ಉತ್ತ ರ ಅಮೆರಿಕ ವೀರಶೈವ ಸಮ್ಮೇಳನ-2004 : ದಿವಸ-2
ಬಸವೇಶ್ವರ ಮತ್ತು ವಚನ ಸಾಹಿತ್ಯಕ್ಕೆ ಪೂಜೆ, ಪ್ರಾರ್ಥನೆ ಹಾಗು ಬಸವನ ಜ್ಯೋತಿ ಬೆಳಗುತಿದೆ ಎಂಬ ಸಮೂಹ ಗೀತೆಯಾಂದಿಗೆ ಭಾನುವಾರದ ಸಮ್ಮೇಳನಕ್ಕೆ ಶುಭಾರಂಭ ದೊರೆಯಿತು. ಅಧ್ಯಕ್ಷ ರವಿ ಬೋಪಲಾಪುರ ಹಾಗೂ ಇತರ ಮುಖಂಡರು ಸಮಾಜ ಉನ್ನತಿಯ ಬಗ್ಗೆ ಮಾತನಾಡಿದರು.
ಯುವಶಕ್ತಿ ನಿಶಾಂತ ಪಾಟೀಲ, ಪ್ರೀತ ಗೌಡರ, ಅನು ಮಾಲಿಪಾಟೀಲ, ಮಿನುತ ಮಹದೇವಯ್ಯ ಅಮೇರಿಕಾದಲ್ಲಿ ಬಸವತತ್ವಗಳನ್ನು ಮುಂದಿನ ಜನಾಂಗ ಹೇಗೆ ಬೆಳೆಸುತ್ತದೆ? ಧರ್ಮದ ಬಗ್ಗೆ ಅವರ ವಿಚಾರವೇನು? ದಿನನಿತ್ಯ ಶಾಲೆ, ಕಾಲೇಜು ಹಾಗೂ ಸಮಾಜದಲ್ಲಿ ಅವರು ಅನುಭವಿಸುವ ತೊಂದರೆಗಳೇನು? ಇತ್ಯಾದಿ ಚರ್ಚಿಸಿದರು. ಪ್ರತಿವಾರ ನಾವು ದೇವಸ್ಥಾನಕ್ಕೆ ಹೋಗಬಹುದು, ಹೋಗದೇ ಇರಲೂಬಹುದು, ಕೆಲವೊಮ್ಮೆ ನಾವು ಲಿಂಗಪೂಜೆ ಸಾಧ್ಯವಾದಾಗಷ್ಟೆ ಮಾಡಿಕೊಳ್ಳುತ್ತೇವೆ. ಆದರೆ ಒಣ ಆಡಂಬರದ ಸೋಗಿಲ್ಲದೇ, ಬಸವಣ್ಣನವರ ತತ್ವಗಳನ್ನು ಪಾಲಿಸಲು ಬದ್ಧರಾಗಿದ್ದೇವೆ. ಯುವಕರ ನೇರ, ಸತ್ಯ, ನಿಷ್ಠುರವಾದ ಮಾತು- ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂಬಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮುಖ್ಯ ಅತಿಥಿ ರೇವಣಸಿದ್ಧಯ್ಯನವರು (ಕರ್ನಾಟಕದ ನಿವೃತ್ತ ಪೋಲಿಸ ಮಹಾನಿರ್ದೇಶಕರು)- ಗಿಡದ ಬುಡಕ್ಕೆ ನೀರೆರೆದರೆ ಉತ್ತಮ ಫಲವನ್ನು ಮೇಲೆ ನೋಡಬಹುದು ಎಂದರು. ಇಂದಿನ ಯುವ ಜನಾಂಗ ಮತ್ತು ವಚನಗಳ ಸಾರವನ್ನು ತಮ್ಮ ವೃತ್ತಿಯ ಉದಾಹರಣೆಗಳೊಂದಿಗೆ ಮನವರಿಕೆ ಮಾಡಿದರು. ದೇಶ ಬಿಟ್ಟು ಬಂದರು ನಮ್ಮ ಸಂಸ್ಕೃತಿಯನ್ನು ಮರೆಯದೆ ಪಾಲಿಸುತ್ತಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಶ್ರೀ ಸದ್ಗುರು ಜಗ್ಗಿ ವಾಸುದೇವ ಸ್ವಾಮೀಜಿಯವರು ‘ಅಂತರಂಗ ಶುದ್ಧಿ ಜ್ಞಾನ ಮತ್ತು ಯುವಶಕ್ತಿ’ ಎಂಬ ವಿಷಯದ ಮೇಲೆ ಭಾಷಣಮಾಡಿದರು. ಯುವಶಕ್ತಿ ನಮ್ಮ ಮುಂದಿನ ಕನಸುಗಳನ್ನು ಹೇಗೆ ಸಾಕಾರ ಗೊಳಿಸಬಲ್ಲದು ಎಂಬುದನ್ನು ತಮ್ಮ ಆಧ್ಯಾತ್ಮಿಕ ಚೌಕಟ್ಟಿನೊಳಗೆ, ಪಾಶ್ಚಾತ್ಯತೆಯಾಂದಿಗೆ ಹೋಲಿಸಿ ಉದಾಹರಿಸಿದರು.
ಮಧ್ಯಾಹ್ನದ ಮೃಷ್ಟಾನ್ನ ಭೋಜನದ ನಂತರ ವ್ಯಕ್ತಿತ್ವ-ವಿಕಸನಕ್ಕೆಂದು ಆಯೋಜಿಸಿದ್ದ ಆರೋಗ್ಯ, ಪರ್ಯಾಯ ವೃತ್ತಿಗಳು (Alternative careers,) ಸಂಪರ್ಕ (Networking), ವ್ಯವಹಾರ Business Planning) ಇತ್ಯಾದಿ ಗೋಷ್ಠಿಗಳು ಸಮ್ಮೇಳನದ ಆಕರ್ಷಣೆಯಾಗಿತ್ತು. ಉದ್ಯಮಿಗಳಾದ ನಾಗ ಮನೋಹರ, ಸತೀಶ ಕುಮಾರ, ಕಿಣಿ, ಸುಚಿತಾ, ಡಾ. ಧರ್ಮರಾಜ, ಡಾ. ಗುರು ಮೊಟಗಿ ತಮ್ಮ ಅನುಭವ ಹಂಚಿಕೊಂಡರು.
ಜನಾಂಗ ಸೇತುವೆ : (Bridging the Gap) ಪಾಲಕರು ಮತ್ತು ಮಕ್ಕಳ ನಡುವೆ ಹೊರನಾಡಿನಲ್ಲಿ ಉದ್ಭವಿಸುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸಂವಾದ ಮನರಂಜನೆಯ ಜೊತೆಗೆ ಯುವಕ - ಪಾಲಕರನ್ನು ಹತ್ತಿರ ತಂದಿತ್ತು. ಆಲೀವ ಗಾರ್ಡನಗೆ (Italian Resaurants) ಹೋಗಲೇಬೇಕೆಂಬುವ ಮಗಳ ಹಠಕ್ಕೆ ಅಮೇರಿಕಾದಲ್ಲಿರುವ ಅಮ್ಮ ಹೇಳೋದು ‘ನಾವೆಲ್ಲಾ ಸಮಾಜದಲ್ಲಿ ಮೇಲೆ ಬರಲು ರಾಗಿ ಮುದ್ದೆ, ತಿಳಿಸಾರು ಸಾಕಾಯ್ತು . ನಿನಗೇನು? ಮನೆಯಲ್ಲೆ ಊಟಮಾಡು’ ಎನ್ನುವ ಉಪದೇಶ.
ಅನುಭವ ಗೋಷ್ಠಿ ಸಂವಾದದಲ್ಲಿ ರಂಜನ ರಾಜ ಹಾಗು ಸಜ್ಜನ ಶಿವ ರವರು ಶರಣರ ಮತ್ತೊಂದು ಕ್ರಾಂತಿಯಾದ ‘ದಾಸೋಹ ’ ದ ಬಗ್ಗೆ ಗಂಭೀರ ಚಿಂತನೆ ಮಾಡಿದರು. ದಾಸೋಹ ಎಂಬುದು ಸಾಂಕೇತಿಕವಾಗಿ ಹಸಿದವರಿಗೆ ಉಣಬಡಿಸುವುದಾದರೂ ಜ್ಞಾನ ದಾಸೋಹ, ವಿದ್ಯಾದಾಸೋಹ ಇತ್ಯಾದಿಗಳು ಕೂಡ ಅಷ್ಟೇ ಮುಖ್ಯವಾದವು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ಸಮಾಜ ಸೇವೆ, ಅದುವೆ ನಿಜವಾದ ದಾಸೋಹ ಎಂದರು.
ಸಂಜೆಯ ತಿಂಡಿ-ಚಹಾದ ಜೊತೆಗೆ ಮತ್ತೊಂದು ಸಂತೋಷಭರಿತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾತರದಿಂದ ಅಣಿಯಾದೆವು. ಲಿಂಗಾಷ್ಟಕದ ವಚನ ನೃತ್ಯ, ಧಾರಾ, ರೂಪಾ ಅವರ ಹಿಂದಿ ನೃತ್ಯ, ಪಿಟ್ಸಬರ್ಗ, ಒಹಾಯೋ ದವರ ಭರತನಾಟ್ಯ, ಸಂಗೀತಾ ಸಂಗಡಿಗರ ಮರಾಠಿಯ ‘ ಕೋನ್ಯ ಗವಾಚಾ ಆಲಾ ಪಖಾರು’ ನೃತ್ಯ ಪ್ರೇಕ್ಷಕರ ಆನಂದವನ್ನು ಇಮ್ಮಡಿಸಿತ್ತು. ಯುವಕರ ಕನ್ನಡ ನೃತ್ಯ, ಫ್ಲೋರಿಡಾದವರ ಕನ್ನಡ ಹಾಡುಗಳು ಕಿವಿಗೆ ತಂಪನೆರೆದಿತ್ತು .
ಇಗೋ ಬಂತು ನೋಡಿ ‘ಬಸವ Bible’ ಎಂಬ ಬಿಡಿಸಲಾಗದ ಗಂಟು. Thou shalt not steal, thou shalt not kill - ಕಳಬೇಡ, ಕೊಲಬೇಡ ’ ಎಂದು ಭವ್ಯಸಭಾ ಭವನದಲ್ಲಿ ಜೋರಾಗಿ ಕೂಗಿದಾಗ ಎಲ್ಲರೂ ‘ಎತ್ತಣಿಂದತ್ತ ಸಂಬಂಧವಯ್ಯ’ ಎಂದು ಆಶ್ಚರ್ಯದಿಂದ ನೋಡಿದೆವು. 12ನೇ ಶತಮಾನದ ವಚನಗಳ ಸಾರವನ್ನು ಹೇಗೆ ‘10 Commandments’ ಅಳವಡಿಸಿಕೊಂಡಿದೆ ಎಂಬ ನಾಟಕವನ್ನು ಮನೋಹರ ಮಾಲೀಪಾಟೀಲ ಸಂಗಡಿಗರು ಮನ ಮೆಚ್ಚುವಂತೆ ಅಭಿನಯಿಸಿದರು. ಮೈಸೂರಿನ ಸೋಮಶೇಖರರ ನಾಟಕವನ್ನು ಸುಧೀರ ನಿರ್ದೇಶಿಸಿದರು. ಸಾಂಕೇತಿಕವಾಗಿ ಬಸವ ಜ್ಯೋತಿಯನ್ನು ಹಳೆಯ ತಲೆಮಾರಿನ ಜನಾಂಗ ಯುವಕರಿಗೆ ನೀಡುವುದರೊಂದಿಗೆ ಸಮ್ಮೇಳನದ ಉದ್ದೇಶವನ್ನು ಅರ್ಥಪೂರ್ಣವಾಗಿ ವಿವರಿಸಲಾಯಿತು.
ಮುಕ್ತಾಯದ ವಿಶೇಷ ಭೋಜನದೊಂದಿಗೆ, ಪಾರಿತೋಷಕ ವಿತರಣೆ, ಒಬ್ಬರಿಗೊಬ್ಬರು ಸಂಪರ್ಕಿಸುವ ವಿಳಾಸ ಹಂಚಿಕೊಳ್ಳುವುದು ವಿಶೇಷ ದೃಶ್ಯವಾಗಿತ್ತು . ಸಂಗಿತಾ ಕಟ್ಟಿಯವರ ಸುಮಧುರವಾದ ವಚನಗಳು ಹಾಗೂ ಮರಾಠಿ ಭಜನೆ- 2005 ರ ಜುಲೈ 2-3 ರಂದು ಮೇರಿಲ್ಯಾಂಡ್ನಲ್ಲಿ ನಡೆಯಲಿರುವ 28ನೇ ವೀರಶೈವ ಸಮ್ಮೇಳನಕ್ಕೆ ಆಹ್ವಾನದಂತಿತ್ತು.
ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಅನ್ನಿಸಿದ್ದು- ಶರಣರ ಸಂಗ ಹೆಜ್ಜೇನು ಸವಿದಂತೆ !
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications