ಹೊರನಾಡ ಕಥೆಗಾರರಿಗೊಂದು ಅಪೂರ್ವ ಅವಕಾಶ

ಕನ್ನಡದಲ್ಲಿ ಬರೆಯುವ ಅಕ್ಕರೆ ಹಾಗೂ ಕಥೆಗಳನ್ನು ಬಿಡಿಸುವ ಅಭಿರುಚಿಯುಳ್ಳವರು ಹೊಸತನವಿರುವ ಕಥೆಗಳನ್ನು ಬರೆದು 'ಸ್ವರ್ಣಸೇತು-2014' ರ ಸಂಪಾದಕ ಸಮಿತಿಗೆ ಕಳುಹಿಸಬಹುದು. ಉತ್ಕೃಷ್ಟತೆಯುಳ್ಳ ಕಥೆಗಳಿಗೆ ಸೂಕ್ತ ಬಹುಮಾನವಿರುವುದು ಮತ್ತು ಆಯ್ದಾ ಕಥೆಗಳು ಸ್ವರ್ಣಸೇತು 2014ರ ಸಂಚಿಕೆಯಲ್ಲಿ ಅಚ್ಚಾಗುತ್ತವೆ. ಸ್ವರ್ಣಸೇತು 2014ರ ಕಥಾಸ್ಪರ್ಧೆಯ ಚೌಕಟ್ಟು ಮತ್ತು ನಿಯಾಮವಾಳಿಗಳು ಕೆಳಗಿನಂತಿವೆ:
1. ಕಥೆಯು ಕನ್ನಡದಲ್ಲಿರಬೇಕು ಹಾಗೂ 1250 ಪದಗಳನ್ನು ಮೀರಿರಬಾರದು.
2. ಕಥೆಯಲ್ಲಿ ಸ್ವಂತಿಕೆ ಹಾಗೂ ಹೊಸತನವಿರಬೇಕು. ನಕಲು ಮಾಡಿದ ಹಾಗೂ ಅನುವಾದಿಸಿದ ಕಥೆಗಳನ್ನು ತಿರಸ್ಕರಿಸಲಾಗುವುದು.
3. ಸ್ವರ್ಣಸೇತುವಿಗೆ ಸಲ್ಲಿಸುವ ಕಥೆಗಳು ಮುಂಚಿತವಾಗಿ ಬೇರೆಯೆಲ್ಲೂ ಪ್ರಕಟಿತವಾಗಿರಬಾರದು.
4. ವಿದೇಶದಲ್ಲಿ ವಾಸಿಸುತ್ತಿರುವ, ಕನ್ನಡದಲ್ಲಿ ಕಥೆಗಳನ್ನು ಬರೆಯುವ ಇಚ್ಛೆ ಹಾಗೂ ಸ್ವಯಂಪ್ರೇರಣೆಯುಳ್ಳ ಕನ್ನಡಿಗರು ಸ್ವರ್ಣಸೇತು 2014ರ ಕಥಾಸ್ಪರ್ಧೆಗೆ ಅರ್ಹರು.
5. ಕಥೆಗಳನ್ನು ಬರಹ ಅಥವಾ ಯೂನಿಕೋಡ್ ಅನ್ನು ಸಹಕರಿಸುವ ಯಾವುದೇ ಕನ್ನಡ ತಂತ್ರಾಂಶ (software) ಉಪಯೋಗಿಸಿಕೊಂಡು ಬರೆದಿರಬೇಕು. ಕೈಯಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಿದ ಅಥವಾ ಹಸ್ತಪ್ರತಿ ರೂಪದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
6. ನೀವು ಬರೆದ ಕಥೆಗಳನ್ನು ಸರಿಯಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ [email protected] ಗೆ ಕಳುಹಿಸಿ. ವಿಷಯ ಸೂಚಿ (ಸಬ್ಜೆಕ್ಟ್ ಲೈನ್) ನಲ್ಲಿ 'Kathaspardhe 2014' ಎಂದು ನಮೂದಿಸುವುದನ್ನು ಮರೆಯಬೇಡಿ.
ಸೂಚನೆ : ಮೇಲೆ ತಿಳಿಸಿರುವ ಇ-ಮೇಲ್ ಗೆ ಕಳುಹಿಸುವಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಎದುರಾದಲ್ಲಿ, ನಿಮ್ಮ ಕಥೆಗಳನ್ನು [email protected] ಗೆ ಕಳುಹಿಸಿ.
7. ಕಥೆಗಳನ್ನು ಕಳುಹಿಸಲು ಅಂತಿಮ ದಿನಾಂಕ 15.03.2014.
8. ಸ್ವರ್ಣಸೇತು 2014ರ ಕಥಾಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಒಂದು ವರ್ಷ ಬೇರೆಯಲ್ಲೂ ಪ್ರಕಟಿಸುವಂತಿಲ್ಲ.
9. ಕೊನೆಯದಾಗಿ ಮತ್ತು ಮುಖ್ಯವಾಗಿ, ಕಥೆಗಳನ್ನು ಆಯ್ಕೆಮಾಡುವ ಅಥವಾ ಮಾಡದ ಹಾಗೂ ಸ್ವರ್ಣಸೇತು 2014ರ ಸಂಚಿಕೆಯಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದ ಸಂಪೂರ್ಣ ಹಕ್ಕು ಸ್ವರ್ಣಸೇತು ಸಂಪಾದಕ ಸಮಿತಿಯದ್ದಾಗಿರುತ್ತೆ.
-
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು












Click it and Unblock the Notifications