ಕನ್ನಡನಾಡಿನ ಚಿನ್ನದ ರಾಜ - ಅಮೋಘವರ್ಷ ನೃಪತುಂಗ

ಅಮೋಘವರ್ಷ ನೃಪತುಂಗ! - ಈ ಹೆಸರಿನಲ್ಲಿಯೇ ಕನ್ನಡಿಗರ ಮೈನವಿರೇಳಿಸುವ ದಿವ್ಯ ಶಕ್ತಿಯಿದೆ! ಕನ್ನಡಿಗರ ಸಾಹಸ, ಸಾಮರ್ಥ್ಯ, ಸಹನೆ, ಸೌಹಾರ್ದ, ಸಂಸ್ಕೃತಿಗೆ ಸಂಕೇತವಾಗಿ ನಿಲ್ಲುತ್ತದೆ ಈ ಧೀರ ದೊರೆಯ ಸುಂದರ ಹೆಸರು! ಈತನ ಕನ್ನಡ ಪ್ರೇಮ ಅಪಾರ. ತರಾಸು ಅವರು ಚಿತ್ರದುರ್ಗದ ಇತಿಹಾಸವನ್ನು ತಮ್ಮ ಕಾದಂಬರಿಗಳಿಂದ ಕಣ್ಣೆದುರು ನಿಲ್ಲಿಸಿದಂತೆ, ಕನ್ನಡ ಮಣ್ಣಿನ ಹೆಮ್ಮೆಯ ಮಗನಾದ "ಅಮೋಘವರ್ಷ" ಬಾಳಿಬದುಕಿದ ಬಗೆಯನ್ನು ಯಾರಾದರೂ ಕಾದಂಬರಿಯಾಗಿಸಿದ್ದಾರೆಯೇ ಎಂದು ಕುತೂಹಲದಿಂದ ಅರಸುತ್ತಿದ್ದ ನನ್ನ ಪ್ರಯತ್ನಕ್ಕೆ ಈವರೆಗೆ ಫಲ ದೊರಕಿರಲಿಲ್ಲ. ಈ ಕುರಿತು ಯಾವುದಾದರೂ ಕಾದಂಬರಿ ಈ ಹಿಂದೆ ಬಂದಿದೆಯೇ ಇಲ್ಲವೋ ತಿಳಿಯದು. ಆದರೆ, ಹಲವಾರು ಉತ್ತಮ ನಾಟಕಗಳನ್ನು ನಿರ್ದೇಶಿಸಿ, 'ಕರ್ನಾಟಕದ ರಾಜಮನೆತನಗಳು" ಎನ್ನುವ ಲೇಖನಮಾಲೆಯನ್ನು ವಿದ್ಯಾರಣ್ಯ ಕನ್ನಡಕೂಟದ 'ಸಂಗಮ" ಪತ್ರಿಕೆಯಲ್ಲಿ ಪ್ರಕಟಿಸಿ, ಶಿಕಾಗೊ ಕನ್ನಡಿಗರೆಲ್ಲರಿಗೂ ಚಿರಪರಿಚಿತರಾಗಿರುವ ಪ್ರಕಾಶ್ ಹೇಮಾವತಿಯವರು ಆ ಬಗ್ಗೆ ಕಾದಂಬರಿಯೊಂದನ್ನು ಹೊರತರುವ ಪ್ರಯತ್ನದಲ್ಲಿದ್ದಾರೆಂದು ತಿಳಿದಾಗ ಬಹಳ ಸಂತೋಷವಾಗಿತ್ತು. ಇದೀಗ ಪ್ರಕಾಶ್ ಹೇಮಾವತಿಯವರ ಬಹುವರ್ಷಗಳ ಅಧ್ಯಯನ, ಆಶಯಗಳ ಫಲವೇ 'ಅಮೋಘವರ್ಷ" ಕಾದಂಬರಿಯ ರೂಪದಲ್ಲಿ ಹೊರಬಂದಿದೆ. ಐಬಿಎಚ್ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
ರಾಷ್ಟ್ರಕೂಟ ಅರಸನಾದ ಮೂರನೆಯ ಗೋವಿಂದನ ಮರಣದೊಂದಿಗೆ ಪ್ರಾರಂಭವಾಗುವ ಕಾದಂಬರಿ, ನಂತರ ಹಂತಹಂತವಾಗಿ ರಾಜ್ಯದಲ್ಲೇಳುವ ಬಂಡಾಯ, ಹದಿನಾಲ್ಕು ವರ್ಷದ ಬಾಲಕ ಅಮೋಘವರ್ಷನಿಗೆ ಅನಿವಾರ್ಯವಾಗುವ ಪಟ್ಟಾಭಿಷೇಕ, ರಾಜ್ಯಾಡಳಿತ, ರಾಜ್ಯವನ್ನು ಬಲಪಡಿಸಲು ನಡೆಯುವ ಕಾಳಗ, ಯುವರಾಜನ ವಿವಾಹ.... ಹೀಗೆ ಹಂತಹಂತವಾಗಿ ನೃಪತುಂಗ ದೊರೆಯ ಧೀರೋದಾತ್ತ ವ್ಯಕ್ತಿತ್ವವನ್ನು ನಮ್ಮ ಕಣ್ಣುಗಳೆದುರು ಕಟೆಯುತ್ತಾ ಹೋಗುತ್ತದೆ. ಪ್ರತಿ ಅಧ್ಯಾಯಕ್ಕೂ ಸೂಕ್ತ ಹೆಸರು ನೀಡಿ ಮಾಡಿರುವ ವಿಂಗಡಣೆ ನಮ್ಮ ಓದನ್ನು ಸುಗಮಗೊಳಿಸುತ್ತದೆ. ಕಾಲದ ಕರಿತೆರೆಯಲ್ಲಿ ಮುಚ್ಚಿಹೋಗಿರುವ ಇತಿಹಾಸವನ್ನು ಕಾಗದಕ್ಕಿಳಿಸುವುದು ಬಹಳ ಕಷ್ಟದ ಕೆಲಸ. ಎಂದೋ ನಡೆದ ಘಟನೆಗಳನ್ನು ಕಲ್ಪನೆಯ ಎಳೆಯಲ್ಲಿ ಸೇರಿಸಿ, ಹೆಣೆಯಬೇಕಾಗುತ್ತದೆ. ಸಿಕ್ಕಿಲ್ಲದ, ತೊಡರಿಲ್ಲದ ಸುಸೂತ್ರ ಓದನ್ನು ಓದುಗರಿಗೆ ಒದಗಿಸುವ ಚಾತುರ್ಯ ಲೇಖಕನಿಗೆ ಇರಬೇಕಾಗುತ್ತದೆ. ಕೆಲವೊಮ್ಮೆ ಕಲ್ಪನೆಗಳ ಬಣ್ಣವೇ ಹೆಚ್ಚಾಗಿ ಸೇರಿ ನೈಜ ಚಿತ್ರವೇ ಮಸುಕಾಗುವ ಸಾಧ್ಯತೆಗಳಿರುತ್ತವೆ. ಆದರೆ ಈ ಕಾದಂಬರಿಯಲ್ಲಿ ಕಲ್ಪನೆಗಿಂತ ಇತಿಹಾಸಕ್ಕೆ ಒತ್ತುಕೊಟ್ಟಿರುವುದನ್ನು ಗಮನಿಸಬಹುದು. [ಓದಲೇಬೇಕಾದ ಕಾದಂಬರಿ...]
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications