ಮೈಸೂರಿನಿಂದ ಕ್ವೀನ್ ಎಲಿಜಬೆತ್ ಆಸ್ಥಾನಕ್ಕೆ ರಘು

ಮೇ.13ರಂದು ನಡೆಯಲಿರುವ ಕ್ವೀನ್ ಎಲಿಜಬೆತ್ II ಅವರ Diamond Jubilee Pageant ನಲ್ಲಿ ಹಾಡಲಿರುವ ಏಕೈಕ ಭಾರತೀಯ ಸಂಗೀತಗಾರ ಎಂಬ ಹಿರಿಮೆಗೆ ರಘು ಪಾತ್ರರಾಗಿದ್ದಾರೆ.
ರಘು ದೀಕ್ಷಿತ್ ತಮ್ಮ ಸಂಗೀತದ ಮೂಲಕ ಹಾಗೂ ಪತ್ನಿ ಮಯೂರಿ ಉಪಾಧ್ಯಾಯ ಅವರ ಸಮಕಾಲೀನ ನೃತ್ಯದ ಮೂಲಕ ರಾಣಿ ಎಲಿಜಬೆತ್ ರನ್ನು ರಂಜಿಸಲು ಸಿದ್ಧರಾಗಿದ್ದಾರೆ. 'Mysore Se Aayi..' ಎನ್ನುತ್ತಾ ರಘು ಹಾಡಿ ಕುಣಿಯಲಿದ್ದಾರೆ.
'ಲಕ್ಷದಲ್ಲಿ ಒಬ್ಬರಿಗೆ ಸಿಗಬಹುದಾದ ಅವಕಾಶ ಇದು. ಯುಕೆ ನನಗೆ ಹೊಸದೇನಲ್ಲ. ಆದರೆ, ಈ ಅವಕಾಶ ತುಂಬಾ ವಿಶೇಷ' ಎಂದು ರಘು ಹೇಳುತ್ತಾರೆ.
ಒಂದು ಗಂಟೆಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 700 ಮಂದಿಯ ಆರ್ಕೆಸ್ಟ್ರಾದೊಂದಿಗೆ ರಘು ರಸಸಂಜೆ ಜೊತೆಗೆ 550 ಕುದುರೆಗಳ ವಿಶೇಷ ನಡಿಗೆ. ನೃತ್ಯ ಪ್ರದರ್ಶನವಿರುತ್ತದೆ. ವಿಶ್ವದೆಲ್ಲೆಡೆಯಿಂದ ಬಂದಿರುವ ಕಲಾವಿದರು ರಾಣಿ ಎಲಿಜಬೆತ್ ಮನ ಸಂತೋಷಪಡಿಸಲಿದ್ದಾರೆ.
ರಘು ದೀಕ್ಷಿತ್ ಅವರಿಗೆ 3-5 ನಿಮಿಷಗಳ ಕಾಲ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಲಭ್ಯವಾಗಲಿದೆ. ಆಫ್ರಿಕಾ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಇನ್ನಿತರ ದೇಶದ ಕಲಾವಿದರೊಂದಿಗೆ ರಘು ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪತ್ನಿ ಮಯೂರಿ ಜೊತೆ ಪ್ರಥಮ ಬಾರಿಗೆ ಪ್ರದರ್ಶನ ನೀಡುತ್ತಿರುವುದು ರಘು ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.
12 ಮಂದಿ ನರ್ತಕಿಯರ ತಂಡದೊಂದಿಗೆ ಬಾಲಿವುಡ್ ಗೀತೆಯೊಂದಕ್ಕೆ ನರ್ತಿಸಲು ಚಿಂತಿಸಿದ್ದ ಮಯೂರಿ ನಂತರ ಮನಸ್ಸು ಬದಲಾಯಿಸಿದ್ದಾರೆ. ನಮ್ಮ ಸಂಸ್ಕೃತಿ ಬಿಂಬಿಸುವ ದೇಸಿ ಗೀತೆಯ ನಾದಕ್ಕೆ ಮಯೂರಿ ತಂಡ ಕುಣಿಯಲಿದೆ. ಮೈಸೂರಿನಿಂದ ರಾಣಿ ಎಲಿಜಬೆತ್ ಆಸ್ಥಾನಕ್ಕೆ ಹಾರಿಯುವ ಈ ಕಲಾ ಜೋಡಿಗೆ ಯಶಸ್ಸು ಸಿಗಲಿ ಎಂದು ಒನ್ ಇಂಡಿಯಾ ಕನ್ನಡ ಹಾರೈಸುತ್ತದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications