊದಲೇ ನೋಂದಾಯಿಸಿಕೊಂಡವರಿಗೆ ಭರ್ಜರಿ ರಿಯಾಯಿತಿ ದಕ್ಕಲಿದೆ. ಆಗಸ್ಟ್ 1ರಿಂದ ಸಾಮಾನ್ಯ ಶುಲ್ಕ ಅನ್ವಯವಾಗಲಿದೆ. ಜೊತೆಗೆ ಬಿಸಿನೆಸ್ ಫೋರಂ, ಸಾಂಸ್ಕೃತಿಕ ಕಾರ್ಯಕ್ರಮ, ಜೊತೆಗೆ ವಧುವರಾನ್ವೇಷಣೆ, ಕ್ರಿಕೆಟ್ ವರ್ಕ್ಶಾಪ್ನಂಥ ಇವೆಂಟುಗಳಿಗೆ ಬೇರೆಬೇರೆ ಶುಲ್ಕಗಳಿವೆ. ಬೇಕಿದ್ದರೆ ಎಲ್ಲವನ್ನೂ ಸೇರಿಸುವ ಒಂದೇ ಪ್ಯಾಕೇಜನ್ನೂ ಪಡೆಯಬಹುದು. ಅವರವರ ಇಷ್ಟ, ಅನುಕೂಲತೆಗಳಿಗೆ ತಕ್ಕಂತೆ ನೋಂದಾಯಿಸಿಕೊಳ್ಳಬಹುದು. [ನಾವಿಕ ಕನ್ನಡ ಸಮ್ಮೇಳನಕ್ಕೆ ದಾರಿ ಯಾವುದಯ್ಯ?]

ನೋಂದಾಯಿಸುವ ಮುನ್ನ ಕಾರ್ಯಕ್ರಮಗಳತ್ತ ಒಂದು ಹರಿಸಬಹುದು.
* ಕರ್ನಾಟಕದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವೇಷಭೂಷಣದಿಂದ ಕೂಡಿದ ಮೆರವಣಿಗೆ
* ಮನಮೋಹಕ ನಾಟಕ, ನೃತ್ಯ, ಸಂಗೀತ ಮತ್ತು ಜಾನಪದ ಕಲಾ ಕೌಶಲಗಳು
* ಹೊಟ್ಟೆ ಹುಣ್ಣಾಗಿಸುವ ಹಾಸ್ಯ
* ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಮಹಿಳಾ ಗೋಷ್ಠಿ, ಪುಸ್ತಕ ಬಿಡುಗಡೆ
* Business Forum, Educational Forum, CME and Spiritual Forum
* ಸೌಂದರ್ಯ ಸ್ಪರ್ಧೆ ಹಾಗೂ ಪ್ರತಿಭಾ ಪ್ರದರ್ಶನ
* ಒಂಟಿ ಬಾಳು ಸಾಕಾಗಿ ಜಂಟಿಯಾಗಲು Singles Meet

ವಿಶ್ವಕನ್ನಡಿಗರೇ!
ಒಂದಾಗಿ ಸೇರೋಣ ಒಂದಾಗಿ ಮೆರೆಯೋಣ
ಸಿರಿನಾಡ ಸಂಸ್ಕೃತಿಯ ಸನ್ಮಾನಿಸೋಣ
ಸವಿಯೋಣ ನಾಡ ತಿಂಡಿತೀರ್ಥಗಳ
ನಮಿಸೋಣ ಕನ್ನಡಾಂಬೆ ಪಾದಂಗಳ
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications