ಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆ

ಕರ್ನಾಟಕದಲ್ಲಿ ನಡೆಯುವ ರಾಜಕೀಯ ಮೇಳಗಳಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಲಾರಿ, ಮೆಟಡೋರ್, ಮತ್ತಿತರ ಸರಕು ಸಾಗಣೆ ವಾಹನಗಳಲ್ಲಿ ಮತಬಾಂಧವರನ್ನು ತುಂಬಿ ರವಾನಿಸುವ ರೀತಿ ಡೆಮೋಕ್ರಾಟಿಕ್ ಪಕ್ಷದವರೂ ಮಾಡಿದರೆ ಎಂಬ ಅನುಮಾನ ಬರುವಂತೆ ಇತ್ತು. ಆದರೆ, ಬೆಳಗ್ಗೆ ಬೆಳಗ್ಗೆನೇ ರೈಲುಗಳಲ್ಲಿ ಕೆಲವರು, ಕಾರಿನಲ್ಲಿ ಇನ್ನುಳಿದವರು, ಮತ್ತೆಕೆಲವರು ವಿಮಾನ ಮುಖಾಂತರ ಡಿಸಿ ಪ್ರದೇಶಕ್ಕೆ ಬಂದಿಳಿದರೆಂದು ಬಲ್ಲ ಮೂಲಗಳಿಂದ ಗೊತ್ತಾಯಿತು.
ಈಪಾಟಿ ಜನಸಂದಣಿಯನ್ನು ಕಂಡ ಅಧ್ಯಕ್ಷ ಪದವಿಗ್ರಹಣದ ಮೊದಲ ಸಮಾರಂಭವಿದು ಎಂಬ ಕೀರ್ತಿಗೆ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್ ಪಾತ್ರವಾಯಿತು. ಮಂಗಳವಾರ ಸಂಜೆ ಕೊರೆಯುವ ಚಳಿಯಲ್ಲಿ ಅಮೆರಿಕಾದ ರಾಜಧಾನಿ ಭಾರತದೋಪಾದಿಯಲ್ಲಿ ಕಾಣುತ್ತಿತ್ತು. ಏಕೆಂದರೆ, ಫಿಲಡಲ್ಫಿಯಾದಿಂದ ಸ್ಯಾನ್ ಡಿಯಾಗೋ ತನಕ ಎಲ್ಲಿಂದ ಎಲ್ಲಿಯವರೆಗೆ ಕಣ್ಣು ಹಾಯಿಸಿದರೂ ಜನ ಜನ ಜನ ಮತ್ತು ಜನ.
ಜಗತ್ತಿನಾದ್ಯಂತ ಇನ್ನುಳಿದ ಜನ ಈ ಕಾರ್ಯಕ್ರಮವನ್ನು ತಮ್ಮ ತಮ್ಮ ಬಣ್ಣದ ಹಾಗೂ ಕಪ್ಪು ಬಿಳುಪಿನ ಟಿವಿ ಸೆಟ್ಟುಗಳಲ್ಲಿ ನೋಡಿದರು. ಯಾರಿಗೆ ಏನೇನು ಅನ್ನಿಸಿತೋ ಗೊತ್ತಿಲ್ಲ. ಅಮೆರಿಕಾದ ಜನತಾಂತ್ರಿಕ ವ್ಯವಸ್ಥೆ, ಕಾರ್ಯಕ್ರಮ ವ್ಯವಸ್ಥೆಗೊಳಿಸುವ ವ್ಯವಸ್ಥೆ, ಸಾಮೂಹಿಕ ಹಾಗೂ ವ್ಯಕ್ತಿ ಶಿಸ್ತು ಪ್ರದರ್ಶನ ಕಂಡು ಕೆಲವರು ಬೆರಗಾದರು. ಕುಳಿತರೆ ನಿಂತರೆ ಅಮೆರಿಕ ದೇಶದ ನೀತಿ ನಿಲವುಗಳನ್ನು ಕಟುವಾಗಿ ಟೀಕಿಸುವ ಮಂದಿಗೆ ಈ ಕಾರ್ಯಕ್ರಮದ ನೇರಪ್ರಸಾರ ಇನ್ನಷ್ಟು ಹೊಸ ನಿಂದನಾ ಸರಕುಗಳನ್ನು ಕೊಟ್ಟಿರುವುದು ಗೊತ್ತಾಯಿತು.
ಇಡೀ ಸಮಾರಂಭದಲ್ಲಿ ಗಮನಸೆಳೆದೂ ಸೆಳೆಯದ ಒಂದೆರಡು ವಿಚಾರ ನಿಮಗೂ ಗೊತ್ತಿರಲಿ. ಪ್ರತಿಜ್ಞಾ ವಿಧಿ ಬೋಧಿಸಿಕೊಂಡ ಕೂಡಲೇ ಬರಾಕ್ ಒಬಾಮ ಮಾಜಿ ಅಧ್ಯಕ್ಷ ಬುಷ್ ಬಳಿ ಹೋಗಿ ಮಾತನಾಡಿದರು. ಅದು ಏನೆಂದು ಇಲ್ಲಿ ಕುಳಿತ ನಮಗೆ ಹೇಗೆ ಕೇಳಿಸಬೇಕು? ಆದರೆ, ತುಟಿ ಚಲನೆಯಿಂದಲೇ ಸಂಭಾಷಣೆಯ ಜಾಡು ಹಿಡಿಯುವ ತಜ್ಞರ ಪ್ರಕಾರ ಒಬಾಮ ಹೇಳಿದ್ದು "You OK?"
ಒಬಾಮರ ಪ್ರಶ್ನೆಗೆ ಬುಷ್ ಲಿಮಿಟೆಡ್ ಉತ್ತರ ಕೊಟ್ಟರು. ದಿ ಸನ್ ಪತ್ರಿಕೆಯ ತುಟಿಪಿಟುಕುಗಳನ್ನು ಗ್ರಹಿಸುವ ವರದಿಗಾರನ ಪ್ರಕಾರ ಬುಷ್ ಉತ್ತರಿಸಿದ್ದು ಎರಡೇ ಪದ "So relieved." ಆನಂತರ ಜಾರ್ಜ್ ಡಬ್ಲ್ಯೂ ಬುಷ್ ಅವರು ಅಧಿಕಾರವನ್ನು ಹಸ್ತಾಂತರ ಮಾಡುವ ಔಪಚಾರಿಕ ವಿಧಿಗಳನ್ನು ವಿದ್ಯುಕ್ತವಾಗಿ ಪೂರೈಸಿದರು. ಶ್ವೇತಭವನದ ಕೀಲಿ ಕೈ ಕೊಡುವಾಗಲಂತೂ ಬುಷ್ (ಒಳಗೊಳಗೇ ಗದ್ಗತಿತರಾಗಿ) "It's all yours now - good luck." ಎಂದರು.
ಪ್ರತಿಭೆ ಮತ್ತು ಸ್ಫೂರ್ತಿಭರಿತ ಭಾಷಣವನ್ನು ನಿರರ್ಗಳವಾಗಿ ಹರಿಸುವ ಒಬಾಮರ ಮೊದಲ ಭಾಷಣದ ವಿಶೇಷಣವೆಂದರೆ ಅಲ್ಲಿ ಪುನರುಕ್ತಿಗಳು ಇರಲಿಲ್ಲ. ಬುಷ್ ಮಹಾಶಯನಿಗಿಂತ ಒಳ್ಳೆಯ ಇಂಗ್ಲಿಷ್ ಸ್ಕೂಲಿನಲ್ಲಿ ಓದಿರಬಹುದೆಂಬ ಅನುಮಾನ ಬಂದಿತು. ಇತ್ತ, ಲಕ್ಷಾಂತರ ಜನ ಅಪ್ಪನ ಭಾಷಣಕ್ಕೆ ಪ್ರತಿಯಾಗಿ ಹರ್ಷೋದ್ಗಾರಗಳನ್ನು ಮಾಡುತ್ತಿದ್ದರೆ ಒಬಾಮನ ಮೊದಲ ಮಗಳು ಸಾಶಾ ಮಾತ್ರ - dad: "That was a good speech, perfect." ಎಂದು ಹೇಳಿದಳೆಂದು ತುಟಿಚಲನವಲನ ತಜ್ಞರ ವಿಶ್ಲೇಷಣೆಯಿಂದ ಮನವರಿಕೆಯಾಯಿತು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications