ಸಂಭ್ರಮದ 40ನೇ ಹುಟ್ಟುಹಬ್ಬ ಆಚರಿಸಿದ 'ಮಂದಾರ'
ಬೋಸ್ಟನ್ ನಗರದ "ಮಂದಾರ - ನ್ಯೂ ಇಂಗ್ಲೆಂಡ್ ಕನ್ನಡ ಕೂಟ" ಇದೇ ಕಳೆದ ಅಕ್ಟೋಬರ್ 6, 7ರಂದು ತನ್ನ 40ನೇ ವರ್ಷದ ರತ್ನ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಿತು. ಕರ್ನಾಟಕದಿಂದ ಆಗಮಿಸಿದ್ದ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ, ಮಾತುಗಾರ್ತಿ ಸುಧಾ ಬರಗೂರು ಮತ್ತು ಹಾಡುಗಾರ್ತಿ ಬಿ.ಆರ್. ಛಾಯಾ ಅವರು ಉತ್ಸವಕ್ಕೆ ಹೊಸ ಮೆರುಗನ್ನು ನೀಡಿದರು.
ಅಮೆರಿಕೆಗೆ ವಲಸೆ ಬಂದ ಕನ್ನಡಿಗರು ತಮ್ಮ ಮಾತೃಭೂಮಿ, ಮಾತೃಭಾಷೆಯ ಜತೆಗಿನ ನಂಟನ್ನು ಬಲಪಡಿಸಲೆಂದು ನಾಲ್ಕು ದಶಕಗಳ ಹಿಂದೆ ಕಟ್ಟಿದ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ಕನ್ನಡದ ಹಾಸ್ಯ ಲೇಖಕಿ, ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದರು. ಭಾರತದಲ್ಲಿ ಅರ್ಥವ್ಯವಸ್ಥೆಗೆ ಹೊಸ ವ್ಯಾಖ್ಯೆ ನೀಡಿದ ಇಂದಿನ ಹೊಸ ಪೀಳಿಗೆಯ ಜಾಗತಿಕ ಕನ್ನಡಿಗರನ್ನು ಅಭಿನಂದಿಸಿ, ಅವರಲ್ಲಿರುವ ಕನ್ನಡ ಪ್ರೀತಿಯ ಚಿಲುಮೆ ಬತ್ತದಿರಲಿ ಎಂದು ಹಾರೈಸಿದರು.
ಇಲ್ಲಿನ ಕನ್ನಡಿಗರೆಲ್ಲ ಸೇರಿ ಹೊರತಂದ ಸ್ಮರಣ ಸಂಚಿಕೆ "ದೀವಿಗೆ"ಯನ್ನು ಬಿಡುಗಡೆಗೊಳಿಸಿ, ಅಮೆರಿಕನ್ನಡಿಗರ ಕನ್ನಡಾಭಿಮಾನವನ್ನು ಕಂಡು ಮೂಕಳಾಗಿದ್ದೇನೆ ಎಂದು ಭುವನೇಶ್ವರಿ ಹೆಗಡೆಯವರು ನುಡಿದರು. ಪ್ರೇಕ್ಷಕರ ಜತೆಗಿನ ಸಂವಾದದಲ್ಲಿ ಪಾಲ್ಗೊಂಡ ಅವರು ಅಮೆರಿಕನ್ನಡಿಗ ಮಹಿಳೆಯರು ತಮ್ಮ ಕ್ರಿಯಾಶೀಲತೆಯನ್ನು ಜತನದಿಂದ ಉಳಿಸಿ ಬೆಳೆಸಿಕೊಂಡಿರುವುದನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಎರಡು ದಿನ ಬೋಸ್ಟನ್ ಸಮೀಪದ ಮಾರ್ಲ್ಬರೋದಲ್ಲಿನ ವ್ಹಿಟ್ ಕಾಂಬ್ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆಗಮಿಸಿದ ಬಿ.ಆರ್. ಛಾಯಾ ಅವರ ತಂಡದ ಚಿತ್ರಮಂಜರಿ, ಸುಧಾ ಬರಗೂರರ ಹರಟೆ-ಹಾಸ್ಯ, ವಿದ್ಯಾಕೊಲ್ಯೂರು ಅವರ ಯಕ್ಷಮಂಜೂಶ ತಂಡದವರಿಂದ ಶ್ರೀಕೃಷ್ಣ ಪಾರಿಜಾತ- ನರಕಾಸುರ ವಧೆ ಯಕ್ಷಗಾನ ರಂಗೇರಿಸಿದ್ದಲ್ಲದೆ, ಅಮೆರಿಕಯಲ್ಲಿ ನೆಲೆಸಿರುವ ಸುನೀತಾ ಮತ್ತು ಅನೀತಾ ಅನಂತಸ್ವಾಮಿಯವರ ಭಾವಲೋಕ ಸುಗಮ ಸಂಗೀತ ಮನ ಮುದಗೊಳಿಸಿತು.
ಮಲ್ಲಿ ಸಣ್ಣಪ್ಪನವರ್ ತಂಡದ ನಾಟಕ, ಉಪಾಸನ ಒಡಿಸ್ಸಿ ತಂಡದವರ ನೃತ್ಯ, ಅರುಣ್, ಇಂದ್ರಜಿತ್ ರವರ ಕರ್ಣಾನಂದಕರ ವಯೊಲಿನ್-ಸಿತಾರ್ ಜುಗಲ್ ಬಂದಿ ಕಳೆಕಟ್ಟಿದವು. ಇವಲ್ಲದೆ ಮಂದಾರದ ಸದಸ್ಯರೇ ನಡೆಸಿಕೊಟ್ಟ ಭರತನಾಟ್ಯ, ನಾಟಕ, ಫ್ಯಾಶನ್ ಶೋ, ಮಂದಾರದ ಮಕ್ಕಳಿಂದ ಉದ್ಘಾಟನ ಸಂಗೀತ, ಸಮಿತಿ ಸದಸ್ಯರ ಮಂದಾರ ಸಂಕೇತ ಗೀತೆ, ಯುವ ಕನ್ನಡ ಸದಸ್ಯರ ಸಂಗೀತ ಕಚೇರಿ, ಕರ್ನಾಟಕ ಸೌರಭ ಕ್ವಿಜ್ ಕಾರ್ಯಕ್ರಮ ಎಲ್ಲವೂ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಗೆ ಮೆರಗು ನೀಡಿದವು.
ಸತತ ಎರಡು ದಿನಗಳ ಹಬ್ಬದ ವಾತವರಣದಲ್ಲಿ ಊಟೋಪಚಾರವೂ ಹಬ್ಬದಂತೆಯೇ ಇದ್ದು, ಚಿರೋಟಿ, ಕಡುಬು, ಬೂಂದಿ ಲಾಡು, ಬೀಟ್ರೂಟ್ ಹಲ್ವ, ಶ್ಯಾವಿಗೆ ಪಾಯಸ, ಹೋಳಿಗೆಗಳೊಂದಿಗೆ ಸಕಲ ಬಗೆಯ ಮೃಷ್ಟಾನ್ನ ಭೋಜನವಿತ್ತು. ಮಲ್ಲಿಗೆ ಹೂವಿನ ಮಾಲೆ, ಮಾವಿನೆಲೆ ತೋರಣ, ಬಾಳೆಕದಿರಿನ ಅಲಂಕಾರದ ಆದರಾತಿಥ್ಯದ ಉತ್ಸವ ಸಕಲ ಸಂಭ್ರಮದೊಂದಿಗೆ, ಎಲ್ಲರ ಮೆಚ್ಚುಗೆಯೊಂದಿಗೆ ಪೂರ್ಣಗೊಂಡಿತ್ತು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ













Click it and Unblock the Notifications