111920newjersyಬೃಂದಾವನದಲ್ಲಿ ಹಿರಿಯರನ್ನು ನಲಿದಾಡಿಸಿದ ಮಕ್ಕಳು/nri/article/2008/1231-rajyotsava-deepavali-childrens-day-brindavana.htmlಡಿಸೆಂಬರ್ 6ರಂದು ನಮ್ಮ ನ್ಯೂಜೆರ್ಸಿಯ ಬೃಂದಾವನದದಲ್ಲಿ ಮಕ್ಕಳ ದಿನಾಚರಣೆ, ದೀಪಾವಳಿ, ಕನ್ನಡ ರಾಜ್ಯೋತ್ಸವ ಎಲ್ಲಾ ಸೇರಿಸಿ ಒಂದು ಹಬ್ಬ ಆಚರಿಸಿದೆವು. ನಾಡಗೀತೆಯಾದ "ಜಯ ಭಾರತ ಜನನಿಯ ತನುಜಾತೆ" ಹಾಡಿಗೆ ದೃಶ್ಯ ಮಾಧ್ಯಮದ ಮೂಲಕ ತೆರೆಯ ಮೇಲೆ ಮೂಡಿ ಬಂದ ಕರ್ನಾಟಕದ ಕಲೆ, ನಿಸರ್ಗ ಸೌಂದರ್ಯ, ಸಿರಿ ಸಂಪತ್ತನ್ನು ಸವಿಯಿತ್ತ ನೆರೆದಿದ್ದ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಗೌರವ 33808http://kannada.oneindia.com/img/2008/12/31-brindavana-deepavali1.jpg111920newjersyಪೂರ್ವಕರಾವಳಿಯಲ್ಲಿ ಅಕ್ಕ ಸಮ್ಮೇಳನ-2010/nri/engagements/2009/0810-6th-akka-world-kannada-conference-newjersy.html* ಸತೀಶ್ ಹೊಸನಗರ, ನ್ಯೂಜೆರ್ಸಿನ್ಯೂಜರ್ಸಿ,(ಅಮೆರಿಕ)ಆ. 10 : ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ, ಅಕ್ಕ, ಆಯೋಜಿಸಿರುವ 6ನೇ ವಿಶ್ವ ಕನ್ನಡ ಸಮ್ಮೇಳನ ಅಮೆರಿಕಾದ ನ್ಯೂ ಜೆರ್ಸಿ ರಾಜ್ಯದಲ್ಲಿರುವ ಎಡಿಸನ್ ನಗರದಲ್ಲಿ ನಡೆಯಲಿದೆ. ಸಮ್ಮೇಳನದ ದಿನಾಂಕ ಸೆಪ್ಟೆಂಬರ್ 3ರಿಂದ 5, 2010. ಸ್ಥಳೀಯ "ಬೃಂದಾವನ" ಕನ್ನಡ ಕೂಟ ಹಾಗೂ ನೆರೆಯ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್‌ವೇನಿಯಾ ಹಾಗೂ ಕನೆಕ್ಟಿಕಟ್ 38532http://kannada.oneindia.com/img/2009/08/10-satish-hosanagara1.jpg111920newjersyಅಕ್ಕ ಸಮ್ಮೇಳನಕ್ಕೆ ಈಸಲ ಹೊಸದಿಕ್ಕು/nri/article/2009/0824-akka-conference-newjersy-community-friendly.htmlಬೆಂಗಳೂರು, ಆ. 24 : ವಿಶ್ವ ಕನ್ನಡ ಕೂಟಗಳ ಒಕ್ಕೂಟ ಸ್ಥಾಪನೆ, ಕರ್ನಾಟಕ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಅಮೆರಿಕಾ ವಿಶ್ವವಿದ್ಯಾನಿಲಯಗಳ ನಡುವೆ ಸ್ಟೂಡೆಂಟ್ ಎಕ್ಸ್ ಛೇಂಜ್ ಪ್ರೊಗ್ರಾಂ, ಸಾಗರೋತ್ತರ ಕನ್ನಡ ಕಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮೆರಿಕಾ ವಿದ್ಯಾರ್ಥಿಗಳ ಮೊದಲ ತಂಡಕ್ಕೆ ಪದವಿ ಪುರಸ್ಕಾರ, ಕರ್ನಾಟಕಕ್ಕೆ ಮರಳುವ ಅನಿವಾಸಿ ಕನ್ನಡಿಗರಿಗೆ ಅಕ್ಕ ಸಹಾಯ ಪೋರ್ಟಲ್...ಮುಂದಿನ ವರ್ಷ ಅಮೆರಿಕಾದ ನ್ಯೂಜರ್ಸಿಯಲ್ಲಿ 38801http://kannada.oneindia.com/img/2009/08/24-ravi-dankanikote2.jpg111920newjersyವೇವ್ಜ್ ಅಕಾಡೆಮಿಯಿಂದ ಉಚಿತ ಸಂಗೀತ ಶಿಬಿರ/nri/engagements/2009/0903-wavez-music-academy-workshop-newjersy.htmlನ್ಯೂಜೆರ್ಸಿ : ಸ್ಥಳೀಯ ವೇವ್ ಜ್ ಅಕಾಡೆಮಿ ವತಿಯಿಂದ ಸೆಪ್ಟೆಂಬರ್ 2, 3, 4ರಂದು ಉಚಿತ ಸುಗಮ ಸಂಗೀತ, ನಾಟ್ಯ, ವಾದ್ಯಗೋಷ್ಠಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಶನಿವಾರ ಸೆಪ್ಟೆಂಬರ್ 5ರಂದು ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಾಗು ವೇವ್ ಜ್ ಮ್ಯೂಸಿಕ್ ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ "ಸುಗಮ ಸಂಗೀತ ಸಂಜೆ" ಕಾರ್ಯಕ್ರಮವನ್ನೂ 38987http://kannada.oneindia.com/img/2009/09/03-vasantha-shashi3.jpg97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ಅಕ್ಕ ಸಮ್ಮೇಳನಕ್ಕೆ ಈಸಲ ಹೊಸದಿಕ್ಕು | Kannada community | AKKA conference | Bill Clinton | Brindavana NJ - ಅಕ್ಕ ಸಮ್ಮೇಳನಕ್ಕೆ ಈಸಲ ಹೊಸದಿಕ್ಕು - Kannada Oneindia

ಅಕ್ಕ ಸಮ್ಮೇಳನಕ್ಕೆ ಈಸಲ ಹೊಸದಿಕ್ಕು

Ravi Dankanikote, AKKA president
ಬೆಂಗಳೂರು, ಆ. 24 : ವಿಶ್ವ ಕನ್ನಡ ಕೂಟಗಳ ಒಕ್ಕೂಟ ಸ್ಥಾಪನೆ, ಕರ್ನಾಟಕ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಅಮೆರಿಕಾ ವಿಶ್ವವಿದ್ಯಾನಿಲಯಗಳ ನಡುವೆ ಸ್ಟೂಡೆಂಟ್ ಎಕ್ಸ್ ಛೇಂಜ್ ಪ್ರೊಗ್ರಾಂ, ಸಾಗರೋತ್ತರ ಕನ್ನಡ ಕಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮೆರಿಕಾ ವಿದ್ಯಾರ್ಥಿಗಳ ಮೊದಲ ತಂಡಕ್ಕೆ ಪದವಿ ಪುರಸ್ಕಾರ, ಕರ್ನಾಟಕಕ್ಕೆ ಮರಳುವ ಅನಿವಾಸಿ ಕನ್ನಡಿಗರಿಗೆ ಅಕ್ಕ ಸಹಾಯ ಪೋರ್ಟಲ್...

ಮುಂದಿನ ವರ್ಷ ಅಮೆರಿಕಾದ ನ್ಯೂಜರ್ಸಿಯಲ್ಲಿ ಆಯೋಜಿಸಲಾಗಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ವ್ಯವಸ್ಥಾಪಕರು ಕನ್ನಡಜನಕ್ಕಾಗಿ ಹಮ್ಮಿಕೊಳ್ಳಲಿರುವ, ಬದುಕಿಗೆ ಹತ್ತಿರವಾಗುವ ಕನಸುಗಳ ಹೈಲೈಟ್ ಗಳಿವು. ಅಕ್ಕ ಸಮ್ಮೇಳನವೆಂದರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ, ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭ, ಲಾಡು ಚಿರೋಟಿಯ ಪುಷ್ಕಳ ಊಟೋಪಚಾರ, ಹಾಡು ಮತ್ತು ಸಂಗೀತ ಎಂಬ ಜನಜನಿತ ಕಲ್ಪನೆಯನ್ನು ಧ್ವಂಸಮಾಡಿ ಕನ್ನಡ ಜನರಿಗೆ ಉಪಯೋಗವಾಗುವಂತಹ ಮಾಹಿತಿ, ಸಾಧನ, ಸಲಕರಣೆಗಳನ್ನು ಒದಗಿಸುವತ್ತಲೂ ಅಕ್ಕ ವಿಶೇಷ ಗಮನ ಹರಿಸಲಿದೆ ಎಂದು ಅಧ್ಯಕ್ಷ ರವಿ ಡಂಕನಿಕೋಟೆ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ರವಿ, ಸಮ್ಮೇಳನ ಮೈಗೂಡಿಸಿಕೊಳ್ಳಲು ಇಚ್ಛಿಸಿರುವ ಇತರೆ ಪ್ರಗತಿಪರ ಕಾರ್ಯಕ್ರಮಗಳನ್ನು ಬಿಚ್ಚಿಟ್ಟರು. ಅವುಗಳಲ್ಲಿ ಮುಖ್ಯವಾಗಿ ಅಮೆರಿಕಾ ಅನಿವಾಸಿ ಕನ್ನಡಿಗರ ವತಿಯಿಂದ 5000 ಶೀಶೆಯಷ್ಟು ರಕ್ತದಾನ ಚಳವಳಿ (ರೆಡ್ ಕ್ರಾಸ್ ಸಂಸ್ಥೆಗೆ) ಎಲ್ಲೋ ಕಳೆದುಹೋಗುತ್ತಿರುವ ನಮ್ಮಯುವ ಜನರನ್ನು ಕನ್ನಡದತ್ತ ಆಕರ್ಷಿಸಿಸುವ ಉದ್ದೇಶದಿಂದ ಅಕ್ಕ ಆಡಿಸುವ ಕ್ರಿಕೆಟ್ ಪ್ರೀಮಿಯರ್ ಲೀಗ್ (ACPL), ಹಸುರು ತಂತ್ರಜ್ಞಾನ, ಜೈವಿಕ ವಿಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಸರಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆಗಳಿಗೆ ಸಹಿಹಾಕಿಸುವ ಇಚ್ಛೆ.

ಎರಡು ವರ್ಷಗಳಿಗೊಮ್ಮೆ ಜರುಗುವ ಅಕ್ಕ ಸಮ್ಮೇಳನ ಈ ಬಾರಿ ನ್ಯೂಜರ್ಸಿಯ ಎಡಿಸನ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಪೂರ್ವ ಕರಾವಳಿಯಲ್ಲಿರುವ ಕೆಲವು ಕನ್ನಡ ಕೂಟಗಳ ಸಹಯೋಗದಲ್ಲಿ ನ್ಯೂಜರ್ಸಿಯ ಬೃಂದಾವನ ಕನ್ನಡ ಸಂಘ ಸಮ್ಮೇಳನ ನಡೆಸುವ ಜವಾಬ್ದಾರಿ ವಹಿಸಿಕೊಂಡಿದೆ. ಸಮ್ಮೇಳನಕ್ಕೆ ಮಧು ರಂಗಯ್ಯ, ಪ್ರಸನ್ನ ಕುಮಾರ್ ಮತ್ತು ಶಂಕರ್ ಶೆಟ್ಟಿ ಅವರನ್ನು ತ್ರಿಮೂರ್ತಿ ಸಂಯೋಜಕ ತಂಡವನ್ನಾಗಿ ರಚಿಸಲಾಗಿದೆ ಎಂದು ರವಿ ಹೇಳಿದರು.

2010ರ ಸೆಪ್ಟೆಂಬರ್ 3ರಿಂದ 5ರವರೆಗೆ ನಡೆಯಲಿರುವ ಸಮ್ಮೇಳನ ನಭೂತೋ ನಭವಿಷ್ಯತಿಃ ಎನಿಸಲಿದೆ. ಕನ್ನಡ ನೆಲದಿಂದ ಆಚೆ ನಡೆಯುವ ಅಭೂತಪೂರ್ವ ಕನ್ನಡಿಗರ ಕಲರವ ಎನಿಸಲಿದೆ. ಸಮ್ಮೇಳನಕ್ಕೆ ಸುಮಾರು 10,000 ಕನ್ನಡಿಗರನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ ಅಕ್ಕ ಅಧ್ಯಕ್ಷರು, ಸಮ್ಮೇಳನದ ಎಲ್ಲ ಇಲಾಖೆಗಳಿಗೆ ಸಮರ್ಥ ನುರಿತ ಸ್ವಯಂಸೇವಕರನ್ನು ಆರಿಸಲಾಗುತ್ತಿದ್ದು ಕಾರ್ಯಕ್ರಮದ ಯಶಸ್ಸಿಗೆ ತಂಡ ಅಹರ್ನಿಶಿ ದುಡಿಯಲು ಕಂಕಣಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕದಿಂದ ಗಣ್ಯರ ತಂಡ ಆಗಮಿಸುತ್ತದೆ, ನಿಜ. ಆದರೆ, ಸಮ್ಮೇಳನದ ಉದ್ಘಾಟನೆಯನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಂದ ಮಾಡಿಸಬೇಕೆಂದು ಪ್ರಯತ್ನಗಳು ನಡೆದಿವೆ. ಅಲ್ಲದೆ, ಸಮ್ಮೇಳನಕ್ಕೆ ಓರ್ವ ಬ್ರಾಂಡ್ ಅಂಬಾಸಿಡರ್ ಅನ್ನು ಗೊತ್ತು ಮಾಡಲು ನಿರ್ಧರಿಸಲಾಗಿದೆ ಎಂದು ರವಿ ಡಂಕನಿಕೋಟೆ ವಿವರಿಸಿದರು.

ಕರ್ನಾಟಕಲ್ಲಿದ್ದುಕೊಂಡು ಸಮ್ಮೇಳನ ಕೆಲಸ ಕಾರ್ಯಕ್ರಮಗಳ ಸಂಯೋಜನೆ ಮಾಡಲು ಮುಂಚಿನಂತೆ ಈ ಬಾರಿ ಒಬ್ಬ ವ್ಯಕ್ತಿ ಇರುವುದಿಲ್ಲ. ಈ ಉದ್ದೇಶಕ್ಕಾಗಿ ಭಾರತ ಸಂಯೋಜನಾ ಸಮಿತಿಯನ್ನು ಸದ್ಯದಲ್ಲೆ ರಚಿಸಲಾಗುತ್ತಿದ್ದು ಒಂದೊಂದು ವಿಭಾಗಕ್ಕೆ ಒಬ್ಬೊಬ್ಬ ಉಸ್ತುವಾರಿ ಸ್ವಯಂಸೇವಕರನ್ನು ಗೊತ್ತು ಮಾಡಲಾಗುವುದು. ಸಮಿತಿ ರಚನೆ ಆಗುವವರೆಗೆ ಅಕ್ಕ ಸಮ್ಮೇಳನ ಕುರಿತಂತೆ ಪತ್ರ ವ್ಯವಹಾರ, ಹೆಚ್ಚಿನ ವಿವರಗಳನ್ನು ತಿಳಿಯಬಯಸುವವರು ಅಕ್ಕ ಕಾರ್ಯದರ್ಶಿ ದಯಾಶಂಕರ ಅದಪ್ಪ ಅವರನ್ನು ಸಂಪರ್ಕಿಸಬಹುದೆಂದು ಅಧ್ಯಕ್ಷರು ತಿಳಿಸಿದರು. ದಯಾಶಂಕರ ಆದಪ್ಪ ಅವರ ಇ-ವಿಳಾಸ ಇಂತಿದೆ:[email protected] ಅಮೆರಿಕಾದ ದೂರವಾಣಿ : 248-471-6861 (ಮಿಚಿಗನ್ ಪ್ರಾಂತ್ಯ).

ಪತ್ರಿಕಾಗೋಷ್ಟಿಯಲ್ಲಿ ಅಕ್ಕ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಮರ್ ನಾಥ್ ಗೌಡ, ಮಧುರಂಗಯ್ಯ, ಶಂಕರ್ ಶೆಟ್ಟಿ, ದಯಾಶಂಕರ ಆದಪ್ಪ, ವೈಷ್ನವಿ ಶಂಕರ್, ಯಮುನಾ ಶ್ರೀನಿಧಿ, ಸಾಧನಾ ಶಂಕರ್, ರವಿ ಕೊಳ್ಳೇಗಾಲ, ಸುದೀಪ್ ಪಾರ್ಥಸಾರಥಿ, ಬೆನ್ ಕಾಂತರಾಜು, ಸಂಜಯ್ ರಾವ್, ನಾಗಶಂಕರ್,ಮಾದೇಶ್ ಬಸವರಾಜ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+