ಮೂರನೇ ನಾವಿಕ ಸಮ್ಮೇಳನಕ್ಕೆ ನೋಂದಾವಣಿ ಮಾಡಿಸಿದ್ರಾ?
ಸೆಪ್ಟೆಂಬರ್ 4ರಿಂದ 6ರವರೆಗೆ ರಾಲೆ ನಗರದಲ್ಲಿ ನಡೆಯಲಿರುವ ನಾವಿಕದ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇನ್ನು ಕೇವಲ 36 ದಿನಗಳ ಮಾತ್ರ ಬಾಕಿ ಉಳಿದಿವೆ. ಕನ್ನಡದ ಉತ್ಸವಕ್ಕೆ ನೋಂದಣಿ ಭರದಿಂದ ಸಾಗಿದ್ದರೆ, ನೋಂದಾಯಿಸಿಕೊಂಡವರು ಸೂಟ್ ಕೇಸುಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ.
ಹಚ್ಚ ಹಸಿರಿನ ನಿಸರ್ಗ ಸೌಂದರ್ಯದ ಬೀಡಾದ, ಸಂಶೋಧನಾ ತ್ರಿಭುಜ (Research Triangle) ಕೇಂದ್ರಬಿಂದುವಾದ ರಾಲೆ (Raleigh) ನಗರದಲ್ಲಿ - ಸಂಪಿಗೆ, Triad ಕನ್ನಡ ಕೂಟ ಮತ್ತು ಕರೋಲಿನಾ ಕನ್ನಡ ಬಳಗದ ಸಂಗಮದಲ್ಲಿ ನಡೆಯಲಿರುವ 2015ರ ನಾವಿಕಾ ಕನ್ನಡ ಸಮಾವೇಶಕ್ಕೆ ನೋಂದಾವಣಿ ಸಮಿತಿ ಸ್ವಾಗತ ಕೋರಿದೆ.
ಮೊದಲೇ ನೋಂದಾಯಿಸಿಕೊಂಡವರಿಗೆ ಭರ್ಜರಿ ರಿಯಾಯಿತಿ ದಕ್ಕಲಿದೆ. ಆಗಸ್ಟ್ 1ರಿಂದ ಸಾಮಾನ್ಯ ಶುಲ್ಕ ಅನ್ವಯವಾಗಲಿದೆ. ಜೊತೆಗೆ ಬಿಸಿನೆಸ್ ಫೋರಂ, ಸಾಂಸ್ಕೃತಿಕ ಕಾರ್ಯಕ್ರಮ, ಜೊತೆಗೆ ವಧುವರಾನ್ವೇಷಣೆ, ಕ್ರಿಕೆಟ್ ವರ್ಕ್ಶಾಪ್ನಂಥ ಇವೆಂಟುಗಳಿಗೆ ಬೇರೆಬೇರೆ ಶುಲ್ಕಗಳಿವೆ. ಬೇಕಿದ್ದರೆ ಎಲ್ಲವನ್ನೂ ಸೇರಿಸುವ ಒಂದೇ ಪ್ಯಾಕೇಜನ್ನೂ ಪಡೆಯಬಹುದು. ಅವರವರ ಇಷ್ಟ, ಅನುಕೂಲತೆಗಳಿಗೆ ತಕ್ಕಂತೆ ನೋಂದಾಯಿಸಿಕೊಳ್ಳಬಹುದು. [ನಾವಿಕ ಕನ್ನಡ ಸಮ್ಮೇಳನಕ್ಕೆ ದಾರಿ ಯಾವುದಯ್ಯ?]

ನೋಂದಾಯಿಸುವ ಮುನ್ನ ಕಾರ್ಯಕ್ರಮಗಳತ್ತ ಒಂದು ಹರಿಸಬಹುದು.
* ಕರ್ನಾಟಕದ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವೇಷಭೂಷಣದಿಂದ ಕೂಡಿದ ಮೆರವಣಿಗೆ
* ಮನಮೋಹಕ ನಾಟಕ, ನೃತ್ಯ, ಸಂಗೀತ ಮತ್ತು ಜಾನಪದ ಕಲಾ ಕೌಶಲಗಳು
* ಹೊಟ್ಟೆ ಹುಣ್ಣಾಗಿಸುವ ಹಾಸ್ಯ
* ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಮಹಿಳಾ ಗೋಷ್ಠಿ, ಪುಸ್ತಕ ಬಿಡುಗಡೆ
* Business Forum, Educational Forum, CME and Spiritual Forum
* ಸೌಂದರ್ಯ ಸ್ಪರ್ಧೆ ಹಾಗೂ ಪ್ರತಿಭಾ ಪ್ರದರ್ಶನ
* ಒಂಟಿ ಬಾಳು ಸಾಕಾಗಿ ಜಂಟಿಯಾಗಲು Singles Meet

ವಿಶ್ವಕನ್ನಡಿಗರೇ!
ಒಂದಾಗಿ ಸೇರೋಣ ಒಂದಾಗಿ ಮೆರೆಯೋಣ
ಸಿರಿನಾಡ ಸಂಸ್ಕೃತಿಯ ಸನ್ಮಾನಿಸೋಣ
ಸವಿಯೋಣ ನಾಡ ತಿಂಡಿತೀರ್ಥಗಳ
ನಮಿಸೋಣ ಕನ್ನಡಾಂಬೆ ಪಾದಂಗಳ
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications