ಅಮೆರಿಕ ಬಾನುಲಿಯಲ್ಲಿ ಭೀಮಸೇನ ಜೋಷಿಗೆ ಶ್ರದ್ಧಾಂಜಲಿ

ಮಾಂತ್ರಿಕ ಸ್ವರದಿಂದ ಜಗತ್ತಿನ ಉದ್ದಗಲಕ್ಕೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಭೀಮಸೇನ ಜೋಶಿ ಅವರ ಜೀವನ, ಸಂಗೀತ ಸಾಧನೆ ಕುರಿತ ಈ ಬಾನುಲಿ ಕಾರ್ಯಕ್ರಮವನ್ನು ಕೇಳುವ ಸುಯೋಗ ವಿಶ್ವಕನ್ನಡಿಗರಿಗೆ ಲಭಿಸಲಿದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ : 2011 ಜನವರಿ 26 ಬುಧವಾರ
ಸಮಯ : (ಕ್ಯಾಲಿಫೋರ್ನಿಯ ಸಮಯ)
ಬೆಳಗ್ಗೆ 6.00 AM PST - 7.30 AM PST – ಭೀಮಸೇನ ಜೋಷಿ ಅವರ ಗಾಯನವೂ ಒಳಗೊಂಡ ಶಾಸ್ತ್ರೀಯ ಸಂಗೀತ.
7.15 AM PST – 7.25 AM PST ಕನ್ನಡ ಕೂಟದ ಅಧ್ಯಕ್ಷರಾದ ಪದ್ಮ ರಾವ್ ಅವರ ಸಂದರ್ಶನ.
7.30 AM PST - 8.30 AM PST ನಚಿಕೇತ ಶರ್ಮ ಅವರು ನಡೆಸಿಕೊಡುವ "ಪಂಡಿತ್ ಭೀಮಸೇನ ಜೋಷಿ ನಮನ" (ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.)
ಬಾನುಲಿ ಕೇಂದ್ರ : ಸ್ಟಾನ್ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್ಫ್ರಾನ್ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com/Kannada.html (Listen live and to archives from anywhere in the world)
ನಿರ್ವಹಣೆ : ಮಧು ಕೃಷ್ಣಮೂರ್ತಿ
ಭಾರತೀಯ ಕಾಲಮಾನ : ಸಂಜೆ 9ರಿಂದ 10ರವರೆಗೆ.
ನಚಿಕೇತ ಶರ್ಮಾ ಬಗ್ಗೆ : ಮೂಲತಃ ಧಾರವಾಡದವರಾದ ನಚಿಕೇತ ಶರ್ಮಾ ಅವರು ಹಿಂದೂಸ್ತಾನಿ ಸಂಗೀತದ ಪ್ರಾಥಮಿಕ ಪಾಠವನ್ನು ತಮ್ಮ ಪಾಲಕರಿಂದ ಪಡೆದರು. ನಂತರ ಮದ್ರಾಸಿನಲ್ಲಿ ಬಿಎನ್ ಸಿಂಹ ಮತ್ತು ಬಿ ಹನುಮಂತಾಚಾರ್ ಅವರಲ್ಲಿ ಸಂಗೀತ ಸಾಧನೆಯನ್ನು ಮುಂದುವರಿಸಿದರು.
ಮುಂದೆ ಖ್ಯಾತ ಹಿಂದೂಸ್ತಾನಿ ಹಾಡುಗಾರ ಪಂಡಿತ ಬಸವರಾಜ ರಾಜಗುರು ಅವರ ಬಳಿ ತರಬೇತಿಯನ್ನು ಪಡೆದರು. ನಚಿಕೇತ ಅವರು ಭಾರತದ ಎಲ್ಲೆಡೆ ಮತ್ತು ಉತ್ತರ ಅಮೆರಿಕಾದಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಪ್ರಸ್ತುತ, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ರಾಜಗುರು ಸಂಗೀತ ವಿದ್ಯಾನಿಕೇತನ್ ನಲ್ಲಿ ಸಂಗೀತಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರು ಸಂಗೀತಾಂಜಲಿ ಸಂಗೀತ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications