ಚೀನಾ ಹೊಸವರ್ಷದಲ್ಲಿ ಕೋತಿಗಳು ಸಾರ್ ಕೋತಿಗಳು !
ಈ ವರುಷದ ಸಂಕೇತ ‘ಕೋತಿ’. ಚತುರತೆ, ಜೀವನ ಶಕ್ತಿ, ಬಲ, ತೀಕ್ಷ್ಣ ಬುದ್ಧಿಗೆ ಕೋತಿಯಾಂದು ಸಂಕೇತ. ಈ ವರುಷ ಬಂದಿರುವ ‘ಕೋತಿ’ ಎಲ್ಲರಿಗೂ ಹರುಷ ತರುತ್ತದೆ ಎಂಬುದು ಅವರ ನಂಬಿಕೆ. ಈ ವರುಷದಲ್ಲಿ ಹುಟ್ಟುವ ಮಕ್ಕಳು ‘ಮರ್ಕಟ’ ನಂತೆ ಬಹಳ ಬುದ್ಧಿವಂತರು, ತುಂಟರು ಆಗುವರೆಂದು ಕೂಡ ಒಂದು ನಂಬಿಕೆ.
ಚೀನಿಯರ ಜ್ಯೋತಿಷ್ಯದ ಪ್ರಕಾರ ಕೋತಿಯಂತೆಯೇ ಈ ವರುಷ ಎಲ್ಲರಲ್ಲೂ ತುಂಟತನದ ಪ್ರಭಾವ ಹೆಚ್ಚು. ಚತುರತೆ ಮತ್ತು ಕುಟಿಲೋಪಾಯದಿಂದ ನಿಂತು ಹೋದ ಕಾರ್ಯಕಲಾಪಗಳು ಶಾಂತಿಯಿಂದ ಮುಗಿಯುತ್ತವೆ ಎಂದು ಚೀನಿಯರು ಹೇಳುತ್ತಾರೆ.
ಮನೆಯ ಹಿರಿಯ ಕಿರಿಯರೆಲ್ಲರೂ ಕೂಡಿ ಹಬ್ಬದ ಹಿಂದಿನ ರಾತ್ರಿ ದೊಡ್ಡ ಔತಣ ಮಾಡಿ ಸಂಭ್ರಮಿಸುತ್ತಾರೆ. ಊಟವಾದ ಮೇಲೆ ಚಿಕ್ಕವರು ಹಿರಿಯರು ನೀಡುವ ಕೆಂಪು ಬಣ್ಣದ ‘ಹಾಂಗ್ ಬಾವ್’ (ಜಟ್ಞಜ ಚಿಚಟ) ಪೊಟ್ಟಣಗಳಿಗಾಗಿ ಕಾಯುತ್ತಾರೆ. ಈ ಪೊಟ್ಟಣಗಳು ಮದುವೆ ಆಗದಿರುವ ಯುವಕ ಯುವತಿಯರಿಗಾಗಿ ಮತ್ತು ಚಿಕ್ಕ ಮಕ್ಕಳಿಗಾಗಿ ಮೀಸಲು. ‘ ಕೆಂಪು ಪೊಟ್ಟಣಗಳು ಗರಿ ಗರಿಯಾದ ನೋಟುಗಳು’ ಎಷ್ಟು ಚೆನ್ನ ಅಲ್ಲವೇ? ಕೀಟಲೆಗಾಗಿ ಮಕ್ಕಳು ‘ಗಾಂಗ್ ಸೀ ಫಾ ಚಾಯ್, ಹಾಂಗ್ ಬಾವ್ ನ ಲಯ್’( ಹೊಸವರುಷದ ಶುಭಾಶಯಗಳು, ಕೈಗೆ ಕೊಡಿ ಹಾಂಗ್ ಬಾವ್ ಪೊಟ್ಟಣಗಳು ಎಂದು ಹೇಳುತ್ತಾರೆ). ಈ ಪೊಟ್ಟಣಗಳಲ್ಲಿ ಸಮ ಸಂಖ್ಯೆಗಳಲ್ಲಿ ಹಣ ಇಟ್ಟಿರುತ್ತಾರೆ. ಎಲ್ಲೆಡೆ ಕಿತ್ತಳೆ, ಪಾಲಕ್, ಕಡಲೆಕಾಯಿ, ಗೋಡಂಬಿ, ಚಿಕ್ಕಿಗಳ ರಾಶಿಯೋ ರಾಶಿ. ಈ ಪದಾರ್ಥಗಳು ಹಬ್ಬದ ಸಂದರ್ಭದ ಶುಭ ಸಂಕೇತಗಳು.
ಈ ವರುಷದ ಆರಂಭದಲ್ಲಿಯೇ ಹೆಚ್ಚು ಮಾರಾಟವಾಗುತ್ತಿರುವ ಸರುಕು ಏನು ಗೊತ್ತೇ ‘ಕೋತಿ’ ಯ ಚಿತ್ರವಿರುವ ಒಳಚಡ್ಡಿಗಳು. ಚೀನ, ಸಿಂಗಾಪುರ, ತೈವಾನ್, ಮಲೇಷಿಯಾಗಳಲ್ಲಿ ಈ ಒಳಚಡ್ಡಿಗಳ ಮಾರಾಟ ಹೆಚ್ಚು ಲಾಭವನ್ನು ತಂದಿವೆ.
ನಾವು ಕೂಡ ಇವರೊಂದಿಗೆ ಸೇರಿ ‘ಗಾಂಗ್ ಸಿ ಫಾ ಚಾಯ್’ (Gong xi fa cai) ಹೊಸವರುಷದ ಶುಭಾಶಯಗಳು ತಿಳಿಸೋಣವೇ?
ಇಂಡಿಯಾ ಚೀನಾ ಭಾಯ್ ಭಾಯ್!!
ಓದಿ : Taboos and Superstitions of Chinese New Year
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications