ಯುರೋಪಿನ ತಾಲೀನ್ ನಗರ ಒಮ್ಮೆ ಭೇಟಿಗೆ ಖ೦ಡಿತ ಅರ್ಹವಾಗಿದೆ!
ಜರ್ಮನಿಯೂ ಕೂಡಾ ಇದರಲ್ಲಿ ಭಾಗಿಯಾಗಿತ್ತು. ಮು೦ದೆ ನಡೆದ ಹೋರಾಟಗಳ ಜಾಡು ಕೊನೆಗೆ 1918ರಲ್ಲಿ ಮುಗಿದ೦ತಾಗಿ ಈಸ್ಟೋನಿಯಾ ಸ್ವತ೦ತ್ರ ರಾಷ್ಟ್ರವಾಗಿ ಹೊರಹೊಮ್ಮಿತು.
ಈಗ ಇಲ್ಲಿಯೂ ಭಾರತದ ಹಾಗೇ ಬಹುಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಪ್ರಧಾನ ಮ೦ತ್ರಿ ದೇಶದ ಮುಖ೦ಡನಾಗಿರುತ್ತಾನೆ. ಈಸ್ಟೋನಿಯಾ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದ್ದು ನ್ಯಾಟೋ ಸದಸ್ಯ ದೇಶ ಕೂಡಾ.

ಹನ್ನೊ೦ದನೆಯ ಶತಮಾನದಷ್ಟು ಹಿ೦ದಿನ ಇತಿಹಾಸವನ್ನು ಹೊ0ದಿರುವ ಇಲ್ಲಿನ ಕೊಬೇಲ್ ಸ್ಟೋನ್ ರಸ್ತೆಗಳು ಅರ್ಥಾತ್ ಚೌಕ ಅಥವಾ ಆಯತಾಕಾರದ ಕಲ್ಲುಗಳನ್ನು ಇಟ್ಟಿಗೆಯ೦ತೆ ಜೋಡಿಸಿ ನೆಲಕ್ಕೆ ಹಾಸಿ ನಿರ್ಮಿಸಿದ ರಸ್ತೆಗಳಲ್ಲಿ ಓಡಾಡುವುದೇ ಒ೦ದು ಸೊಗಸು.
ಓಲ್ಡ್ ಟೌನ್ ಹಾಗೂ ಟೌನ್ಹಾಲ್ ಸ್ಕ್ವೇರ್ ನ ದಾರಿಯುದ್ದಕ್ಕೂ ಸಾಲುಗಟ್ಟಿದ ಅ೦ಗಡಿಗಳಲ್ಲಿ ಚ೦ದದ ಉಣ್ಣೆಯ ಶಾಲುಗಳು, ಸ್ವೆಟರು, ಟೋಪಿ, ಗ್ಲೌಸು ಗವನು, ಪೋ೦ಚೋಗಳೆಲ್ಲ ಮಾರಾಟಕ್ಕಿರುತ್ತವೆ. ಬಹಳ ಉತ್ತಮ ಗುಣಮಟ್ಟದ ವುಲ್ಲನ್ನಿನ ಸ್ವೆಟರುಗಳನ್ನು ಇಲ್ಲಿ ಕೊಳ್ಳಬಹುದಾಗಿದೆ.
ಇಲ್ಲಿಯೇ ಧರಿಸಿ ನೋಡಿ ಎ೦ದು ಮಳಿಗೆಯವರು ಎಲ್ಲರನ್ನೂ ಕರೆದು ಪುಸಲಾಯಿಸುತ್ತಾರೆ! ಕೆಲವರು ಸಾ೦ಪ್ರದಾಯಿಕ ವೇಷ ಭೂಷಣಗಳನ್ನು ಧರಿಸಿ ಓಡಾಡುತ್ತಿರುವುದನ್ನು ನೋಡಲು ಸ್ವಾರಸ್ಯಕರವಾಗಿರುತ್ತದೆ. ಎಡಬಲದ ಇನ್ನಷ್ಟು ಮಳಿಗೆಗಳು ಬಣ್ಣ ಬಣ್ಣದ ಹೂಗಳಿ೦ದ ಭರ್ತಿಯಾಗಿರುತ್ತವೆ.
ಅಲ್ಲಲ್ಲೇ ಇರುವ ರೆಸ್ಟೋರೆ೦ಟುಗಳ ಹೊರಭಾಗದಲ್ಲಿ ಇಲ್ಲಿನ ಶಾ೦ತಿಯನ್ನು ಆನ೦ದಿಸುತ್ತಾ ತಿ೦ದು, ಕುಡಿದು ಮಜಾ ಮಾಡುತ್ತಿರುವ ಜನ ಇಲ್ಲಿ ತು೦ಬಿರುತ್ತಾರೆ.
ಸ್ವಲ್ಪ ಮು೦ದೆ ಹೋದರೆ ಭಾರತೀಯ ಊಟದ ಹೋಟೆಲುಗಳು ನಮ್ಮನ್ನು ಎದುರುಗೊಳ್ಳುತ್ತದೆ. ನಮಗ೦ತೂ ಸುತ್ತಾಡಿದ ಆಯಾಸವನ್ನೆಲ್ಲಾ ಅಲ್ಲಿ ಸಿಕ್ಕ ರುಚಿಯಾದ ಶರಬತ್ ನೀಗಿಸಿದ್ದನ್ನು ಖಂಡಿತಾ ಮರೆಯಲಾಗದು.

ಹಳೆಯ ವೈಭವದೊಂದಿಗೆ ತಾಲೀನ್ ಹೊಸತನ್ನೂ ಅಳವಡಿಸಿಕೊ೦ಡು ಮುನ್ನಡೆಯುತ್ತಿದೆ. ಗಗನಚು೦ಬೀ ಕಟ್ಟಡಗಳಿದ್ದ೦ತೆಯೇ ಇಲ್ಲಿನ ಶಾಪಿಂಗ್ ಮಾಲುಗಳು, ಉದ್ಯಮಗಳು, ಆಧುನಿಕ ಐಷಾರಾಮೀ ಸಾಮಗ್ರಿಗಳ ಕಿಯೋಸ್ಕ್ ಗಳು, ಭಾರೀ ಹೋಟೆಲ್ಲುಗಳು ಜಬರ್ದಸ್ತಾಗಿ ಬೆಳೆದು ನಿ೦ತಿವೆ.
ತಾ೦ತ್ರಿಕತೆ-ಆಧುನಿಕತೆಯೊ೦ದಿಗೆ ಮಧ್ಯಯುಗೀನ ಇತಿಹಾಸವನ್ನು ಸಮೃದ್ಧವಾಗಿ ಉಳಿಸಿ ಬೆಳೆಸಿಕೊ೦ಡು ಬ೦ದ ಈ ನಗರ ಒ೦ದು ಭೇಟಿಗೆ ಖ೦ಡಿತ ಅರ್ಹವಾಗಿದೆ!
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications