ಸಿಂಗಪುರದಲ್ಲಿ 'ಕನ್ನಡ ಕಲಿ'ಯುತ್ತಿರುವ ಮಕ್ಕಳಿಗೆ ಅಭಿನಂದನೆ
ಕನ್ನಡ ಸಂಘ (ಸಿಂಗಪುರ)ದ ಕನ್ನಡ ಕಲಿಕಾ ಕೇಂದ್ರದಿಂದ ಸತತವಾಗಿ ನಾಲ್ಕು ವರ್ಷಗಳಿಂದ ಸಿಂಗಪುರದಲ್ಲಿನ ಕನ್ನಡ ಸಂಘದ ಸಿಂಗನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನ ಸಫಲವಾಗಿ ನಡೆಯುತ್ತಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆಯುತ್ತಿರುವ "ಕನ್ನಡ ಕಲಿ" ಚಟುವಟಿಕೆಗಳು, ಹೊರದೇಶದಲ್ಲಿನ ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಕಂಪನ್ನು ಹರಡಿ ತಮ್ಮ ನಾಡಭಾಷೆಯ ಸೊಬಗು ಹಾಗೂ ಮಹತ್ವವನ್ನು ತಿಳಿಯಪಡಿಸುವ ಒಂದು ಅಳಿಲು ಸೇವೆ ಎನ್ನಬಹುದು.
ಪ್ರಾರಂಭದಲ್ಲಿ ವರ್ಣಮಾಲೆಯ ಪರಿಚಯ, ಕನ್ನಡದಲ್ಲಿ ಕತೆಗಳನ್ನು ಹೇಳುವುದರ ಮೂಲಕ ಶುಭಾರಂಭಗೊಂಡ ಈ ಚಟುವಟಿಕೆಗಳು ಈ ವರ್ಷ 'ಪ್ರಥಮ' ಹಾಗೂ 'ಮಧ್ಯಮ' ಎಂಬ ಎರಡು ವಿಭಾಗಗಳಲ್ಲಿ ತರಗತಿಗಳು ನಡೆದಿವೆ. [ಸಿಂಗಪುರದಲ್ಲಿ ಬಾರಿಸಿದ 'ಕನ್ನಡ ಕಲಿ' ಡಿಂಡಿಮ]

ಕಳೆದ ವರ್ಷಗಳಲ್ಲಿ ವರ್ಣಮಾಲೆಯನ್ನು ಕಲಿತ 10 ಮಕ್ಕಳು ಈ ಬಾರಿ 'ಮಧ್ಯಮ' ವಿಭಾಗದ ತರಗತಿಗಳಲ್ಲಿ 'ಕಾಗುಣಿತ', ಒತ್ತಕ್ಷರಗಳ ಅಭ್ಯಾಸದ ಜೊತೆಗೆ ಅವುಗಳನ್ನೊಳಗೊಂಡ ಸರಳ ಹಾಗೂ ಕಠಿಣ ಪದಗಳನ್ನು ಸ್ವಂತವಾಗಿ ಬರೆಯುವಷ್ಟು ಕಲಿತಿರುವುದು ಮಕ್ಕಳ ಆಸಕ್ತಿ ಹಾಗೂ ಪೋಷಕರ ನಿರೀಕ್ಷೆಯನ್ನು ಪೂರೈಸಿದೆ.
ಪ್ರಥಮ ವಿಭಾಗದಲ್ಲಿ ಸುಮಾರು 22 ಮಕ್ಕಳು ಹೊಸದಾಗಿ ಸೇರ್ಪಡೆಗೊಂಡು ವರ್ಣಮಾಲೆ, ಸರಳಪದಗಳು ಹಾಗೂ ಕನ್ನಡದ ಶಿಶುಗೀತೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. 17 ಜನವರಿ 2016ರಿಂದ 28 ಫೆಬ್ರವರಿ 2016ರವರೆಗೆ ಮಕ್ಕಳು ತಮ್ಮ ವಾರಾಂತ್ಯದ ಬಿರುಸಿನ ಚಟುವಟಿಕೆಗಳ ನಡುವೆ 'ಕನ್ನಡ ಕಲಿ' ತರಗತಿಗಳಿಗೆ ಬಹು ಉತ್ಸುಕತೆಯಲ್ಲಿ ಭಾಗವಹಿಸುತ್ತಿರುವುದು ಕನ್ನಡ ಶಿಕ್ಷಕರಾದ ರಾಮನಾಥ್, ವೆಂಕಟ್, ಶ್ರೀನಿವಾಸ್ ಕೆ.ಜೆ, ವಿನಾಯಕ ನಾಡಿಗೇರ ಹಾಗೂ ಶ್ರೀವಿದ್ಯಾ ಅವರ ಕನ್ನಡ ಕಲಿಸುವ ಕೈಂಕರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಿದೆ. [ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಕಲಿಯಿರಿ]

ಎಲ್ಲಾ ಕನ್ನಡ ಕಲಿ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು 6 ಮಾರ್ಚ್ 2016ರಂದು SINDA ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ, ಮಕ್ಕಳು ತಾವು ಕಲಿತ ಅಕ್ಷರಮಾಲೆ, ಕಾಗುಣಿತ, ಒತ್ತಕ್ಷರ, ಸರಳಪದಗಳು, ಸರಳವಾಕ್ಯ ರಚನೆ, ಕತೆಯನ್ನು ಓದುವುದು ಹಾಗೂ ಸರಳ ವ್ಯಾಕರಣವನ್ನು ನೆರೆದಿದ್ದ ಪೋಷಕರಿಗೆ ಪ್ರದರ್ಶಿಸಿದರು.
ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ ಅವರ ಸಾನ್ನಿಧ್ಯದಲ್ಲಿ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ಹಾಗೂ ತರಗತಿಗಳನ್ನು ನಡೆಸಿಕೊಟ್ಟ ಶಿಕ್ಷಕರಿಗೆ ಸಂಘದ ಪರವಾಗಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. [ಎದೆ ಉಬ್ಬಿಸಿ ಹೇಳುತ್ತೇನೆ 'ನಾನು ಕನ್ನಡಿಗ']

ಮಕ್ಕಳು ತಮ್ಮ ಅಭ್ಯಾಸವನ್ನು ಮನೆಯಲ್ಲಿ ಮುಂದುವರೆಸುವಂತೆ ಪೋಷಕರು ಮಾಡಿದ್ದಲ್ಲಿ ಸಂಘದ ಈ ಶ್ರಮ ಸಾರ್ಥಕ. ಮುಂಬರುವ 'ಕನ್ನಡ ಕಲಿ' ತರಗತಿಗಳನ್ನು ಹೆಚ್ಚಿನ ಮಟ್ಟಕ್ಕೆ ಕರೆದ್ಯೊಯ್ದು, ಕರ್ನಾಟಕದಲ್ಲಿನ ಪ್ರಾಥಮಿಕ ಶಿಕ್ಷಣದಲ್ಲಿನ ಪಠ್ಯಕ್ರಮವನ್ನು ಪಾಲಿಸುವ ಆಶಯವನ್ನು ಕನ್ನಡ ಸಂಘ (ಸಿಂಗಪುರ)ವು ಹೊಂದಿದೆಂಬುದು ಹೆಮ್ಮೆಯ ವಿಷಯ.
ವರದಿ - ವೆಂಕಟ್
ಛಾಯಾಚಿತ್ರ - ಗಿರೀಶ್ ಜಮದಗ್ನಿ
-
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications