ಆಕ್ಲೆಂಡ್ ಕನ್ನಡಿಗರ ಹೆಮ್ಮೆ ಡಾ.ಲಿಂಗಪ್ಪ ಕಲ್ಬುರ್ಗಿ

"ಈ ಪ್ರಶಸ್ತಿ ಹೊರನಾಡಿನ ಕನ್ನಡಿಗರಿಗೆ ಒಂದು ಸಂದೇಶವೂ ಹೌದು, ಎಲ್ಲೇ ಇರಲಿ ನಾವು ಕನ್ನಡಕ್ಕಾಗಿ ಶ್ರಮಿಸಿದರೆ ನಮ್ಮ ಮಾತೃ ಭೂಮಿ ನಮ್ಮನ್ನು ಆದರಿಸುತ್ತದೆ" ಎಂದು ಹೇಳಿರುವ ಡಾ.ಕಲ್ಬುರ್ಗಿ ಅವರು ನ್ಯೂಜಿಲೆಂಡ್ ಕನ್ನಡ ಕೂಟ ತನ್ನ ಎಲ್ಲಾ ಕನ್ನಡ ಪರ ಕೆಲಸಗಳನ್ನೂ ಮುಂದುವರೆಸಿಕೊಂಡು ಹೋಗಲು ಇದು ಪ್ರೇರಣೆಯಾಗುತ್ತದೆ ಎಂದು ಆಶಿಸಿದರು.
ಸುಮಾರು ಹದಿನೆಂಟು ವರ್ಷದ ಹಿಂದೆ 'ಅಂಕಲ್' ಎಮ್.ಕೆ. ವಾಮನ ಮೂರ್ತಿ ಮುಂತಾದ ಸದಭಿಮಾನಿಗಳೊಂದಿಗೆ ಸೇರಿ ನ್ಯೂಜಿಲೆಂಡ್ ಕನ್ನಡ ಕೂಟ ಸ್ಥಾಪನೆಗೆ ನೆರವಾಗಿ ಅದರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು. ಗ್ರಂಥಾಲಯ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿರುವ ಡಾ.ಕಲ್ಬುರ್ಗಿ ಅವರು ಆಕ್ಲೆಂಡಿನಲ್ಲಿರುವ ಕನ್ನಡ ಗ್ರಂಥಾಲಯಕ್ಕೆ ತಮ್ಮ ಸ್ವಂತ ಸಂಗ್ರಹದಿಂದ ಅನೇಕ ಅಮೂಲ್ಯ ಪುಸ್ತಕಗಳನ್ನು ನೀಡಿ ಅದರಿಂದ ಉತೃಷ್ಟ ಸೇವೆ ದೊರೆಯುವಂತೆ ಮಾಡಿದ್ದಾರೆ. ಈಗ ಕನ್ನಡ ಕೂಟ ನಡೆಸುತ್ತಿರುವ ಕನ್ನಡ ಶಾಲೆ, ಪತ್ರಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವನ್ನು ಒಂದು ಸುಭದ್ರ ಅಡಿಪಾಯದ ಮೇಲೆ ನಿಲ್ಲುವಂತೆ ಮಾಡುವುದರಲ್ಲಿ ಅವರ ಕೊಡುಗೆ ಅಪಾರ.
ಡಾ. ಕಲ್ಬುರ್ಗಿ ಅವರು ಕನ್ನಡ ಕೂಟಕ್ಕೆ ಮಾತ್ರವಲ್ಲದೆ ಇತರ ಸ್ಥಳೀಯ ಸಂಘ ಸಂಸ್ಥೆಗಳ ಬೆಳವಣಿಗೆಗೂ ಶ್ರಮಿಸಿದ್ದಾರೆ. ನ್ಯೂಜಿಲೆಂಡ್ ಇಂಡಿಯನ್ ಕೇಂದ್ರೀಯ ಸಂಸ್ಥೆ, ಆಕ್ಲೆಂಡಿನ ಭಾರತೀಯ ಸಂಘ ಸಂಸ್ಥೆಗಳು, ಭಾರತೀಯ ಸಮುದಾಯದ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಾರಂಭಿಸಲಾದ ಅನೇಕ ಸಂಸ್ಥೆಗಳು ಅವರಿಗೆ ಆಭಾರಿಯಾಗಿವೆ. ಅವಕಾಶ ದೊರೆತಾಗ ಅಂತಹ ಸಂಸ್ಥೆಗಳಲ್ಲಿ ಕನ್ನಡಿಗರಿಗೂ ಸ್ಥಾನಮಾನಗಳು ಸಿಗುವಂತೆ ನೆರವಾಗಿದ್ದಾರೆ.
ಇದಲ್ಲದೆ 'ಬಸವ ಸಮಿತಿ'ಯ ನ್ಯೂಜಿಲೆಂಡ್ ವಿಭಾಗ, ಆಕ್ಲೆಂಡ್ ಡಿಸ್ಟ್ರಿಕ್ಟ್ ಕೌನ್ಸಿಲ್ ಆಫ಼್ ಸೊಶಿಯಲ್ ಸರ್ವೀಸಸ್, ದಿ ಏಷ್ಯಾ ನೆಟ್ ವರ್ಕ್ ಇಂಕ್, ಏಷ್ಯಾ ಪೆಸಿಫಿಕ್ ಕನ್ನಡ ಒಕ್ಕೂಟ ಮುಂತಾದ ಹಲವು ಸೇವಾ ಸಂಘಟನೆಗಳಿಗೆ ಅವರ ಕೊಡುಗೆ ಅನನ್ಯ. ಈ ಎಲ್ಲಾ ಕಾರಣಗಳಿಂದ ನ್ಯೂಜಿಲೆಂಡ್ ಸರ್ಕಾರ ಉನ್ನತ ಸಾರ್ವಜನಿಕ ಸೇವೆಸಲ್ಲಿಸುವ ತನ್ನ ನಾಗರೀಕರಿಗೆ ನೀಡುವ 'ಕ್ವೀನ್ಸ್ ಸರ್ವೀಸ್ ಮೆಡಲ್' [MEMBER OF THE NEWZEALAND ORDER OF MERIT] ಅನ್ನು ನೀಡಿ ಡಾ.ಕಲ್ಬುರ್ಗಿಯವರನ್ನು ಗೌರವಿಸಿದೆ.
ಡಾ.ಕಲ್ಬುರ್ಗಿ ಅವರ ಪತ್ನಿ ಲೀನಾ ಕಲ್ಬುರ್ಗಿ ತಮ್ಮ ಪತಿಯ ಎಲ್ಲಾ ಸಮಾಜ ಸೇವಾ ಕಾರ್ಯಗಳಲ್ಲಿ ನೆರವಾಗಿದ್ದಾರೆ. ನ್ಯೂಜಿಲೆಂಡ್ ಕನ್ನಡ ಕೂಟ ತನ್ನ ಸ್ಥಾಪನೆಯ ಉದ್ದೇಶ ಸಫಲಗೊಳಿಸಲಿ, ಕನ್ನಡ ಡಿಂಡಿಮವನ್ನು ಸದಾಕಾಲ ಬಾರಿಸಲಿ ಎಂಬುದು ಈ ಅಪೂರ್ವ ಕನ್ನಡಿಗ ದಂಪತಿಗಳ ಆಶಯ. ಡಾ.ಕಲ್ಬುರ್ಗಿಯವರಿಗೆ ಪ್ರಶಸ್ತಿ ನೀಡಿದ ಕರ್ನಾಟಕ ರಾಜ್ಯ ಸರ್ಕಾರವನ್ನು ಮತ್ತು ಪ್ರಶಸ್ತಿ ಪಡೆದು ನಮ್ಮೆಲ್ಲರಿಗೂ ಹರ್ಷ ತಂದಿರುವ ಡಾ. ಲಿಂಗಪ್ಪ ಕಲ್ಬುರ್ಗಿ ಅವರನ್ನು "ಕೀವಿ ಕನ್ನಡಿಗರು" ನಾವೆಲ್ಲರೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications