ಚಳಿಗಾಲದಲ್ಲಿ ಏರ್ಟೆಲ್ಗೆ ಹಿಡಿದ ವೈರಲ್ ಜ್ವರ (ಭಾಗ 5)

ಮಧ್ಯಾಹ್ನ ಅಧಿಕಾರಿಣಿಯಿಂದ ಕರೆ "ಸಾರ್ ಸಮಸ್ಯೆ ಇನ್ನು ಸರಿಯಾಗಿಲ್ಲ ನಾನು technical team ಜೊತೆ ಮಾತನಾಡುತ್ತಿದ್ದೇನೆ ಮತ್ತೆ ತಿಳಿಯಪಡಿಸುತ್ತೇನೆ".. ಸದ್ಯ ಅಂತೂ ಜವಾಬ್ದಾರಿಯಿಂದ ಕರೆಮಾಡಿದಳಲ್ಲ ಅಂತ ಸಂತೈಸಿಕೊಂಡ ನಾನು "ಸಂಜೆಯೊಳಗೆ ಸರಿಹೋಗಿಲ್ಲವಾದಲ್ಲಿ ಏನು?" ಎಂದೆ... "ಸಾರ್ ಒಂದು ವೇಳೆ ಸರಿಯಾಗದಿದ್ದಲ್ಲಿ, ನಿಮ್ಮ SIM ಬದಲಿಸಿ, ನಿಮ್ಮ ಹಣವನ್ನು ವರ್ಗಾಯಿಸಿಕೊಡುತ್ತೇನೆ" ಎಂಬುತ್ತರ ಬಂತು. ಇದೇ ಅಧಿಕಾರಿಣಿ ಬೆಳಗ್ಗೆ ಇದು ಸಾಧ್ಯವಿಲ್ಲವೆಂದು ಹೇಳಿದ್ದಳು. ಯಾವುದು ಸರಿಯೋ ಯಾವುದು ತಪ್ಪೋ ನನಗಂತೂ ತಿಳಿಯದು. 7ನೇ ದಿನ ಬೆಳಗ್ಗೆ Antibiotic ಕೃಪೆಯಿಂದ ನನ್ನ ಮಗನಿಗೆ ಜ್ವರ ಸಂಪೂರ್ಣ ವಾಸಿಯಾಗಿತ್ತು. ಸಿಮ್ಕಾರ್ಡ್ ಸರಿಯಾಗದಿದ್ದರೂ ಪರವಾಗಿಲ್ಲ ಸದ್ಯ ಇವನಿಗೆ ಜ್ವರ ಬಿಟ್ಟಿತ್ತಲ್ಲ ಅಂತ ಸಮಾಧಾನ.
3 ದಿನದ ಹಿಂದೆ ಕಳುಹಿಸಿದ ಇ-ಮೈಲ್ಗೆ ಉತ್ತರವಾಗಿ Nodel officer team ದೆಹಲಿಯಿಂದ ಕರೆ... "Sir we understand that you still have the problem reported, we are working on it and will fix it soon” ಅಂದರು. ಅವರ ಕರೆ ಬಂದ 15 ನಿಮಷಕ್ಕೆ ನನ್ನ ನಂಬರ್ ಸರಿಯಾಯಿತು. ಎಲ್ಲರಿಂದಲೂ ಕರೆ ಬರಲು ಶುರುವಾಯಿತು. ಸಿಮ್-ಸಮಸ್ಯೆ ಸರಿಯಾದನಂತರ ಪ್ರತಿ 10 ನಿಮಿಷಕ್ಕೆಕೊಮ್ಮೆ ಏರ್ ಟೆಲ್ ನಿಂದ ಕಾಲ್, "ಸಾರ್ ನಾವು ಏರ್ ಟೆಲ್ ನಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಸಿಮ್ಕಾರ್ಡ್ ಈಗ ಸರಿ ಇದೆಯೇ?” "ಧನ್ಯವಾದಗಳು ಸರಿಯಾಗಿದೆಯಪ್ಪ".
ಅಂತೂ ಏರ್ ಟೆಲ್ ಸಿಮ್ಕಾರ್ಡ್ ಸಮಸ್ಯೆ ಚಳಿ, ಜ್ವರದಂತೆ ನಮ್ಮನ್ನು ಒಂದುವಾರ ಬಿಜಿಯಾಗಿ ಇಟ್ಟಿತ್ತು... ಆಗ ಗೊತ್ತಾಯ್ತು. ಸಾಮಾನ್ಯವಾದ ಮಾತ್ರೆ ಅಥವಾ ಮಾತ್ರೆಯಿಂದ ವೈರಲ್ ಸರಿಹೋಗೊಲ್ಲ antibioticಕೇ ಬೇಕು ಅಂತ...ಆದರೆ ನಾನು ಏರ್ ಟೆಲ್ಗೆ ಯಾವಾಗ, ಯಾವ antibiotic ಕೊಟ್ಟೆ, ಯಾವುದು ಕೆಲಸ ಮಾಡಿತು ಅಂತ ನನಗೆ ಇನ್ನೂ ಅರ್ಥವಾಗಿಲ್ಲ. ನಾನು ಚಿಕ್ಕವನಾಗಿದ್ದಾಗ ನಮ್ಮಮ್ಮ ಹೇಳುತ್ತಿದ್ದರು – ಚಳಿ, ಜ್ವರ ಬಂದಾಗ ಮನೆ ಮದ್ದು ಕೊಟ್ಟರೆ ಏಳು ದಿನದಲ್ಲಿ ವಾಸಿಯಾಗುತ್ತದೆ, ವೈದ್ಯರ ಹತ್ತಿರ ಹೋದರೆ ಗುಣವಾಗಲು ಒಂದು ವಾರ ಬೇಕು ಅಂತ. ಎಷ್ಟು ನಿಜ ಅಲ್ಲವೇ?
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications