ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ (ಭಾಗ 4)

ಜಯತೀರ್ಥ : ಟಿ ವಿ ಮಾಧ್ಯಮ ಒಂದು ಪ್ರಬಲ ಮಾಧ್ಯಮ. ಅನೇಕ ಹಿರಿಯ ಕಲಾವಿದರು ತಮ್ಮ ಪ್ರಭಾವವನ್ನು ಉಪಯೋಗಿಸಿ ಒಂದು ಪ್ರತ್ಯೇಕ ಟಿ.ವಿ. ಚಾನೆಲ್ ಅನ್ನು ಆರಂಭಿಸಿ ಶಾಸ್ತ್ರೀಯ ಗಾಯನಕ್ಕೆ ಮತ್ತು ಗಾಯಕರಿಗೆ ಒಂದು ಮಂಚವನ್ನೊದಗಿಸಬೇಕು. ಟಿ.ವಿ. ಮಾಧ್ಯಮಗಳು ಸಿನೇಮಾ ಸಂಗೀತ ಹಾಡುವವರಿಗೇ ಆಗಲಿ ಅಥವಾ "ರಿಯಾಲಿಟಿ ಶೋ"ಗಳಲ್ಲಿ ಭಾಗವಹಿಸುವವರಿಗೆ ಆಗಲಿ ಕೊಡುವ ಪ್ರೋತ್ಸಾಹ ಮತ್ತು ಮನ್ನಣೆಯನ್ನು ಶಾಸ್ತ್ರೀಯ ಸಂಗೀತಗಾರರಿಗೆ ಏಕೆ ಕೊಡುತ್ತಿಲ್ಲ? ಅವರಿಗೂ ತಕ್ಕ ಮನ್ನಣೆ ಸಿಗಲಿ ಎಂದು ನನ್ನ ಆಶಯ. ಶಾಸ್ತ್ರೀಯ ಸಂಗೀತಗಾರರಿಗೆ ಒಳ್ಳೆಯ ಮನ್ನಣೆ ದೊರಕತೊಡಗಿದರೆ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮಂಚವೊದಗತೊಡಗಿದರೆ, ಅನೇಕರು ಮುಂದೆ ಬಂದು ಕಲಿಯಲಾರಂಭಿಸುತ್ತಾರೆ. ಇದರಿಂದ ನಮ್ಮ ಸಂಗೀತದ ಭವಿಷ್ಯ ಉಜ್ವಲವಾಗುತ್ತದೆ. ಇಲ್ಲದಿದ್ದರೆ ರಿಯಾಲಿಟಿ ಶೋಗಳ ಗ್ಲಾಮರ್ನಿಂದಾಗಿ ಒಳ್ಳೆಯ ಪ್ರತಿಭಾವಂತರೂ ಕೂಡ ಸಿನೆಮಾ ಮತ್ತು ಲಘು ಗಾಯನದತ್ತಲೇ ಒಲಿಯುತ್ತಾರೆ. ಇದರಿಂದ ಶಾಸ್ತ್ರೀಯ ಗಾಯನಕ್ಕೆ ತುಂಬಾ ನಷ್ಟವಾಗುತ್ತದೆ.
ಪ್ರಶ್ನೆ : (ಈ ಪ್ರಶ್ನೆ ಹಾರ್ಮೋನಿಯಂ ಸಾಥೀದಾರ ಮತ್ತು ಮಂಗಳೂರಿನ ಪ್ರಸಿದ್ಧ ಎಕ್ಸ್ಪರ್ಟ್ ವಿದ್ಯಾ ಸಂಸ್ಥೆಯ ಶ್ರೀ ನರೇಂದ್ರ ನಾಯಕರಿಗೆ), ನರೇಂದ್ರರೇ, ದೊಡ್ಡ ವಿದ್ಯಾ ಸಂಸ್ಥೆಯೊಂದನ್ನು ನಡೆಸುತ್ತಿರುವ ನೀವು ಈ ಬಗ್ಗೆ ಏನು ಹೇಳುತ್ತೀರಿ?
ನರೇಂದ್ರ : ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಸಂಗೀತದ ಆಸಕ್ತಿ ಉಂಟು ಮಾಡಲು ಮೊದಲ ಮತ್ತು ಅತೀ ಮುಖ್ಯ ಪ್ರಯತ್ನ ತಂದೆ ತಾಯಿಯರಿಂದಲೇ ಶುರುವಾಗಬೇಕು. ಮಕ್ಕಳು ಸ್ವಲ್ಪ ಮಟ್ಟಿನ ವಿರೋಧ ವ್ಯಕ್ತ ಮಾಡಿದಾಗ ನಾವು ಅವರ ತಂಟೆಗೇ ಹೋಗುವದನ್ನು ಬಿಟ್ಟು ಬಿಡುತ್ತೇವೆ. ಇದರಿಂದ ದೊಡ್ಡ ನಷ್ಟ ನಮಗೇ ಅಲ್ಲವೇ? ಮಕ್ಕಳಿಗೆ ತಿಳಿ ಹೇಳಿ, ನಮ್ಮ ಸಂಗೀತದ ಮಹತ್ವವನ್ನು ತಿಳಿಸಿದರೆ ಕ್ರಮೇಣ ಅವರು ಕಲಿಯುತ್ತಾರೆ ಮತ್ತು ಅವರಲ್ಲಿ ಅಭಿರುಚಿ ತಂತಾನೆ ಬೆಳೆಯುತ್ತದೆ.
ಪ್ರಶ್ನೆ: ಕೊನೆಯದಾಗಿ ನೀವು ಸಂಗೀತದಲ್ಲಿ ಏನಾದರೂ ಹೊಸ ಪ್ರಯೋಗ ಮಾಡುತ್ತಿದ್ದೀರಾ?
ಜಯತೀರ್ಥ : ಹಿಂದಿನಂತೆ ಈಗಿನ ಜನಗಳಲ್ಲಿ ಗಂಟೆಗಟ್ಟಲೇ ಕುಳಿತು ಶಾಸ್ತ್ರೀಯ ಸಂಗೀತ ಕೇಳುವ ಹವ್ಯಾಸ ಕಡಿಮೆಯಾಗುತ್ತಿದೆ. ಆದುದರಿಂದ ನಾನು 30-40 ನಿಮಿಷಗಳ ಅವಧಿಯಲ್ಲಿ ನಮ್ಮ ಮೂಲ ಸಂಪ್ರದಾಯವನ್ನು ಬಿಡದೇ ರಾಗದ ಶ್ರೀಮಂತಿಕೆಯನ್ನು ಎತ್ತಿ ತೋರಿಸಲು ಸಾಧ್ಯವಾಗುವ ಹಾಗೆ ಸಂಯೋಜನೆ ಮಾಡಲು ಪ್ರಯತ್ನಿಸುದ್ದೇನೆ. ಇದರಿಂದ ಶಾಸ್ತ್ರೀಯ ಸಂಗೀತದ ಕಡೆಗೆ ಜನರು ಆಕರ್ಷಿತರಾಗಬಹುದು ಎಂದು ನನಗೆ ಅನಿಸುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications