ಹೊರನಾಡ ಕಥೆಗಾರರಿಗೊಂದು ಅಪೂರ್ವ ಅವಕಾಶ

ಕನ್ನಡದಲ್ಲಿ ಬರೆಯುವ ಅಕ್ಕರೆ ಹಾಗೂ ಕಥೆಗಳನ್ನು ಬಿಡಿಸುವ ಅಭಿರುಚಿಯುಳ್ಳವರು ಹೊಸತನವಿರುವ ಕಥೆಗಳನ್ನು ಬರೆದು 'ಸ್ವರ್ಣಸೇತು-2014' ರ ಸಂಪಾದಕ ಸಮಿತಿಗೆ ಕಳುಹಿಸಬಹುದು. ಉತ್ಕೃಷ್ಟತೆಯುಳ್ಳ ಕಥೆಗಳಿಗೆ ಸೂಕ್ತ ಬಹುಮಾನವಿರುವುದು ಮತ್ತು ಆಯ್ದಾ ಕಥೆಗಳು ಸ್ವರ್ಣಸೇತು 2014ರ ಸಂಚಿಕೆಯಲ್ಲಿ ಅಚ್ಚಾಗುತ್ತವೆ. ಸ್ವರ್ಣಸೇತು 2014ರ ಕಥಾಸ್ಪರ್ಧೆಯ ಚೌಕಟ್ಟು ಮತ್ತು ನಿಯಾಮವಾಳಿಗಳು ಕೆಳಗಿನಂತಿವೆ:
1. ಕಥೆಯು ಕನ್ನಡದಲ್ಲಿರಬೇಕು ಹಾಗೂ 1250 ಪದಗಳನ್ನು ಮೀರಿರಬಾರದು.
2. ಕಥೆಯಲ್ಲಿ ಸ್ವಂತಿಕೆ ಹಾಗೂ ಹೊಸತನವಿರಬೇಕು. ನಕಲು ಮಾಡಿದ ಹಾಗೂ ಅನುವಾದಿಸಿದ ಕಥೆಗಳನ್ನು ತಿರಸ್ಕರಿಸಲಾಗುವುದು.
3. ಸ್ವರ್ಣಸೇತುವಿಗೆ ಸಲ್ಲಿಸುವ ಕಥೆಗಳು ಮುಂಚಿತವಾಗಿ ಬೇರೆಯೆಲ್ಲೂ ಪ್ರಕಟಿತವಾಗಿರಬಾರದು.
4. ವಿದೇಶದಲ್ಲಿ ವಾಸಿಸುತ್ತಿರುವ, ಕನ್ನಡದಲ್ಲಿ ಕಥೆಗಳನ್ನು ಬರೆಯುವ ಇಚ್ಛೆ ಹಾಗೂ ಸ್ವಯಂಪ್ರೇರಣೆಯುಳ್ಳ ಕನ್ನಡಿಗರು ಸ್ವರ್ಣಸೇತು 2014ರ ಕಥಾಸ್ಪರ್ಧೆಗೆ ಅರ್ಹರು.
5. ಕಥೆಗಳನ್ನು ಬರಹ ಅಥವಾ ಯೂನಿಕೋಡ್ ಅನ್ನು ಸಹಕರಿಸುವ ಯಾವುದೇ ಕನ್ನಡ ತಂತ್ರಾಂಶ (software) ಉಪಯೋಗಿಸಿಕೊಂಡು ಬರೆದಿರಬೇಕು. ಕೈಯಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಿದ ಅಥವಾ ಹಸ್ತಪ್ರತಿ ರೂಪದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
6. ನೀವು ಬರೆದ ಕಥೆಗಳನ್ನು ಸರಿಯಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ [email protected] ಗೆ ಕಳುಹಿಸಿ. ವಿಷಯ ಸೂಚಿ (ಸಬ್ಜೆಕ್ಟ್ ಲೈನ್) ನಲ್ಲಿ 'Kathaspardhe 2014' ಎಂದು ನಮೂದಿಸುವುದನ್ನು ಮರೆಯಬೇಡಿ.
ಸೂಚನೆ : ಮೇಲೆ ತಿಳಿಸಿರುವ ಇ-ಮೇಲ್ ಗೆ ಕಳುಹಿಸುವಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಎದುರಾದಲ್ಲಿ, ನಿಮ್ಮ ಕಥೆಗಳನ್ನು [email protected] ಗೆ ಕಳುಹಿಸಿ.
7. ಕಥೆಗಳನ್ನು ಕಳುಹಿಸಲು ಅಂತಿಮ ದಿನಾಂಕ 15.03.2014.
8. ಸ್ವರ್ಣಸೇತು 2014ರ ಕಥಾಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಒಂದು ವರ್ಷ ಬೇರೆಯಲ್ಲೂ ಪ್ರಕಟಿಸುವಂತಿಲ್ಲ.
9. ಕೊನೆಯದಾಗಿ ಮತ್ತು ಮುಖ್ಯವಾಗಿ, ಕಥೆಗಳನ್ನು ಆಯ್ಕೆಮಾಡುವ ಅಥವಾ ಮಾಡದ ಹಾಗೂ ಸ್ವರ್ಣಸೇತು 2014ರ ಸಂಚಿಕೆಯಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದ ಸಂಪೂರ್ಣ ಹಕ್ಕು ಸ್ವರ್ಣಸೇತು ಸಂಪಾದಕ ಸಮಿತಿಯದ್ದಾಗಿರುತ್ತೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications