ಸಿಂಗಪುರ ಬೆಳಗಿದ ಮಂಗಳೂರಿನ ಓಷನ್ ಕಿಡ್ಸ್

ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದ ವಿವಿಧ ದೂರದರ್ಶನದ ಪ್ರತಿಭಾ ಪ್ರದರ್ಶನಗಳಲ್ಲಿ ಮತ್ತು ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡು, ವಿಜೇತರಾಗಿರುವ ಯುವ ನೃತ್ಯಪಟುಗಳು ಅವರ ವರ್ಚಸ್ಸು ಮತ್ತು ನೃತ್ಯದಲ್ಲಿನ ಶ್ರದ್ದೆಯನ್ನು ತೋರಿ ನೆರೆದಿದ್ದಂತಹ ಸಭಿಕರನ್ನು ಮನರಂಜಿಸಿದರು. ಮೊಟ್ಟ ಮೊದಲ ಸಲ ಈ ತರಹದ ಅಮೋಘ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಕನ್ನಡ ಸಂಘದ ಪ್ರಯತ್ನವನ್ನು ನೆರೆದಿದ್ದ ಗಣ್ಯರು, ಮುಖ್ಯ ಅತಿಥಿಗಳು ಮತ್ತು ಸಭಿಕರು ಶ್ಲಾಘಿಸಿದರು.
ಭರತನಾಟ್ಯ, ಯಕ್ಷಗಾನ ಮತ್ತು ಇತರ ನೃತ್ಯಗಳ ಸಂಯುಕ್ತ ಸಂಗಮದಲ್ಲಿ "ಗಣೇಶ ಸ್ತುತಿ"ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಸಂಘ(ಸಿಂಗಪುರ)ದ ಅಧ್ಯಕ್ಷರಾದ ಡಾ. ವಿಜಯ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಗಣ್ಯರಿಗೆ ಮತ್ತು ಸಭಿಕರಿಗೆ ಸ್ವಾಗತ ಕೋರಿದರು. OCEAN KIDSನ್ನು ಸಂಪರ್ಕಿಸಿದ ರೀತಿ ಮತ್ತು ಅವರನ್ನು ಸಿಂಗಪುರಕ್ಕೆ ಕರೆತಂದು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕನ್ನಡ ಸಂಘದ ಸದುದ್ಧೇಶದ ಆಶಯವನ್ನು ತಿಳಿಸಿಕೊಟ್ಟು ನೃತ್ಯತಂಡದ ಕಿರುಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಬೆಂಗಳೂರಿನನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ, ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದು ಸಹ ಕಷ್ಟವಾಗುತ್ತಿದೆ, ಇತರೆ ಬಾಷಾ ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡವನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ಖೇದದಿಂದ ನುಡಿದರು. ಹೊರನಾಡಿನಲ್ಲಿ ಕನ್ನಡವನ್ನು ಬೆಳೆಸುತ್ತಿರುವ ಸಂಘದ ಶ್ರಮವನ್ನು ಶ್ಲಾಘಿಸುತ್ತಾ, ಸಿಂಗಪುರ ಕನ್ನಡ ಸಂಘದ ಸಕ್ರೀಯ ಕಾರ್ಯವೈಖರಿ ಬಗ್ಗೆ ಆಸ್ಟ್ರೇಲಿಯಾದ ಕನ್ನಡ ಕೂಟದಿಂದ ತಿಳಿದುಕೊಂಡಿದ್ದನ್ನು ಜ್ಞಾಪಿಸಿಕೊಂಡರು.
ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ್ ಬೇಗೂರ್ ಅವರ ವೇದಿಕೆ ನಿರ್ವಹಣೆ, ಸುಧೀಂದ್ರ ಮತ್ತು ಸ್ನೇಹಿತರ "ಧ್ವನಿ ಮತ್ತು ದೀಪದ ಹತೋಟಿ"ಯಲ್ಲಿನ ನಿರ್ದೇಶನದಲ್ಲಿ ಸರಾಗವಾಗಿ ನಡೆದ ಕಾರ್ಯಕ್ರಮ ಸಭಿಕರ ಮನಗೆದ್ದಿತು. OCEAN KIDSನ ವೈವಿಧ್ಯಮಯ ನೃತ್ಯ ಪ್ರಯೋಗಗಳಡಿಯಲ್ಲಿ, "ನವದುರ್ಗ, ದಶಾವತಾರ, ರಾಮಾಯಣ, ಶಿವತಾಂಡವ ಮತ್ತು ವಿಷ್ಣು ತಾಂಡವ" ಗಳಂತಹ ಪೌರಾಣಿಕ ಪ್ರಸಂಗಗಳನ್ನು ಆಯ್ದಂತಹ ನೃತ್ಯ ಅದ್ಭುತವಾಗಿತ್ತು. ಇತ್ತೀಚಿನ ಚಲನಚಿತ್ರಗಳ ಹಾಡುಗಳ ಸಮ್ಮಿಶ್ರಣದಲ್ಲಿ "ಜೋಗಿ ಚಿತ್ರದ ಎಲ್ಲೊ ಜೋಗಪ್ಪ, ನ ಧೀಂ ಧೀಂತನ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಪಂಕಜದಂತಹ ಹಾಡುಗಳಿಗೆ ಅಮೋಘವಾಗಿ ಕುಣಿದು ನೃತ್ಯ ಪ್ರದರ್ಶನ ಮಾಡಿದಾಗ ಸಭಿಕರು ಚಪ್ಪಾಳೆ ಮತ್ತು ಸಿಳ್ಳುಗಳೊಂದಿಗೆ ಪ್ರಶಂಸಿಸಿದರು. [ಸಿಂಗಾರ ಪ್ರಶಸ್ತಿ ವಿತರಣೆ]
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications