ಮೈಸೂರಿನಿಂದ ಕ್ವೀನ್ ಎಲಿಜಬೆತ್ ಆಸ್ಥಾನಕ್ಕೆ ರಘು

ಮೇ.13ರಂದು ನಡೆಯಲಿರುವ ಕ್ವೀನ್ ಎಲಿಜಬೆತ್ II ಅವರ Diamond Jubilee Pageant ನಲ್ಲಿ ಹಾಡಲಿರುವ ಏಕೈಕ ಭಾರತೀಯ ಸಂಗೀತಗಾರ ಎಂಬ ಹಿರಿಮೆಗೆ ರಘು ಪಾತ್ರರಾಗಿದ್ದಾರೆ.
ರಘು ದೀಕ್ಷಿತ್ ತಮ್ಮ ಸಂಗೀತದ ಮೂಲಕ ಹಾಗೂ ಪತ್ನಿ ಮಯೂರಿ ಉಪಾಧ್ಯಾಯ ಅವರ ಸಮಕಾಲೀನ ನೃತ್ಯದ ಮೂಲಕ ರಾಣಿ ಎಲಿಜಬೆತ್ ರನ್ನು ರಂಜಿಸಲು ಸಿದ್ಧರಾಗಿದ್ದಾರೆ. 'Mysore Se Aayi..' ಎನ್ನುತ್ತಾ ರಘು ಹಾಡಿ ಕುಣಿಯಲಿದ್ದಾರೆ.
'ಲಕ್ಷದಲ್ಲಿ ಒಬ್ಬರಿಗೆ ಸಿಗಬಹುದಾದ ಅವಕಾಶ ಇದು. ಯುಕೆ ನನಗೆ ಹೊಸದೇನಲ್ಲ. ಆದರೆ, ಈ ಅವಕಾಶ ತುಂಬಾ ವಿಶೇಷ' ಎಂದು ರಘು ಹೇಳುತ್ತಾರೆ.
ಒಂದು ಗಂಟೆಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 700 ಮಂದಿಯ ಆರ್ಕೆಸ್ಟ್ರಾದೊಂದಿಗೆ ರಘು ರಸಸಂಜೆ ಜೊತೆಗೆ 550 ಕುದುರೆಗಳ ವಿಶೇಷ ನಡಿಗೆ. ನೃತ್ಯ ಪ್ರದರ್ಶನವಿರುತ್ತದೆ. ವಿಶ್ವದೆಲ್ಲೆಡೆಯಿಂದ ಬಂದಿರುವ ಕಲಾವಿದರು ರಾಣಿ ಎಲಿಜಬೆತ್ ಮನ ಸಂತೋಷಪಡಿಸಲಿದ್ದಾರೆ.
ರಘು ದೀಕ್ಷಿತ್ ಅವರಿಗೆ 3-5 ನಿಮಿಷಗಳ ಕಾಲ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಲಭ್ಯವಾಗಲಿದೆ. ಆಫ್ರಿಕಾ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಇನ್ನಿತರ ದೇಶದ ಕಲಾವಿದರೊಂದಿಗೆ ರಘು ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪತ್ನಿ ಮಯೂರಿ ಜೊತೆ ಪ್ರಥಮ ಬಾರಿಗೆ ಪ್ರದರ್ಶನ ನೀಡುತ್ತಿರುವುದು ರಘು ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.
12 ಮಂದಿ ನರ್ತಕಿಯರ ತಂಡದೊಂದಿಗೆ ಬಾಲಿವುಡ್ ಗೀತೆಯೊಂದಕ್ಕೆ ನರ್ತಿಸಲು ಚಿಂತಿಸಿದ್ದ ಮಯೂರಿ ನಂತರ ಮನಸ್ಸು ಬದಲಾಯಿಸಿದ್ದಾರೆ. ನಮ್ಮ ಸಂಸ್ಕೃತಿ ಬಿಂಬಿಸುವ ದೇಸಿ ಗೀತೆಯ ನಾದಕ್ಕೆ ಮಯೂರಿ ತಂಡ ಕುಣಿಯಲಿದೆ. ಮೈಸೂರಿನಿಂದ ರಾಣಿ ಎಲಿಜಬೆತ್ ಆಸ್ಥಾನಕ್ಕೆ ಹಾರಿಯುವ ಈ ಕಲಾ ಜೋಡಿಗೆ ಯಶಸ್ಸು ಸಿಗಲಿ ಎಂದು ಒನ್ ಇಂಡಿಯಾ ಕನ್ನಡ ಹಾರೈಸುತ್ತದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications