Get Updates
Get notified of breaking news, exclusive insights, and must-see stories!

ಬೇ ಏರಿಯಾ, ಸಾಮರಸ್ಯಕ್ಕೆ ಒಂದು ಸಲಹೆ

Alamelu Iyengar
ಕ್ಯಾಲಿಫೋರ್ನಿಯಾ, ಜ.29 : ಕನ್ನಡ ಭಾಷೆ, ಸಂಗೀತ ನಾಟಕ ಮುಂತಾದ ಲಲಿತಕಲೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮೇಲಿಂದಮೇಲೆ ಹಮ್ಮಿಕೊಳ್ಳುವ ಅಮೆರಿಕಾದ ಕನ್ನಡ ಸಂಘಗಳಲ್ಲಿ ಉತ್ತರ ಕ್ಯಾಲಿಫೋರ್ನಿಯದ ಕನ್ನಡ ಕೂಟ ಕೆಕೆಎನ್ ಸಿ ಒಂದು. ಪ್ರಸಕ್ತ ಸಾಲಿನ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ 'ಸ್ನೇಹ ಸಪ್ತಮಿ'. ಈ ಸಪ್ತಮಿಗೆ ಬೇ ಏರಿಯ ಕನ್ನಡಿಗರು ಸಜ್ಜಾಗುತ್ತಿದ್ದಾರೆ.

ಫೆಬ್ರವರಿ 20ರಂದು ನಡೆಯಲಿರುವ ಈ ಸಮಾರಂಭದ ಪ್ರಮುಖ ಆಕರ್ಷಣೆ 'ಗೋಕುಲ ನಿರ್ಗಮನ' ಖ್ಯಾತಿಯ ಅಲಮೇಲು ಅಯ್ಯಂಗಾರ್ ನಿರ್ದೇಶನದ ಸಾಮಾಜಿಕ ನಾಟಕ 'ಸಾಮರಸ್ಯಕ್ಕೆ ಒಂದು ಸಲಹೆ'. ಸ್ಥಳ : ಸನ್ನಿವೇಲ್ ಹಿಂದೂ ದೇವಾಲಯ.

ಅದರ ಮುಂದಿನವಾರ ಅಂದರೆ ಫೆ. 27ರ ಶನಿವಾರ ಪ್ರತಿ ವರ್ಷದಂತೆ ಪುರಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಲಿವರ್ ಮೋರ್ ಹಿಂದೂ ದೇವಾಲಯದಲ್ಲಿ ನಡೆಯಲಿದೆ. ಸಂಗೀತ ಕಾರ್ಯಕ್ರಮಗಳನ್ನು ನೀಡಬಯಸುವ ಆಸಕ್ತರು ತಮ್ಮ ಹೆಸರು, ಹಾಡು ಹಾಗೂ ಸಂಗೀತ ನಿರ್ದೇಶಕರ ಮಾಹಿತಿಯೊಂದಿಗೆ [email protected]ನಲ್ಲಿ ನೊಂದಾಯಿಸಿಕೊಳ್ಳಬೇಕೆಂದು ಕೆಕೆಎನ್ ಸಿ ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ. ಕಡೆಯ ದಿನಾಂಕ : ಫೆ. 10.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+