ಅದ್ದೂರಿ ಗಣೇಶೋತ್ಸವ ಮತ್ತು ಸಾಹಿತ್ಯ ಬೃಂದಾವನ
ಅಮೆರಿಕಾ ನ್ಯೂ ಜೆರ್ಸಿಯ ಪ್ರತಿಷ್ಠಿತ ಕನ್ನಡ ಸಂಘ ಬೃಂದಾವನ ಕನ್ನಡ ಕೂಟದ, ಅಭಿಮಾನಿ ತಂಡದಿಂದ 'ಗಣೇಶೋತ್ಸವ ಮತ್ತು ಸಾಹಿತ್ಯ ಬೃಂದಾವನ' ಕಾರ್ಯಕ್ರಮವನ್ನು ಸೆಪ್ಟೆಂಬರ್ 23, ಶನಿವಾರದಂದು ಅತ್ಯಂತ ಸುಸಜ್ಜಿತವಾದ ಹೈಟ್ಸ್ ಟೌನ್ ಹೈ ಸ್ಕೊಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಮಧ್ಯಾಹ್ನದ 1.30ರಿಂದ ರಾತ್ರಿ 9 ಘಂಟೆಯವರೆಗೆ ಅತ್ಯಂತ ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ, ತುಂಬ ಅರ್ಥಗರ್ಭಿತವಾಗಿ ಈ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ತಬಲಾ ನಾಣಿಯವರ ಹಾಸ್ಯ ಕಾರ್ಯಕ್ರಮ, ಸುಧಾ ಬರಗೂರ್ ಅವರು ಮಾತಿನ ಓಘ ಅಮೋಘವಾಗಿದ್ದವು.
ಎಲ್ಲಕ್ಕಿಂತ ಮೊದಲು ಡಾ। ಎಂ. ಜಿ ಪ್ರಸಾದ್ ಮತ್ತು ಡಾ। ಬಸವರಾಜ್ ಹಿರೇಮಠ್ ರವರ ನೇತೃತ್ವದಲ್ಲಿ ಮಕ್ಕಳ ಕೈಯಲ್ಲೇ ಗಜಾನನ ಮುದ್ದಾದ ಮೂರ್ತಿಗಳನ್ನು ಮಾಡಿಸಿ, ಗಣೇಶ ಹಬ್ಬದ ವೈಶಿಷ್ಟ್ಯತೆ, ಆಚರಣೆ ಮತ್ತು ಹಿನ್ನಲೆ ವಿವರಿಸಿ ಮಕ್ಕಳಿಂದಲೇ ಪೂಜೆ ಮಾಡಿಸಲಾಯಿತು. ಮಕ್ಕಳು ಕೂಡ ಅಷ್ಟೇ ಶ್ರದ್ಧೆಯಿಂದ ಭಾಗಿಯಾದರು.
ಜೊತೆಗೆ ಬದುಕು ಜಟಕಾ ಬಂಡಿ ಎಂಬ ಅನುಭವಗಳ ಕಥನವಿರುವ ಪುಸ್ತಕದ ಬಿಡುಗಡೆ, ತರಂಗ ತಂಡದಿಂದ ಫ್ಯೂಷನ್ ವಾದ್ಯಗೋಷ್ಠಿ, ಅಮೆರಿಕಕ್ಕೆ ಭಾರೀ ನಷ್ಟ ತಂದ ಚಂಡಮಾರುತ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ ಇಡೀ ದಿನದ ಕಾರ್ಯಕ್ರಮಕ್ಕೆ ಸಾರ್ಥಕ ಭಾವ ಮೂಡಿಸಿದವು.

ರಂಗ ವರ್ತುಲದಿಂದ 'ವೇಷ' ನಾಟಕ ಪ್ರದರ್ಶನ
ರಂಗ ವರ್ತುಲ ತಂಡದಿಂದ ಪ್ರಶಸ್ತಿ ವಿಜೇತ ನಾಟಕ 'ವೇಷ'ವನ್ನು ಪ್ರದರ್ಶಿಸಲಾಯಿತು. ಇದೊಂದು ಭಿನ್ನ ಪ್ರಯೋಗ, ಕೇವಲ ಎರಡು ಪಾತ್ರಗಳನ್ನೊಂಡ ಈ ನಾಟಕ, ನಿತೀಶ್ ಮತ್ತು ದೀಪ್ತಿ ಅವರ ಪ್ರೌಢ ಅಭಿನಯದೊಂದಿಗೆ ಒಂದು ಘಂಟೆಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಯಕ್ಷರಂಗದ ವೇಷ ಧರಿಸುವ, ಕಳಚುವ ಪಾತ್ರದಾರಿ, ಅವನ ಆಂತರಿಕ ಸಂಘರ್ಷ, ಜಿಜ್ಞಾಸೆ ಮತ್ತು ದ್ವಂದ್ವ, ಮನುಷ್ಯನ ನಿಜಜೀವನ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.

ನಕ್ಕು ನಗಿಸಿದ ತಬಲಾ ನಾಣಿ ಮತ್ತು ತಂಡ
ತಬಲಾ ನಾಣಿ ಹಾಗು ತಂಡದಿಂದ ನಕ್ಕು ನಗಿಸುವ ಹಾಸ್ಯ ಕಾರ್ಯಕ್ರಮ 'ಹಾಸ್ಯ ರಂಜನಿ' ಅಮೋಘವಾಗಿತ್ತು. ಅವರ ಸರಳ ವ್ಯಕ್ತಿತ್ವ ಅವರ ಕಾರ್ಯಕ್ರಮದಷ್ಟೇ ಅದ್ಭುತವಾಗಿತ್ತು. ಹಾಗೆಯೇ ತಬಲಾ ನಾಣಿಯವರ ಸುಪುತ್ರಿ ಕುಮಾರಿ ಕನ್ನಡದ ಸುಮಧುರ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು.

ಹೆಮ್ಮೆಯ ಪುಸ್ತಕ ಬದುಕು ಜಟಕಾ ಬಂಡಿ
'ಬದುಕು ಜಟಕಾ ಬಂಡಿ' ಪುಸ್ತಕ ಬೃಂದಾವನದ ಹೆಮ್ಮೆಯ ಪ್ರಕಾಶನ. ಸುಪ್ರಸಿದ್ದ ಕವಿ, ದಾರ್ಶನಿಕ ಡಿ.ವಿ.ಜಿ.ಯವರ ನುಡಿಯಂತೆ ಇದು ಜೀವನದ ಅನುಭವಗಳ ಸರಮಾಲೆ. ನಲವತ್ತಕ್ಕೂ ಹೆಚ್ಚು ಅನಿವಾಸಿ ಲೇಖಕರ ಅನುಭವಗಳನ್ನೊಳಗೊಂಡ ಸಂಕಲನ. ಈ ಪುಸ್ತಕಕ್ಕೆ ಕನ್ನಡದ ಸಹೃದಯಿ, ನಿತ್ಯೋತ್ಸವ ಕವಿ ಡಾ|| ನಿಸ್ಸಾರ್ ಅಹ್ಮದ್ ಪ್ರೋತ್ಸಾಹದ ಮಾತುಗಳೊಂದಿಗೆ ಮುನ್ನುಡಿ ಬರೆದಿದ್ದಾರೆ. ಈ ಸುಸಂದರ್ಭದಲ್ಲಿ ಎಲ್ಲಾ ಲೇಖಕರನ್ನು ವೇದಿಕೆಯ ಮೇಲೆ ಬರಮಾಡಿಕೊಂಡು ಸುಧಾ ಬರಗೂರ್ ಪುಸ್ತಕ ಬಿಡುಗಡೆ ಮಾಡಿದರು.

ಸುಧಾ ಬರಗೂರ್ ಹಾಸ್ಯದ ಹೊನಲು
ಕನ್ನಡದ ಸುಪ್ರಸಿದ್ದ ಹಾಸ್ಯಗಾರ್ತಿ ಸುಧಾ ಬರಗೂರ್ ಸತತವಾಗಿ 2 ಘಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿ, ನಗೆಯ ಕಡಲನ್ನೇ ಹರಿಸಿದರು. ಅವರ ಮಾತಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸಭಿಕರು ಕೊನೆಯಲ್ಲಿ ನಿಂತು ಗೌರವವನ್ನು (Standing Ovation) ಸೂಚಿಸಿದರು.

ಹಬ್ಬದೂಟ, ಮಕ್ಕಳ ಉಪಚಾರ
ನಕ್ಕುನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡ, ಹುಚ್ಚೆದ್ದು ಕುಣಿದ ಸಭಿಕರಿಗೆ ಸಂಜೆಯ ಹೊತ್ತಿಗೆ ಭರ್ಜರಿ ಹಸಿವು. ಹಬ್ಬದ ರುಚಿ ರುಚಿಯಾದ ಭೂರಿ ಭೋಜನ ಸೊಗಸಾಗಿತ್ತು. ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿತ್ತು. ವಿಶೇಷವೆಂದರೆ, ಪುಟಾಣಿ ಮಕ್ಕಳು ಬಡಿಸಿ ಸಭಿಕರನ್ನು, ಅತಿಥಿಗಳನ್ನು ಉಪಚರಿಸುತ್ತಿದ್ದುದು ಎಲ್ಲರ ಮನ ಸೂರೆಗೊಂಡಿತ್ತು.

ತರಂಗ ವಾದ್ಯಗೋಷ್ಠಿಗೆ ಹುಚ್ಚೆದ್ದು ಕುಣಿದ ಜನರು
ರಾತ್ರಿಯ ತರಂಗ ಫ್ಯೂಶನ್ ವಾದ್ಯಗೋಷ್ಠಿ ದೈವಿಕವಾಗಿದ್ದು ಮೈ ಮನಸುಗಳನ್ನು ಸೂರೆಗೊಂಡವು. ಸುಚೇತನ್, zee ಖ್ಯಾತಿ ಐಶ್ವರ್ಯ, ವೆಂಕಿ, ಭರತ್ ಮತ್ತು ರಾಜೀವರ ಗಾನ ಸುಧೆಗೆ ಮಕ್ಕಳು ಮುದುಕರೆನ್ನದೆ ಎಲ್ಲರೂ ವೇದಿಕೆಯ ಮುಂಭಾಗಕ್ಕೆ ಬಂದು ಕುಣಿದದ್ದು ತರಂಗದ ಯಶಸ್ಸನ್ನು ತೋರಿಸುತ್ತಿತ್ತು.

ಚಂಡಮಾರುತ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
ಈ ಸಂದರ್ಭದಲ್ಲಿ ಬೃಂದಾವನ ಸೇವಾ ತಂಡ ಇತ್ತೀಚಿನ ಚಂಡಮಾರುತ ಸಂತ್ರಸ್ತರಿಗೆ raffle ಮುಖಾಂತರ ದೇಣಿಗೆ ಸಂಗ್ರಹಿಸಿತು. ಅಭಿಮಾನಿ ತಂಡದ ಈ ಕಾರ್ಯಕ್ರಮಕ್ಕೆ ಹಲವಾರು ಪ್ರಾಯೋಜಕರು ನೆರವಿನ ಹಸ್ತ ಚಾಚಿ, ಯಶಸ್ವಿಯಾಗಲು ಸಹಕರಿಸಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications