ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ಕಣಿವೆಯ ಕವಿಗಳಿಗೆ ಮಾತ್ರ

By Shami
|
Google Oneindia Kannada News

Poetry contest for North California poets
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಕೆಕೆಎನ್ ಸಿ ಈ ವರ್ಷ ಕವನ ಸ್ಪರ್ಧೆ ಏರ್ಪಡಿಸಿದೆ. ಕೂಟದ ಸಾಹಿತ್ಯ ಸಂಚಿಕೆ 'ಸ್ನೇಹಸೇತು' ವತಿಯಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಕ್ಯಾಲಿಫೊರ್ನಿಯಾದಲ್ಲಿ ನೆಲೆಸಿರುವ ಕನ್ನಡ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಅತ್ಯುತ್ತಮ ಕವನಗಳಿಗೆ ಬಹುಮಾನ ನೀಡಲಾಗುವುದು, ಜತೆಗೆ 2010ರ ಸ್ವರ್ಣಸೇತು ಸಾಹಿತ್ಯ ಸಂಚಿಕೆಯಲ್ಲಿ ಬಹುಮಾನಿತ ಕವನಗಳನ್ನು ಪ್ರಕಟಿಸಲಾಗುತ್ತದೆ.

ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳ ಹೆಸರುಗಳನ್ನು ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು.

ಸ್ಪರ್ಧೆಯ ನಿಬಂಧನೆಗಳು:

* ಕವನಗಳು ಕನ್ನಡದಲ್ಲಿರಬೇಕು ಮತ್ತು ಒಂದು ಪುಟ ಮೀರಬಾರದು.
* ಕವನ ಸ್ವಂತದ್ದಾಗಿದ್ದು ಬೇರೆಲ್ಲೂ ಪ್ರಕಟವಾಗಿರಬಾರದು ಮತ್ತು ಅನುವಾದಿತ ಕವನಗಳಿಗೆ ಅವಕಾಶವಿಲ್ಲ.
* ಕವನಗಳು ಬರಹ ಅಥವಾ MS Wordನಲ್ಲಿರಬೇಕು.ಹಸ್ತಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ.
* ಕೆಕೆಎನ್ ಸಿ ಸದಸ್ಯರು ಮತ್ತು ಅವರ ಪರಿವಾರದವರಿಗಷ್ಟೇ ಅಲ್ಲದೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಎಲ್ಲಾ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.

* ಸ್ಪರ್ಧೆಯ ಕವನಗಳಲ್ಲಿ ಯಾವ ಕವನವನ್ನಾದರು 2010ರ ಸ್ವರ್ಣಸೇತುವಿನಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದಿರುವ ತೀರ್ಮಾನ ಸಂಪಾದಕ ಸಮಿತಿಯದು.

* ಕವನಗಳನ್ನು ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯ ಜೊತೆ ಈ ವಿಳಾಸಕ್ಕೆ ಕಳುಹಿಸಿ:
[email protected]

* ಕವನಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 20 ಮಾರ್ಚ್ 2010.
* ಸ್ಪರ್ಧೆಗೆ ಬಂದ ಕವನಗಳನ್ನು ಒಂದು ವರ್ಷ ಬೇರೆಲ್ಲೂ ದಯವಿಟ್ಟು ಪ್ರಕಟಿಸಬೇಡಿ.
* ಒಬ್ಬ ಸ್ಪರ್ಧಿಗೆ ಒಂದು ಪ್ರವೇಶ ಮಾತ್ರ.
* ತೀರ್ಪುಗಾರರ ನಿರ್ಧಾರವೇ ಅಂತಿಮ.


ಸಂಪಾದಕ ಸಮಿತಿ
ಸ್ವರ್ಣಸೇತು 2010

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X